ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳುವ ಹೆದ್ದಾರಿಗಳ ಪಕ್ಕದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ಗಳು ಹೆಚ್ಚಾಗಿದ್ದು, ಸುತ್ತಮುತ್ತಲಿನ ಕೃಷಿ ಭೂಮಿಗಳಿಗೆ ಪ್ಲಾಸ್ಟಿಕ್ ಮತ್ತು ಗಾಜಿನ ಬಾಟಲಿಗಳ ತ್ಯಾಜ್ಯದ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ರೈತರು ಕಂಗಾಲಾಗಿದ್ದಾನೆ.
ಗಾಜಿನ ಚೂರುಗಳು ಮಣ್ಣಿನಲ್ಲಿ ಸೇರಿ ಬೆಳೆಗಳ ಬೇರುಗಳಿಗೆ ಹಾನಿ ಮಾಡುತ್ತವೆ. ಪ್ಲಾಸ್ಟಿಕ್ ತ್ಯಾಜ್ಯಗಳು ಕರಗದೆ ಮಣ್ಣಿನ ಫಲವತ್ತತೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತವೆ.ಕಸದ ರಾಶಿಯಿಂದಾಗಿ ಮಳೆನೀರು ಭೂಮಿಯ ಆಳಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ.ಮೇವು ಮೇಯುವಾಗ ಗಾಜಿನ ಚೂರುಗಳು ಜಾನುವಾರುಗಳಿಗೆ ಬಾಯಿಗೆ ಸಿಲುಕಿ ಪ್ರಾಣಾಪಾಯ ಸಂಭವಿಸಬಹುದು. ಹಾಗು ಪ್ಲಾಸ್ಟಿಕ್ ಹೊಟ್ಟೆಗೆ ಸೇರಿ ಹಸು, ಎಮ್ಮೆಗಳು ಸಾವನ್ನಪ್ಪಬಹುದು.ಮತ್ತು ರೈತರು ಹೊಲಗಳಲ್ಲಿ ಉಳುಮೆ ಮಾಡುವಾಗ ಅಥವಾ ಕಳೆ ಕೀಳುವಾಗ ಗಾಜಿನ ಚೂರುಗಳು ಚುಚ್ಚಿ ರೈತರ ಕೈಕಾಲುಗಳಿಗೆ ಹಾನಿಯಾಗುತ್ತವೆ ಎಂದು ರೈತ ಮಂಂಜುನಾಥ ತನ್ನ ಆಳಲು ತೋಡಿಕೊಂಡಿದ್ದಾನೆ. ಇದ್ದಕ್ಕೆ ಸಂಬಂದ ಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.
“ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯ ಕೂಗಳೆ ದೂರದಲ್ಲಿದ್ದು ಹೆದ್ದಾರಿ ಬದಿಯಲ್ಲಿ ಬಾರ್ಗಳು (ಮದ್ಯದಂಗಡಿಗಳು) ಪ್ರಾರಂಭವಾಗುವುದರಿಂದ ರಸ್ತೆ ಸುರಕ್ಷತೆಗೆ ಭಾರಿ ಧಕ್ಕೆಯುಂಟಾಗುವುದಲ್ಲದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಹೆಚ್ಚಾಗಿ ಅಪಘಾತಗಳಿಗೆ ಕಾರಣವಾಗಿದೆ. ಬಾರ್ಗಳ ಸುತ್ತಮುತ್ತಲಿನ ವಾತಾವರಣವು ಕಲುಷಿತಗೊಂಡಿದ್ದು ಈ ರಸ್ತೆಗಳಲ್ಲಿ ಸ್ಥಳೀಯ ಮಹಿಳೆಯರು ಮತ್ತು ಮಕ್ಕಳಿಗೆ ಸಂಚರಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ. ಮದ್ಯದ ಅಮಲಿನಲ್ಲಿ ಗಲಾಟೆ, ಜಗಳಗಳು ನಡೆದು ಸಾರ್ವಜನಿಕರಿಗೆ ಕಿರುಕುಳಕ್ಕೆ ಕಾರಣವಾಗಿದೆ”.
ಆನಂದ್ ಕುಮಾರ್, ಗ್ರಾಪಂ ಮಾಜಿ ಸದಸ್ಯ ಹಾಡೋನಹಳ್ಳಿ.



