ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಮೆಳೇಕೋಟೆ ಕ್ರಾಸ್ನಲ್ಲಿರುವ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಗ್ರಾಮಾಂತರ ಪ್ರೌಢಶಾಲೆಯ 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಶಾಲೆಯು ಶೇ.100 ಫಲಿತಾಂಶ ಪಡೆದಿದೆ.
ಕುಮಾರಿ ತೇಜಸ್ವಿನಿ.ಎಮ್ 625 ಕ್ಕೆ 620 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕುಮಾರಿ ಚಾರ್ಮಿ.ಎಮ್, ನಂದಕುಮಾರ್.ಟಿ.ಎನ್ ಹಾಗೂ ನಿಶ್ಚಯ್ ಗೌಡ 616 ಅಂಕಗಳನ್ನು ಮತ್ತು ಕುಮಾರಿ ಐಸಿರಿಗೌಡ.ಎ.ವಿ, ಮೇಘನ.ಆರ್.ಎಮ್ 615 ಅಂಕಗಳನ್ನು ಪಡೆದಿರುತ್ತಾರೆ.
ಒಟ್ಟು 89 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, A+ ಶ್ರೇಣಿ 47 ವಿದ್ಯಾರ್ಥಿಗಳು, A ಶ್ರೇಣಿ 33 ವಿದ್ಯಾರ್ಥಿಗಳು, B+ ಶ್ರೇಣಿ 8 ವಿದ್ಯಾರ್ಥಿಗಳು ಹಾಗೂ B ಶ್ರೇಣಿ 01 ವಿದ್ಯಾರ್ಥಿಯು ಪಡೆದಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳಿಗೆ ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿಯವರು ಹಾಗೂ ಮುಖ್ಯ ಆಡಳಿತಾಧಿಕಾರಿ ಶಾಲೆಯ ಡಾ.ಎನ್.ಶಿವರಾಮರೆಡ್ಡಿ ಮುಖ್ಯೋಪಾದ್ಯಾಯ ಹೆಚ್.ಎಲ್.ವಿಜಯಕುಮಾರ್ ರವರು ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿರುತ್ತಾರೆ.


