6 ಚೀಲದ ತುಂಬ ಜಲ್ಲಿ ಕಲ್ಲು ಎಲ್ಲಿಂದ ಬಂತು? ಆಕಸ್ಮಿಕ ಗೃಹ ಸಚಿವರೇ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ
ಅವರೇ, ಯಾವ ಬಿಲದಲ್ಲಿ ಅವಿತುಕೂತಿದ್ದೀರಿ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

6 ಚೀಲದ ತುಂಬ ಜಲ್ಲಿ ಕಲ್ಲು ಎಲ್ಲಿಂದ ಬಂತು? ಪೂರ್ವ ಯೋಜಿತವಾಗಿಯೇ ಮತಾಂಧರು ಸಂಚು ರೂಪಿಸಿದ್ದು ಪೊಲೀಸರಿಗೆ ತಿಳಿಯಲಿಲ್ಲವೇ? ರಾತ್ರಿ 2 ಗಂಟೆಗೆ ಸಾವಿರಾರು ಜನ ಠಾಣೆ ಎದುರು ಸೇರಲು ಬಿಟ್ಟಿದ್ದೇಕೆ? ಎಂದು ಖಾರವಾಗಿ ಬಿಜೆಪಿ ಪ್ರಶ್ನಿಸಿದೆ.

ಡಿಸಿಪಿ ಕಾರಿಗೆ ಕಲ್ಲು ತೂರಿದರೂ ಪೊಲೀಸರು ಆತ್ಮ ರಕ್ಷಣೆಗೆ ಫೈರಿಂಗ್ ಮಾಡಲಿಲ್ಲ ಏಕೆ?
ಮತಾಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಯಾವ ಕಡೆಗೆ ಕರೆದುಕೊಂಡು ಹೋಗುತ್ತಿದೆ ಬಿಜೆಪಿ ಪ್ರಶ್ನಿಸಿದೆ.

 

 

Share This Article
error: Content is protected !!
";