ನಕಲಿ ಹಕ್ಕುಪತ್ರ ಜಾಲ ತಹಶೀಲ್ದಾರ್ ದಿಢೀರ್ ದಾಳಿ, ನಕಲಿ ದಾಖಲೆ ವಶಕ್ಕೆ

khushihost

ಚಂದ್ರವಳ್ಳಿ ನ್ಯೂಸ್, ಹೊಸನಗರ : ನಕಲಿ ಹಕ್ಕುಪತ್ರಗಳು, ಅರಣ್ಯ ಎನ್‌ಒಸಿ, ಅದಕ್ಕೆ ಬಳಸಿದ ಸೀಲ್ ಗಳು ಸೇರಿದಂತೆ ನಕಲಿ ತಯಾರಿಕೆಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ಎಲ್ ಗುಡ್ಡೇಕೊಪ್ಪದಲ್ಲಿ ಸೋಮವಾರ ನಡೆದಿದೆ.

- Advertisement - 

ಅನೇಕ ದಿನಗಳಿಂದ ತಮಗೆ ಬರುತ್ತಿದ್ದ ಮಾಹಿತಿ ಆಧರಿಸಿ ತಹಶೀಲ್ದಾರ್ ರಶ್ಮಿ ಹಾಲೇಶ ದಿಢೀರ್ ದಾಳಿ ನಡೆಸಿ, ನೇತೃತ್ವದ ಅಧಿಕಾರಿಗಳ ತಂಡ ಎಲ್.ಗುಡ್ಡೇಕೊಪ್ಪ ನಿವಾಸಿ ರಾಜೇಂದ್ರ ಎಂಬಾತನ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಆ ವೇಳೆ ನೂರಾರು ನಕಲಿ ಹಕ್ಕುಪತ್ರಗಳು, ಅದಕ್ಕೆ ಬೇಕಾದ ಅರಣ್ಯ ಇಲಾಖೆ ಎನ್‌ಒಸಿ, ತಾಲೂಕು ಕಚೇರಿ, ಪಂಚಾಯ್ತಿ, ಸೊಸೈಟಿ ವಿವಿಧ ಬ್ಯಾಂಕ್ ಗಳ ನಕಲಿ ಸೀಲ್ ಗಳು ಕಂಡು ಬಂದಿದ್ದು ವಶಕ್ಕೆ ಪಡೆಯಲಾಗಿದೆ.

- Advertisement - 

ದಾಳಿ ಮಾಡಿ ನೂರಾರು ಹಕ್ಕುಪತ್ರ, ಖಾಲಿ ಪತ್ರಗಳು, ಅದಕ್ಕೆ ಸಂಬಂಧಿಸಿದ ಅನೇಕ ನಕಲಿವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಕಲಿ ಹಕ್ಕುಪತ್ರದ ಜಾಲ ಕಾರ್ಯನಿರ್ವಹಿಸುತ್ತಿದೆಯೇ.. ಎಷ್ಟು ವರ್ಷದಿಂದ ಈ ಅಕ್ರಮ ನಡೆಯುತ್ತಿದೆ. ತಾಲೂಕಿನಲ್ಲಿ ಈವರೆಗೆ ಹಂಚಿಕೆಯಾಗಿರುವ ನಕಲಿ ಹಕ್ಕುಪತ್ರಗಳ ಮಾಹಿತಿ ಇನ್ನಷ್ಟೆ ಕಲೆಹಾಕಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ಹಾಲೇಶ್ ತಿಳಿಸಿದ್ದಾರೆ.

ದಾಳಿಯಲ್ಲಿ ಶಿರೆಸ್ತಾದಾರ ಮಂಜುನಾಥ, ಪಿಎಸ್‌ಐ ಶಂಕರಗೌಡ ಪಾಟಿಲ್, ಚಿರಾಗ್, ಕಚೇರಿ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement - 

Share This Article
error: Content is protected !!
";