ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಗುರುವಾರ ರಾತ್ರಿ ಪಂಜಿನ ಮೆರವಣಿಗೆ ನಡೆಸಲಾಯಿತು.
ಆನೆ ಬಾಗಿಲಿನಿಂದ ಹೊರಟ ಮೆರವಣಿಗೆಯನ್ನು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಕಲ್ಲೇಶ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಇವರುಗಳು ಉದ್ಘಾಟಿಸಿದರು.
ಕಲ್ಲೇಶ್ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕೆ ಅನೇಕ ಹಿರಿಯರ ಹೋರಾಟ ತ್ಯಾಗ ಬಲಿದಾನವಿದೆ. ಹಿಂದೂಗಳ ಸಂಘಟನೆಯಿಂದ ಮಾತ್ರ ದೇಶ ಸದೃಢವಾಗಿರಲು ಸಾಧ್ಯ ಎಂದು ಆರ್.ಎಸ್.ಎಸ್.ಬೆಳೆದು ಬಂದ ದಾರಿಯನ್ನು ವಿವರಿಸಿ ದೇಶ ಭಕ್ತರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಗಾಂಧಿವೃತ್ತ, ಮರ್ಚೆಂಟ್ ಬ್ಯಾಂಕ್ ರಸ್ತೆ, ಬುರುಜನಹಟ್ಟಿ ಸರ್ಕಲ್, ಸಂಗೊಳ್ಳಿರಾಯಣ್ಣ ವೃತ್ತ, ಎಸ್.ಬಿ.ಎಂ.ಸರ್ಕಲ್, ಪತಂಜಲಿ ಆಸ್ಪತ್ರೆ ರಸ್ತೆ ಮೂಲಕ ಸಾಗಿದ ಪಂಜಿನ ಮೆರವಣಿಗೆ ಆನೆ ಬಾಗಿಲಿನಲ್ಲಿ ಮುಕ್ತಾಯಗೊಂಡಿತು.
ಲೀಲಾಧರ ಠಾಕೂರ್, ಬಿಜೆಪಿ.ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಎ.ಮುರಳಿ, ಜಿತೇಂದ್ರ, ರುದ್ರೇಶ್, ಯರ್ರಿಸ್ವಾಮಿ, ಶ್ರೀನಿವಾಸ್, ಓಂಕಾರ್, ಶ್ರೀರಾಮ ಸೇನೆಯ ವೀಣ, ಬಿಜೆಪಿ. ಕಾರ್ಯದರ್ಶಿ ಎ.ರೇಖಾ ಇನ್ನು ಅನೇಕರು ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರಣಿಗೆಯುದ್ದಕ್ಕೂ ಭಾರತ್ ಮಾತ ಕಿ ಜೈ, ವಂದೆ ಮಾತರಂ ಎನ್ನು ಘೋಷಣೆಗಳು ಮೊಳಗಿದವು.



