Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನ್ನಡ ಸಿನಿಮಾ ನಿರ್ಲಕ್ಷ್ಯ ಮಾಡಿದ ವಿದ್ಯಾವಂತರು -ಡಾ.ಕೆ.ಪುಟ್ಟಸ್ವಾಮಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕನ್ನಡ ಚಲನಚಿತ್ರರಂಗವನ್ನು ವಿದ್ಯಾವಂತ ವರ್ಗ ಸರಿಯಾಗಿ ಅಧ್ಯಯನ ಮಾಡಿಲ್ಲ ಮತ್ತು ಅದರಿಂದಲೇ ಈ ಕ್ಷೇತ್ರ ವಿಸ್ತಾರವಾಗಿ ಬೆಳೆಯಲು ಸಾಧ್ಯವಾಗಿಲ್ಲ ಎಂದು ಹಿರಿಯ ಸಾಹಿತಿ
, ನಿರ್ದೇಶಕ ಡಾ.ಕೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ನಗರದಲ್ಲಿ ಡಿ.ಆರ್.ನಾಗರಾಜ್ ಬಳಗದ ವತಿಯಿಂದ ಆಯೋಜಿಸಿದ್ದ 'ಡಿ.ಆ‌ರ್.ಎನ್ ತಿಂಗಳ ಮಾತುಕತೆ' ಕಾರ್ಯಕ್ರಮದಲ್ಲಿ 'ಬಡವರ ರಾಜಕುಮಾರ' ಪುಸ್ತಕದ ಲೇಖಕ ಮಂಜುನಾಥ ಅದ್ದೆ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.

ಕನ್ನಡ ಚಿತ್ರರಂಗ ಕುರಿತು ಶೈಕ್ಷಣಿಕ ದೃಷ್ಟಿಕೋನದಿಂದ ನಡೆದಿರುವ ಸಂಶೋಧನೆ ಕಡಿಮೆ, ಯು.ಆ‌ರ್.ಅನಂತಮೂರ್ತಿ, ಲಂಕೇಶ್, ಬರಗೂರು ರಾಮಚಂದ್ರಪ್ಪ ಅವರಂತಹ ಸಾಹಿತಿಗಳು ಮಾತ್ರ ಇದನ್ನು ಗಂಭೀರವಾಗಿ ಅಧ್ಯಯನ ಮಾಡಿ ಜನರಿಗೆ ತಲುಪಿಸಿದ್ದರು. ಆದರೆ, ಕನ್ನಡದ ಬುದ್ಧಿಜೀವಿ ವರ್ಗ ಯಾವಾಗಲೂ ಸಿನಿಮಾ ರಂಗವನ್ನು ಉಪೇಕ್ಷಿಸಿದೆ. ಅಂತಹ ಸಂದರ್ಭದಲ್ಲಿ ಕನ್ನಡದಲ್ಲೇ ಮೊದಲ ಬಾರಿಗೆ ಸಿನಿಮಾ ಮೀಮಾಂಸೆಯನ್ನು ಬರೆದವರು ಡಿ.ಆರ್. ನಾಗರಾಜ್ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯವಾಗಿ ಆರ್ಥಿಕ ಸಂಪನ್ಮೂಲವಿಲ್ಲದವರನ್ನು ಬಡವರು ಈ ಎನ್ನಲಾಗುತ್ತದೆ. ಆದರೆ, 'ಬಡವರ ರಾಜಕುಮಾರ' ಪುಸ್ತಕದಲ್ಲಿ ಬಡವರನ್ನು ಭಿನ್ನ ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ಬದುಕಿನ ಘನತೆಯನ್ನು ಉಳಿಸಿಕೊಂಡು ಮಾನವ ಕುಲಕ್ಕೆ ಒಳಿತನ್ನು ಬಯಸುವುದೇ ಮಾನವೀಯತೆ ಎನ್ನುವುದನ್ನು ರಾಜ್ ಕುಮಾರ್ ತಮ್ಮ ಪಾತ್ರಗಳ ಮೂಲಕ ಸಾರಿದ್ದಾರೆ. ಅಲ್ಲದೆ, ಬದಲಾಗುತ್ತಿದ್ದ ಕಾಲಕ್ಕನುಗುಣವಾಗಿ ತಮ್ಮ ಪಾತ್ರಗಳನ್ನು ಉನ್ನತೀಕರಿಸಿಕೊಂಡವರು ರಾಜ್ ಕುಮಾರ್. ಈ ದೃಷ್ಟಿಯಿಂದ 'ಬೇಡರ ಕಣ್ಣಪ್ಪ' ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿತು ಎಂದರು.

ಬಸವಣ್ಣ, ಬುದ್ಧ, ಗಾಂಧಿ, ಅಂಬೇಡ್ಕರ್ ಅವರುಗಳು ಜನರೊಂದಿಗೆ ಬೆರೆತು ಬದುಕಿದವರು. ಹಾಗಾಗಿಯೇ ಜನರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಯಿತು ಮತ್ತು ಅವರೊಂದಿಗೆ ಸುಲಭವಾಗಿ ಜನರು ಬೆರೆಯಲು

ಸಾಧ್ಯವಾಯಿತು. ಇದರಿಂದಲೇ ಇಂದಿಗೂ ಈ ಮಹನೀಯರು ಜನರ ಸ್ಮರಣೆಯಲ್ಲಿ ಉಳಿದಿದ್ದಾರೆ. ಅದೇ ರೀತಿ ರಾಜ್‌ಕುಮಾರ್ ಕೂಡ ಜನರೊಂದಿಗೆ ಬೆರೆತಿದ್ದರಿಂದಲೇ ಅವರ ಚಿತ್ರಗಳು ಇಂದಿಗೂ ಜನಪ್ರಿಯವಾಗಿ ಉಳಿದುಕೊಂಡಿವೆ ಎಂದು ವಿಶ್ಲೇಷಿಸಿದರು.

ವಿಮರ್ಶಕ ಡಾ.ಎಚ್‌.ಡಿ. ಉಮಾಶಂಕರ್ ಮಾತನಾಡಿ, ಸಮಾಜ ವಿಘಟನೆಯಾಗುವ ಸಂದರ್ಭದಲ್ಲಿ ತೆರೆಕಂಡ 'ಬಂಗಾರದ ಮನುಷ್ಯ' ಚಿತ್ರವು ಮನುಷ್ಯರನ್ನು ಮತ್ತು ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡಿತು. ಬಡವರ ರಾಜಕುಮಾರ ಪುಸ್ತಕವು ಶೂದ್ರ ರಾಜಕಾರಣವನ್ನು ಮತ್ತೆ ನೆನಪಿಸುವ ಕೃತಿಯಾಗಿದೆ, ಭಾರತ ಮತ್ತು ಕನ್ನಡ ಚಲನಚಿತ್ರರಂಗ ಬೆಳೆದು ಬಂದ ಹಾದಿಯನ್ನು ಉತ್ತಮವಾಗಿ ನಿರೂಪಿಸುವ ಕೃತಿ ಇದಾಗಿದೆ ಎಂದರು.

ಕೃತಿಯ ಲೇಖಕ ಮಂಜುನಾಥ ಅದ್ದೆ ಮಾತನಾಡಿ, ಹಲವಾರು ಬಡವರು ತಮ್ಮ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು ಸಾಧ್ಯವಾಗುವ ಮಾರ್ಗದರ್ಶಿಯಾಗಿರುವ ಚಿತ್ರಗಳನ್ನು ರಾಜ್ ಕುಮಾರ್ ನಾಡಿಗೆ ನೀಡಿದ್ದಾರೆ. ಅವರಿಗೆ ಬಡತನವೇ ಅನೇಕ ಬದುಕಿನ ಪಾಠಗಳನ್ನು ಕಲಿಸಿತ್ತು. ಹಾಗಾಗಿಯೇ ಅವರು 'ಬಡವರ ರಾಜಕುಮಾರ'ನಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಹಾರಾಣಿ ಕ್ಲಸ್ಟ‌ರ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕೆ.ವೈ. ನಾರಾಯಣಸ್ವಾಮಿ, ಚಿಂತಕ ಯದುನಂದನ್ ಕಿಲಾರ, ಸಾಹಿತಿಗಳಾದ ನವೀನ್ ಸೂರಿಂಜೆ, ವಿಕಾಸ್ ಮೌರ್ಯ, ವಿ.ಆರ್.ಕಾರ್ಪೆಂಟರ್, ಕನ್ನಡಪರ ಹೋರಾಟಗಾರ ಹರೀಶ್ ಬೈರಪ್ಪ, ನಿರ್ದೇಶಕರಾದ ಉದಯ್ ಸೋಸಲೆ, ಟಿ.ಎಚ್.ಲವಕುಮಾರ್, ಡಾ.ಡಿ.ಆ‌ರ್. ನಾಗರಾಜ್ ಬಳಗದ ಕಾರ್ಯದರ್ಶಿ ದಯಾನಂದಗೌಡ, ಪ್ರಕಾಶ್ ಮಂಟೇದ, ಕೊನಘಟ್ಟ ವೆಂಕಟೇಶ್, ಹೇಮಂತ್ ಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಿರುಮಗೊಂಡನಹಳ್ಳಿ ರೈಲ್ವೇ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರ ಆಗ್ರಹಕನ್ನಡ ಸಿನಿಮಾ ನಿರ್ಲಕ್ಷ್ಯ ಮಾಡಿದ ವಿದ್ಯಾವಂತರು -ಡಾ.ಕೆ.ಪುಟ್ಟಸ್ವಾಮಿ ರಾಜ್ಯ ಯೋಗ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ಅಪೂರ್ವ ಸಾಧನೆಪ್ರೊ. ಬಿ ಕೃಷ್ಣಪ್ಪ ಕರ್ನಾಟಕದ ಪ್ರಮುಖ ದಲಿತ ಚಳವಳಿಯ ಧೀಮಂತ ನಾಯಕ...ಆಯುರ್ವೇದ ಹಾಗೂ ಯೋಗದ ಬಗ್ಗೆ ಇಡೀ ಜಗತ್ತು ಶ್ಲಾಘಿಸುತ್ತಿದೆ-ಬಿ. ಎಸ್. ಯಡಿಯೂರಪ್ಪಪೋಸ್ಟರ್ ಅನಾವರಣಗೊಳಿಸಿ ಶುಭ ಹಾರೈಸಿದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ಹಳ್ಳಿ ಮಕ್ಕಳಿಗೂ ಸಿಗಲಿ ಎಲ್.ಕೆ.ಜಿ/ಯು.ಕೆ.ಜಿ ಭಾಗ್ಯ: ಮಾಜಿ ರಾಜ್ಯಸಭಾ ಸದಸ್ಯ ಹೆಚ್. ಹನುಮಂತಪ್ಪ ಕರೆಮೋದಿ ಸರ್ಕಾರದ 12 ವರ್ಷಗಳ ಆಡಳಿತ: ದೇಶದ ಅಭಿವೃದ್ಧಿ ಶ್ಲಾಘಿಸಿದ ಆರ್. ಅಶೋಕ್ತುಮಕೂರು-ಯಶವಂತಪುರ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಕೇಂದ್ರ ಸಚಿವ ವಿ. ಸೋಮಣ್ಣಕಾರ್ಮಿಕರ ಕಿಟ್ ಹಗರಣ: ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಜೆಡಿಎಸ್