ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ "ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ" ಕಾರ್ಯಕ್ರಮದಲ್ಲಿ ಕುಮಾರಿ ಮಾನ್ಯ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ ಪಠಣ,
ಶ್ರೀರಾಮಕೃಷ್ಣರ ನಾಮಸ್ಮರಣೆ, ಗಾಯತ್ರಿ ಮಂತ್ರ ಪಠಣ, ಶ್ರೀಮದ್ ಭಗವದ್ಗೀತೆಯ "ಭಕ್ತಿಯೋಗ"ದ ಶ್ಲೋಕಗಳ ಕಲಿಕೆ, ಭಜನೆ ಹಾಗೂ ಚೇತನ್ ಕುಮಾರ್ ಅವರಿಂದ "ನಮ್ಮ ಹೆಮ್ಮೆಯ ಪರಂಪರೆ" ಉಪನ್ಯಾಸ ಕಾರ್ಯಕ್ರಮ ನಡೆಯಿತು.
Also read
ಕಾರ್ಯಕ್ರಮದಲ್ಲಿ ಸಂತೋಷ್, ಯತೀಶ್ ಎಂ ಸಿದ್ದಾಪುರ, ಕುಸುಮ,ಲಕ್ಷ್ಮೀ, ಯಶಸ್,ವಿನತಿ, ವಿವಿಕ್ತ, ಚರಣ್ಯ, ಸಹನಾ,ಚಿರಣ್ಯ,ಶುಕ್ತಿಜಾ, ವಿವೇಕ್,ಭಾವನಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.



