LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಜಲ ವಿವಾದಗಳು ಹಾಗೂ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ.

Advertisement
Advertisement

ಚಂದ್ರವಳ್ಳಿ ನ್ಯೂಸ್ ಚೆನ್ನೈ ದಕ್ಷಿಣ ವಲಯ ಮಂಡಳಿ ಸಭೆ: ತೆರಿಗೆ ಪಾಲು, ಜಲ ವಿವಾದ ಮತ್ತು ಕ್ಷೇತ್ರ ವಿಂಗಡಣೆ ಕುರಿತು ಕರ್ನಾಟಕದ ಪ್ರಬಲ ಧ್ವನಿ
​ಗೃಹ ಸಚಿವಾಲಯದ ಆಂತರ-ರಾಜ್ಯ ಮಂಡಳಿ ಸಚಿವಾಲಯವು ಆಯೋಜಿಸಿದ್ದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಿ, ರಾಜ್ಯದ ಹಿತಾಸಕ್ತಿ ಹಾಗೂ ದಕ್ಷಿಣ ಭಾರತದ ಪ್ರಮುಖ ವಿಷಯಗಳ ಕುರಿತು ಧ್ವನಿ ಎತ್ತಿದ್ದಾರೆ.

ದಕ್ಷಿಣದ ರಾಜ್ಯಗಳ ನಡುವೆ ಸಮನ್ವಯತೆಯನ್ನು ಬಲಪಡಿಸುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ಪ್ರಮುಖವಾಗಿ ಆರು ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು:

ಅಂತರ-ರಾಜ್ಯ ಜಲ ವಿವಾದಗಳು: ರಾಜ್ಯಗಳ ನಡುವಿನ ಜಲ ವಿವಾದಗಳು ಹಾಗೂ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ.

ಮಾದಕ ದ್ರವ್ಯ ತಡೆ: ಗಡಿ ಸಾಗಾಣಿಕೆಯ ಮಾದಕ ದ್ರವ್ಯ ಜಾಲವನ್ನು ನಿಯಂತ್ರಿಸುವುದು ಮತ್ತು ಜಂಟಿ ಕಾರ್ಯಾಚರಣೆ ನಡೆಸುವುದು.

ಬ್ಲೂ ಎಕಾನಮಿ (ಸಮುದ್ರ ಆರ್ಥಿಕತೆ): ಕರಾವಳಿ ತೀರದ ಸಾಮರ್ಥ್ಯ ಮತ್ತು ಸಮುದ್ರ ಆಧಾರಿತ ಆರ್ಥಿಕ ಬೆಳವಣಿಗೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು.

ನ್ಯಾಯಯುತ ಅನುದಾನ: ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಸಮಾನ ಮತ್ತು ನ್ಯಾಯಯುತವಾದ ಹಣಕಾಸು ನೆರವು ಒದಗಿಸುವುದು.

ಮೂಲಸೌಕರ್ಯ ವೃದ್ಧಿ: ಬಂದರು ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್ ಸೇವೆಗಳನ್ನು ಸುಧಾರಿಸುವುದು.
​ಇದೇ ವೇಳೆ ಕರ್ನಾಟಕದ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮೂರು ಪ್ರಮುಖ ಬೇಡಿಕೆಗಳನ್ನು ಪ್ರಬಲವಾಗಿ ಮಂಡಿಸಿದರು:

16ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು: ತೆರಿಗೆ ವಿಕೇಂದ್ರೀಕರಣದಲ್ಲಿ ಕರ್ನಾಟಕದ ಪಾಲನ್ನು ಶೇ. 4.7ಕ್ಕೆ ಹೆಚ್ಚಿಸಬೇಕು.

ಸಂಸದೀಯ ಕ್ಷೇತ್ರಗಳ ವಿಂಗಡಣೆ: ಮುಂದಿನ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ (Delimitation) ವೇಳೆಯಲ್ಲಿ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಮತ್ತು ರಾಜಕೀಯ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ರಕ್ಷಣೆ ನೀಡಬೇಕು.
​ಗಣಿ ಮತ್ತು ಖನಿಜ ಕಾಯ್ದೆ ಪರಿಶೀಲನೆ: ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ-2026 ಅನ್ನು ಮರುಪರಿಶೀಲಿಸಬೇಕು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಭಾವ: ದಾಖಲೆ ಮಟ್ಟದಲ್ಲಿ ಬೆಳೆ ವಿಮೆಗೆ ರೈತರ ನೋಂದಣಿಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ದಾಖಲೆ ಮಟ್ಟದ ರೈತರ ನೋಂದಣಿಜಲ ವಿವಾದಗಳು ಹಾಗೂ ನದಿ ನೀರು ಹಂಚಿಕೆ ಕುರಿತು ಸಮಾಲೋಚನೆ.ಭ್ರಷ್ಟಾಚಾರದ ಆರೋಪಿಗಳಿಗೆ ಮಂತ್ರಿಗಿರಿ: ಸಿ.ಟಿ. ರವಿ ಕಿಡಿಕಾರಿದ್ದು ಹೀಗೆಅಭಿಮನ್ಯು ಆನೆಯ ನಿವೃತ್ತಿಗೆ ಸಿ.ಟಿ. ರವಿ ಬೇಸರ: ಅರಣ್ಯ ಸಚಿವರಿಗೆ ಮನವಿಪ್ರಧಾನಿ ಮೋದಿ ಸಾರ್ವಜನಿಕ ಜೀವನದ 25 ವರ್ಷ: ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರ ವಿಸ್ತೃತ ಸಭೆಎಚ್.ಡಿ. ಕುಮಾರಸ್ವಾಮಿ ಸಂತಸ: ಎಚ್‌ಎಂಟಿ ವಾಚ್‌ಗಳಿಗೆ ಅಭೂತಪೂರ್ವ ಸ್ಪಂದನೆ, ಮರುಜೀವ ಪಡೆದ ಭಾರತದ ಸ್ವದೇಶಿ ಕಿರೀಟಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ  ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ 31ನೇ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಭಾಗವಹಿಸಿದರು.ತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆತುಮಕೂರಿನಲ್ಲಿ ಬಾಲಾಜಿ ವೇಫರ್ಸ್ ಉತ್ಪಾದನಾ ಘಟಕ: ಬೃಹತ್ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಜೊತೆ ಸಭೆ