ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇವರು ವಲಯ 3 ಕ್ಕೆ ಭೇಟಿ ನೀಡಿ ಕಂದಾಯ ವಸೂಲಾತಿಯ ಬಗ್ಗೆ ಪರಿಶೀಲಿಸಿ ಸ್ಥಳದಲ್ಲಿಯೇ ಹಲವಾರು ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ಆಯುಕ್ತರ ಸಮಯೋಚಿತ ಮಾರ್ಗದರ್ಶನ ಆಸ್ತಿ ಮಾಲೀಕರಿಗೆ, ಸಾರ್ವಜನಿಕರು ಸೇರಿದಂತೆ ಇತರರಿಗೆ ಮಾದರಿಯಾಗಿತ್ತು.