LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

TAPCMS ವಾರ್ಷಿಕ ಮಹಾಸಭೆ—ಅಭಿವೃದ್ಧಿ ಕಾರ್ಯಗಳ ವಿವರಣೆ ನೀಡಿದ ಅಧ್ಯಕ್ಷ ಎಸ್.ಜೆ ಹನುಮಂತರಾಯ ಶ್ರವಣಗೆರೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
​ಹಿರಿಯೂರಿನ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (
TAPCMS) ಸರ್ವಸದಸ್ಯರ ವಾರ್ಷಿಕ ಮಹಾಸಭೆಯು ನಗರದ ಗುರುಭವನದಲ್ಲಿ ಅಧ್ಯಕ್ಷರಾದ ಎಸ್.ಜೆ. ಹನುಮಂತರಾಯ ಶ್ರವಣಗೆರೆ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರು, ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ನಂತರ ಸಂಸ್ಥೆಯು ಸಾಧಿಸಿರುವ ವಿವಿಧ ಪ್ರಗತಿಪರ ಹೆಜ್ಜೆಗಳನ್ನು ಹಂಚಿಕೊಂಡರು:

​ಸಂಸ್ಥೆಯ ವಹಿವಾಟು ಮತ್ತು ಹೂಡಿಕೆಗಳು:
​ರಸಗೊಬ್ಬರ ವಹಿವಾಟು: ರೈತರ ಅನುಕೂಲಕ್ಕಾಗಿ ಪ್ರತಿ ವರ್ಷ 50 ಲಕ್ಷದಿಂದ 1 ಕೋಟಿವರೆಗೂ ರಸಗೊಬ್ಬರ ವಹಿವಾಟು ನಡೆಸಲಾಗುತ್ತಿದೆ.

​ಷೇರು ಹೂಡಿಕೆ ಮತ್ತು ಡಿವಿಡೆಂಡ್:
​ಇಫDist/IFFCO (ನವದೆಹಲಿ): 10 ಲಕ್ಷ ಷೇರು ವರ್ಷಕ್ಕೆ 2 ಲಕ್ಷ ಡಿವಿಡೆಂಡ್.
​NAFED (ನವದೆಹಲಿ): 1 ಲಕ್ಷ ಷೇರು ವರ್ಷಕ್ಕೆ 20 ಸಾವಿರ ಡಿವಿಡೆಂಡ್.
​KSCMF (ಬೆಂಗಳೂರು): 5 ಲಕ್ಷ ಷೇರು ವರ್ಷಕ್ಕೆ 1 ಲಕ್ಷ ಡಿವಿಡೆಂಡ್.

​ವಿಮಾ ಸಹಕಾರ ಸಂಘ (ಬೆಂಗಳೂರು) ಹಾಗೂ ಇತರ ಸಂಸ್ಥೆಗಳಲ್ಲಿ ಷೇರು ಹೂಡಿಕೆ.
​ಇ-ಸ್ಟಾಂಪ್ ಕೇಂದ್ರ: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಲ್ಲಿ 50,000 ಭದ್ರತಾ ಠೇವಣಿ ಇಟ್ಟು ಈ-ಸ್ಟಾಂಪ್ ವಿತರಣಾ ಶಾಖೆ ತೆರೆಯಲು ಕ್ರಮ ವಹಿಸಲಾಗಿದೆ.

​ಅನುದಾನ: ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ 92 ಲಕ್ಷ ಸಹಾಯಧನ ತರಲಾಗಿದೆ.
​ಅಭಿವೃದ್ಧಿ ಕಾಮಗಾರಿಗಳು
65 ಲಕ್ಷ ವೆಚ್ಚದಲ್ಲಿ 13 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಎಲ್ಲಾ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ.

​ಪ್ರಥಮ ಮಹಡಿಯಲ್ಲಿ 77 ಲಕ್ಷ ಅಂದಾಜು ವೆಚ್ಚದಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಮಂಜೂರಾತಿ ಸಿಕ್ಕಿದ್ದು, ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮೂಲಕ ಕಾಮಗಾರಿ ಪ್ರಾರಂಭವಾಗಿದೆ. ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.

​ವರ್ಷಾವಾರು ಲಾಭಾಂಶದ ವಿವರ (2021-2026)
​2021-22:
35,000, ​2022-23: 41,000, ​2023-24: 1,12,000, ​2024-25: 2,06,000, ​2025-26: 1,22,000.

​ಸಭೆಯಲ್ಲಿ ಉಪಾಧ್ಯಕ್ಷ ಕೆ. ಅನಿತ ಮಹೇಶ್, ನಿರ್ದೇಶಕರಾದ ಎನ್.ಆರ್. ಲಕ್ಷ್ಮೀಕಾಂತ್, ಟಿ. ಗಿರಿಸ್ವಾಮಿ, ವಿ. ವೀರಣ್ಣ, ಆರ್. ಲೋಕೇಶ್ ಗೌಡ, ಜಿ. ತಿಪ್ಪೇಸ್ವಾಮಿ, ಭಾಗ್ಯಮ್ಮ ಹನುಮಂತರಾಯ, ಎಸ್. ದೇವರಾಜ್, ಆರ್. ಶ್ರೀಧರ್, ವಿ. ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮಂಜುನಾಥ್ ಹೆಚ್. ಸೇರಿದಂತೆ ವಿವಿಧ ಮುಖಂಡರು ಹಾಗೂ ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನರಕಸದೃಶ ಬದುಕು - ಚರಂಡಿ ನೀರೆಲ್ಲಾ ರಸ್ತೆಗೆ!, ಸ್ವಚ್ಛತೆ ಇಲ್ಲದ ಊರು, ರೋಗಗಳ ತವರು!ಆ.22 ರಾಜ್ಯ ಮಟ್ಟದ ಕನ್ನಡ ಕರೋಕೆ ಸ್ಪರ್ಧೆ, ಆ.23ರಂದು ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆಪೋಷಕರ ಸಹಕಾರದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ : ರೈತ ಮುಖಂಡ ಮಹೇಶ್ವರಪ್ಪಪರಿಸರ ಮತ್ತು ಆಧ್ಯಾತ್ಮದ ಸಮನ್ವಯದ 'ನಾಗರ ಪಂಚಮಿ':ಬೆಂಗಳೂರಿನಲ್ಲಿ ಏಷ್ಯಾದ ಅತಿ ದೊಡ್ಡ 'ಕ್ವಾಂಟಮ್ ಫೌಂಡ್ರಿ' ಉದ್ಘಾಟಿಸಿದ ಸಚಿವ ಪ್ರಿಯಾಂಕ್ ಖರ್ಗೆಕಾಂಗ್ರೆಸ್ ಗ್ಯಾರಂಟಿ ಹೆಸರಲ್ಲಿ ಕನ್ನಡಿಗರ ಜೇಬಿಗೆ ಕನ್ನ: ಜೆಡಿಎಸ್ ತೀವ್ರ ಆಕ್ರೋಶಉಪಸಭಾಪತಿ ಹಾಗೂ ಉಪಸಭಾಧ್ಯಕ್ಷರ ಸ್ಥಾನಕ್ಕೆ ಉಮಾಶ್ರೀ ಮತ್ತು ಮಂಕಾಳ ವೈದ್ಯ ನಾಮಪತ್ರ ಸಲ್ಲಿಕೆಸಚಿವ ನಾಗೇಂದ್ರ ರಾಜೀನಾಮೆಗೆ ಪಟ್ಟು: ಪರಿಷತ್‌ನಲ್ಲಿ ಭಾರಿ ಗದ್ದಲತಂದೆ-ಮಗ ಶವವಾಗಿ ಪತ್ತೆ, ಕೊಲೆ ಶಂಕೆ ದೂರು ದಾಖಲುಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ: ಕರ್ನಾಟಕಕ್ಕೆ ಆದ್ಯತೆ