Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸೌಹಾರ್ದತೆಯ ಬಕ್ರೀದ್ ಆಚರಣೆ: ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತ್ಯಾಗ, ಬಲಿದಾನ ಹಾಗೂ ಸೌಹಾರ್ದತೆಯ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬವನ್ನು ಹಿರಿಯೂರು ನಗರ ಹಾಗೂ ತಾಲ್ಲೂಕಿನಾದ್ಯಂತ ಮುಸ್ಲಿಂ ಬಾಂಧವರು ಗುರುವಾರ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.

ನಗರದಲ್ಲಿ ಭವ್ಯ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ:
ನಗರದ ಜಾಮಿಯಾ ಮಸೀದಿ ಬಳಿ ಜಮಾಯಿಸಿದ ಸಾವಿರಾರು ಮುಸ್ಲಿಂ ಬಾಂಧವರು
, ಅಲ್ಲಿಂದ ತಾಲೂಕು ಕಚೇರಿ ಬಳಿ ಇರುವ ಈದ್ಗಾ ಮೈದಾನದವರೆಗೆ ಭವ್ಯ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ 'ಅಲ್ಲಾಹೋ ಅಕ್ಬರ್' ಜಯಘೋಷ ಮೊಳಗಿಸಿದ ಜನಸ್ತೋಮ, ಪ್ರಸಿದ್ಧ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ನೆಹರು ವೃತ್ತ ಹಾಗೂ ಗಾಂಧಿ ವೃತ್ತದ ಮಾರ್ಗವಾಗಿ ಪ್ರಾರ್ಥನಾ ಸ್ಥಳ ತಲುಪಿತು. ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಂ ಬಾಂಧವರು ಜಗತ್ತಿನ ಕಲ್ಯಾಣಕ್ಕಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಆಲಿಂಗನದೊಂದಿಗೆ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್ ಅವರು ಮುಸ್ಲಿಂ ಬಾಂಧವರನ್ನು ಭೇಟಿಯಾಗಿ, ಹಬ್ಬದ ಪ್ರೀತಿ-ವಿಶ್ವಾಸವನ್ನು ಹಂಚಿಕೊಂಡರು.

ಆದಿವಾಲ ಗ್ರಾಮದಲ್ಲಿ ಸೌಹಾರ್ದತೆಯ ಸಂದೇಶ ಸಾರಿದ ಸುಹಾಸ್ ಸುಧಾಕರ್ ತಾಲ್ಲೂಕಿನ ಆದಿವಾಲ ಗ್ರಾಮದ ಈದ್ಗಾ ಮೈದಾನದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್, ಹಬ್ಬಗಳ ನಿಜವಾದ ಆಶಯವನ್ನು ಬಿಚ್ಚಿಟ್ಟರು.

news_1779972860_1_809.webp

 

"ಬಕ್ರೀದ್ ಕೇವಲ ಒಂದು ಧಾರ್ಮಿಕ ಆಚರಣೆಯಲ್ಲ; ಅದು ತ್ಯಾಗ, ಪ್ರೀತಿ, ಸಹಾನುಭೂತಿ ಮತ್ತು ಸಹೋದರತ್ವದ ಮಹಾನ್ ಸಂದೇಶವನ್ನು ಸಾರುವ ಪವಿತ್ರ ದಿನ. ಸಮಾಜದಲ್ಲಿ ಪ್ರತಿಯೊಬ್ಬರಲ್ಲೂ ಮಾನವೀಯತೆ, ಏಕತೆ ಮತ್ತು ಸೌಹಾರ್ದತೆ ಹೆಚ್ಚಾಗಬೇಕಿದೆ. ಹಬ್ಬಗಳು ಪರಸ್ಪರ ಸ್ನೇಹವನ್ನು ಬೆಳೆಸುವ ಕೊಂಡಿಯಾಗಬೇಕು. ಎಲ್ಲ ಧರ್ಮಗಳ ಜನರ ನಡುವೆ ಮಾನವೀಯ ಸಂಬಂಧಗಳು ಬಲಗೊಂಡಾಗ ಮಾತ್ರ ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಸಮಾಜ ನಿರ್ಮಾಣ ಸಾಧ್ಯ."
ಸುಹಾಸ್ ಸುಧಾಕರ್
, ಯುವ ಮುಖಂಡರು.

ಉಪಸ್ಥಿತರಿದ್ದ ಪ್ರಮುಖರು:
ಈ ಸೌಹಾರ್ದತಾ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗೇಂದ್ರನಾಯ್ಕ
, ಪ್ರಮುಖರಾದ ಇಮ್ರಾನ್ ಫಿರ್ದೋಸ್, ಆಸಿಫ್ ಅಲಿ, ಚಮನ್ ಷರೀಫ್, ಸ್ವಾಲೇಹ, ಇಸ್ಮಾಯಿಲ್, ಮುಬಾರಕ್, ನಿತೀಶ್ ಜೈನ್, ಗುರುಪ್ರಸಾದ್, ರಘುನಾಯ್ಕ, ಜ್ಞಾನೇಶ್, ಪ್ರಭು ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭೀಕರ ರಸ್ತೆ ಅಪಘಾತ, ಮಾಜಿ ನಗರಸಭಾ ಸದಸ್ಯ ಸೇರಿ ಐದು ಜನ ಸ್ಥಳದಲ್ಲೇ ಸಾವು!'ನುಡಿದಂತೆ ನಡೆಯದ ಸಿಎಂ, ಗ್ಯಾರಂಟಿಗಳಿಗೆ ಎಸ್ಸಿಪಿ/ಟಿಎಸ್ಪಿ ಹಣ ಬಳಕೆ': ಸಿದ್ದರಾಮಯ್ಯ ವಿರುದ್ಧ ಪತ್ರಕರ್ತ ಜಡೇಕುಂಟೆ ಮಂಜುನಾಥ್ ಆಕ್ರೋಶದ ಪತ್ರಕೆ. ಹೆಚ್. ಮುನಿಯಪ್ಪನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು:ಆರ್. ವಿ. ಮಹೇಶ್ನೀರಿಗಾಗಿ ಕಲ್ಪಳ್ಳಿ ಭಾಗದ ಜನರ ಕೂಗು: ಜೂನ್ 1 ರಂದು ಬೃಹತ್ ಪ್ರತಿಭಟನಾ ರ‍್ಯಾಲಿವಾಣಿವಿಲಾಸ ಸಾಗರದ ನೀರು ಪೋಲು: ಮಳೆಗಾಲದಲ್ಲೂ ಚೆಕ್ ಡ್ಯಾಂಗಳಿಗೆ ನೀರು ಹರಿಸುತ್ತಿರುವುದಕ್ಕೆ ಸಾರ್ವಜನಿಕರ ಆಕ್ರೋಶ – ಜಿಲ್ಲಾಧಿಕಾರಿಗಳಿಗೆ ಪತ್ರಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಕೆಪಿಸಿಸಿ ಸಮಿತಿಯ ಉಪಾಧ್ಯಕ್ಷರಾದ ಆರ್. ಮಂಜುನಾಥ್ ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಸಿಎಂ ಸ್ಥಾನಕ್ಕೆ ದಿಢೀರ್ ರಾಜೀನಾಮೆ!ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ತೆರೆಮರೆ ಕಸರತ್ತು: 'ಟ್ರಬಲ್ ಶೂಟರ್' ಡಿಕೆಶಿಗೆ ಒಲಿಯಲಿದೆಯೇ ಸಿಎಂ ಪಟ್ಟ?ಕೊನೆ ಕ್ಷಣದಲ್ಲಿ ಆಪ್ತರ ವರ್ಗಾವಣೆ: ಸಿದ್ದರಾಮಯ್ಯ 'ಬಿಗ್ ಮೂವ್':"ಸಂವಿಧಾನ ಇಲ್ಲದಿದ್ದರೆ ನಾನು ಕುರಿ ಮೇಯಿಸುತ್ತಿದ್ದೆ": ವಿದಾಯದ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಭಾವುಕ! ರಾಷ್ಟ್ರ ರಾಜಕಾರಣದ ಆಫರ್ ನಿರಾಕರಣೆ