ವಿಯೆಟ್ನಾಂ ಸಮ್ಮೇಳನಕ್ಕೆ ಡಾ.ಶಶಿಧರ, ಡಾ.ಪಾಳೇದ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ವಿಯೆಟ್ನಾಂ
ದೇಶದ ಟೈನ್ ಜಿಯಾಂಗ್ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 17 ರಿಂದ 19ರ ವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಆರ್.ಶಶಿಧರ ಮತ್ತು ಡಾ.ಅಶೋಕಕುಮಾರ ಪಾಳೇದ ಅವರು ಸಂಶೋಧನಾ ಪ್ರಬಂಧ ಮಂಡನೆ ಮಾಡಲಿದ್ದಾರೆ.

- Advertisement - 

ಸಮ್ಮೇಳನದಲ್ಲಿ ೪೦ಕ್ಕೂ ಹೆಚ್ಚು ದೇಶಗಳ ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಡಾ.ಶಶಿಧರ ಅವರು ವ್ಯವಹಾರ ನಿರ್ವಹಣೆ ವಿಷಯದಲ್ಲಿ ಹಾಗೂ ಡಾ.ಅಶೋಕಕುಮಾರ ಪಾಳೇದ ಅವರು ರಾಜ್ಯಶಾಸ್ತç ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸುವರು.

- Advertisement - 

ಹಿನ್ನೆಲೆಯಲ್ಲಿ ಇಬ್ಬರೂ ಪ್ರಾಧ್ಯಾಪಕರು ಬೆಂಗಳೂರು ಮೂಲಕ ವಿಯಟ್ನಾಂ ದೇಶಕ್ಕೆ ತೆರಳಿದರು. ಇದೇ ಸಂದರ್ಭದಲ್ಲಿ ಅಕ್ಟೋಬರ್ ೨೧ ಮತ್ತು ೨೨ರಂದು ಕಾಂಬೋಡಿಯದ ನ್ಯಾಷನಲ್ ಯುನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಹಾಗೂ ಲಾವೋಸ್ ನ್ಯಾಷನಲ್ ಯುನಿವರ್ಸಿಟಿ ಆಫ್ ಲಾವೋಸ್ ಆಹ್ವಾನದ ಮೇರೆಗೆ ಉಪನ್ಯಾಸ ನೀಡಲಿದ್ದಾರೆ.

- Advertisement - 

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ, ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ, ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ ಅವರು ಡಾ.ಶಶಿಧರ ಮತ್ತು ಡಾ.ಅಶೋಕಕುಮಾರ ಅವರನ್ನು ಅಭಿನಂದಿಸಿ, ಬೀಳ್ಕೊಟ್ಟರು.

 

Share This Article
error: Content is protected !!
";