ಗ್ಲೋಬಲ್ ಅಚೀವರ್ಸ್ ಪ್ರಶಸ್ತಿಗೆ ಭಾಜನರಾದ ಡಾ.ಕೃಷ್ಣಾರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾಲ್ಡಿವ್ಸಿನಲ್ಲಿ ನಡೆದ ಜಾಗತಿಕ ಸಾಧಕರ ಸಮಾವೇಶದಲ್ಲಿ ಕರ್ನಾಟಕ ಸ್ಟೇಟ್ ರೋಡ್ ರೆಗ್ಯುಲೇಟರಿ ಮತ್ತು ಡೆವಲಪ್ಮೆಂಟ್ ಅಥಾರಿಟಿಯ ಸಿ.ಇ.ಓ ಡಾ.ಕೃಷ್ಣಾ ರೆಡ್ಡಿ ಅವರಿಗೆ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

- Advertisement - 

ಮುಖ್ಯ ಅತಿಥಿಗಳಾಗಿ ಭೋವಿ  ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ಖ್ಯಾತ ಅಭಿನೇತ್ರಿ ಡಾ.ಜಯಮಾಲಾ, ಯುವ ನಟಿ ಸೌಂದರ್ಯ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮತ್ತು ಮಾಲ್ಡಿವ್ ಸಿನ ಗಣ್ಯರು ಉಪಸ್ಥಿತರಿದ್ದರು. 

- Advertisement - 

ಬೆಂಗಳೂರಿನಿಂದ ಮಾಲ್ಡಿವ್ಸಿಗೆ ತಲುಪಿರುವ ನಾಲ್ಕು ದಿನಗಳ ಸಾಂಸ್ಕೃತಿಕ ನಿಯೋಗದಲ್ಲಿ ಡಾ. ಕೃಷ್ಣಾರೆಡ್ಡಿ ಮತ್ತು ಅವರ ಪತ್ನಿ ಸುಮಾ ಕೃಷ್ಣಾರೆಡ್ಡಿ ಅವರೂ ಭಾಗವಹಿಸಿದ್ದರು.

- Advertisement - 
Share This Article
error: Content is protected !!
";