Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಜ್ಯದ ಫಲವತ್ತಾದ ಮಣ್ಣಲ್ಲಿ ಕ್ಯಾಲಿಫೋರ್ನಿಯಾ ದ್ರಾಕ್ಷಿ: ಸಿದ್ದೇಶ್ವರ ಶ್ರೀಗಳ ಕನಸು ನನಸು

Advertisement

ಚಂದ್ರವಳ್ಳಿ ನ್ಯೂಸ್, ​ವಿಜಯಪುರ:
ಒಂದು ಕಾಲದಲ್ಲಿ ಬರದ ನಾಡು ಎನಿಸಿಕೊಂಡಿದ್ದ ವಿಜಯಪುರ ಜಿಲ್ಲೆ ಇಂದು ಕೃಷಿ ಕ್ರಾಂತಿಗೆ ಸಾಕ್ಷಿಯಾಗುತ್ತಿದೆ. "ಈ ಭೂಮಿಗೆ ಒಂದು ಬೊಗಸೆ ನೀರು ಕೊಡಿ, ಇದು ಕ್ಯಾಲಿಫೋರ್ನಿಯಾವನ್ನು ಮೀರಿಸುತ್ತದೆ" ಎಂಬ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಯದಂತೆ, ಜಿಲ್ಲೆಯ ತಿಕೋಟಾ ವ್ಯಾಪ್ತಿಯಲ್ಲಿ ಕ್ಯಾಲಿಫೋರ್ನಿಯಾದ ಉತ್ಕೃಷ್ಟ ದರ್ಜೆಯ 'ಆರಾ-36' (ARD-36) ತಳಿಯ ದ್ರಾಕ್ಷಿ ಬೆಳೆ ಕಂಗೊಳಿಸುತ್ತಿದೆ.

​ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಜಿಲ್ಲೆಯಲ್ಲಿ ಜಲ, ವೃಕ್ಷ ಮತ್ತು ಶಿಕ್ಷಣ ಕ್ರಾಂತಿಯ ನಂತರ ಇದೀಗ ಕೃಷಿ ಮತ್ತು ಕ್ಷೀರ ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

​​ಆರಾ-36 ತಳಿಯ ಪರಿಚಯ: ತಿಕೋಟಾ ಭಾಗದ ರೈತರು ಮೊದಲ ಹಂತದಲ್ಲಿ ಸುಮಾರು 100 ಎಕರೆ ಪ್ರದೇಶದಲ್ಲಿ ಕ್ಯಾಲಿಫೋರ್ನಿಯಾ ಮೂಲದ ಈ ವಿಶಿಷ್ಟ ದ್ರಾಕ್ಷಿ ತಳಿಯನ್ನು ಬೆಳೆದು ಯಶಸ್ವಿಯಾಗಿದ್ದಾರೆ.

​ಮೂರು ಪಟ್ಟು ಅಧಿಕ ಲಾಭ: ಸಾಮಾನ್ಯ ದ್ರಾಕ್ಷಿಗಿಂತ ಈ ತಳಿಗೆ ಮಾರುಕಟ್ಟೆಯಲ್ಲಿ ಮೂರು ಪಟ್ಟು ಹೆಚ್ಚು ದರ ಸಿಗುತ್ತಿದ್ದು, ರಫ್ತು ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.

​ಸಹ್ಯಾದ್ರಿ ಫಾರ್ಮ್ಸ್ ಸಹಯೋಗ: ಮಹಾರಾಷ್ಟ್ರದ ನಾಸಿಕ್‌ನ ಪ್ರಸಿದ್ಧ 'ಸಹ್ಯಾದ್ರಿ ಫಾರ್ಮ್ಸ್' ಸಹಯೋಗದೊಂದಿಗೆ ರೈತ ಉತ್ಪಾದಕ ಸಂಘಗಳ (FPO) ಮೂಲಕ ರೈತರಿಗೆ ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯ ಒದಗಿಸಲಾಗುತ್ತಿದೆ.

news_1777905877_4_211.webp

 

​ಯುವ ಕೃಷಿಕರ ಸಾಧನೆ: ತೋಟಗಾರಿಕೆ ಪದವೀಧರರಾದ ಕೃಷ್ಣವೇಣಿ FPOನ ಸಂದೀಪ ಪಾಟೀಲ ಮತ್ತು ಸಚಿನ ಪಾಟೀಲ ಹಡಲಸಂಗ ಅವರ ನೇತೃತ್ವದಲ್ಲಿ ಸ್ಥಳೀಯ ರೈತರ ತಂಡ ಈ ಸಾಧನೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಬೆಳೆಯನ್ನು 1,000 ಎಕರೆಗೆ ವಿಸ್ತರಿಸುವ ಗುರಿ ಹೊಂದಲಾಗಿದೆ.

​ಶ್ರೀಗಳ ಆಶಯಕ್ಕೆ ಗೌರವಛ
​ನೀರಾವರಿ ಸೌಲಭ್ಯದಿಂದ ಸಮೃದ್ಧವಾಗಿ ಬೆಳೆ ತೆಗೆಯುತ್ತಿರುವ ರೈತರು
, ತಮ್ಮ ಮೊದಲ ಇಳುವರಿಯನ್ನು ಪೂಜ್ಯ ಸಿದ್ದೇಶ್ವರ ಶ್ರೀಗಳಿಗೆ ಅರ್ಪಿಸಿ ಗೌರವ ಸಲ್ಲಿಸಿದ್ದಾರೆ. ಇಂದು ಸಚಿವ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ ರೈತರ ತಂಡ, ಹಣ್ಣುಗಳನ್ನು ಸವಿಯುವಂತೆ ನೀಡಿ ತಮ್ಮ ಸಂತಸವನ್ನು ಹಂಚಿಕೊಂಡರು.

​ಸಚಿವರ ಮಾತು: "2013-18ರ ಅವಧಿಯಲ್ಲಿ ಜಾರಿಗೆ ತಂದ ನೀರಾವರಿ ಯೋಜನೆಗಳು ಇಂದು ಜಿಲ್ಲೆಯ ಚಿತ್ರಣವನ್ನೇ ಬದಲಿಸಿವೆ. ಅಕ್ಷಯಕಲ್ಪ ಮತ್ತು ಕೃಷಿಕಲ್ಪ ಸಂಸ್ಥೆಗಳ ಮೂಲಕ ಹೈನುಗಾರಿಕೆ ಹಾಗೂ ಸಹ್ಯಾದ್ರಿ ಫಾರ್ಮ್ಸ್ ಮೂಲಕ ರಫ್ತು ಆಧಾರಿತ ಕೃಷಿಗೆ ನಾವು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ನಮ್ಮ ರೈತರು ಸ್ವಾವಲಂಬಿಗಳಾಗುತ್ತಿರುವುದು ಹೆಮ್ಮೆಯ ವಿಷಯ."

​ಈ ಸಂದರ್ಭದಲ್ಲಿ ರೈತರಾದ ಈರಪ್ಪ ಬಗಲಿ, ಪಿಂಟು ಕೊಣ್ಣೂರ, ಅಶೋಕ ಬಾಬರ ಹಾಗೂ ಕೃಷ್ಣವೇಣಿ FPO ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿಜಯಪುರ ಜಿಲ್ಲೆಯ ಈ ಸಾಧನೆ ರಾಜ್ಯದ ಇತರ ಜಿಲ್ಲೆಗಳಿಗೂ ಮಾದರಿಯಾಗುವಂತಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಫೂರ್ತಿದಾಯಕ ಸದ್ಗ್ರಂಥ ಶ್ರೀಮದ್ ಭಗವದ್ಗೀತೆ- ಅಭಿಷೇಕ್ ಚಕ್ರವರ್ತಿ'ಬ್ರ್ಯಾಂಡ್ ಬೆಂಗಳೂರು' ಹೆಸರಲ್ಲಿ 'ಗಾರ್ಬೇಜ್ ಬೆಂಗಳೂರು' ಸೃಷ್ಟಿ: ಅಶೋಕ್ ವಾಗ್ದಾಳಿ'ಗೃಹ ಜ್ಯೋತಿ' ಹೆಸರಲ್ಲಿ ರಾಜ್ಯಕ್ಕೆ ಕತ್ತಲೆ ಭಾಗ್ಯ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯ ಅಂತ್ಯದ ಕಾಲ ಆರಂಭ: ಆರ್. ಅಶೋಕ್ ಭವಿಷ್ಯರಾಜ್ಯದ ಫಲವತ್ತಾದ ಮಣ್ಣಲ್ಲಿ ಕ್ಯಾಲಿಫೋರ್ನಿಯಾ ದ್ರಾಕ್ಷಿ: ಸಿದ್ದೇಶ್ವರ ಶ್ರೀಗಳ ಕನಸು ನನಸುಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ: ನರೇಂದ್ರ ಮೋದಿ ನಾಯಕತ್ವಕ್ಕೆ ಸಂದ ಜಯ ಎಂದ ನಿಖಿಲ್ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಕ್ ಗೆಲುವು: ನಿಖಿಲ್ ಕುಮಾರಸ್ವಾಮಿ ಅಭಿನಂದನೆಸಮುದ್ರದ ಆಳದಲ್ಲಿ ಗಿನ್ನೆಸ್ ದಾಖಲೆ: ಕನ್ನಡಿಗ ಶರತ್ ಆರ್. ಅಶೋಕ್ ತಂಡದ ಐತಿಹಾಸಿಕ ಸಾಧನೆಗೆ ಅಭಿನಂದನೆಬಾಳೆಹೊನ್ನೂರು ಶ್ರೀಗಳಿಗೆ 'ಬಿಎಸ್‌ವೈ ಅಭಿಮಾನೋತ್ಸವ'ಕ್ಕೆ ಆಮಂತ್ರಣ ನೀಡಿದ ಬಿ.ವೈ. ವಿಜಯೇಂದ್ರಅಸ್ಸಾಂನಲ್ಲಿ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಭರ್ಜರಿ ಜಯ: ಬಿ.ವೈ. ವಿಜಯೇಂದ್ರ ಅಭಿನಂದನೆ