ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ದೇಹದಲ್ಲಿ ಸಮಸ್ಯೆ ಕಾಣಿಸಿಕೊಂಡಾಗಲೆ ಆರೋಗ್ಯದ ಮಹತ್ವ ಗೊತ್ತಾಗುವುದೆಂದು ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಸಿ.ಜಿ.ಶ್ರೀನಿವಾಸ್ ತಿಳಿಸಿದರು.
ದವಳಗಿರಿ ಬಡಾವಣೆಯಲ್ಲಿರುವ ಇನ್ನರ್ವೀಲ್ಹ್ ಕ್ಲಬ್ ಸಭಾ ಭವನದಲ್ಲಿ ಅಮೃತ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ, ಇನ್ನರ್ವೀಲ್ಹ್ ಕ್ಲಬ್, ಪತಂಜಲಿ ಯೋಗ ಟ್ರಸ್ಟ್, ದೇವಾಲಯ ಸಂವರ್ಧನಾ ಸಮಿತಿ ಹಾಗೂ ದವಳಗಿರಿ ನಾಗರೀಕರ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲರೂ ಒತ್ತಡದ ನಡುವೆ ಬದುಕುತ್ತಿರುವುದರಿಂದ ಪ್ರತಿಯೊಬ್ಬರು ಇಂತಹ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಪತಂಜಲಿ ಯೋಗ ಸಮಿತಿಯ ದೇವೆಂದ್ರನಾಯ್ಕ, ಇನ್ನರ್ವೀಲ್ಹ್ ಕ್ಲಬ್ ಅಧ್ಯಕ್ಷೆ ರಾಧಾ, ಗಾಯತ್ರಿ ಶಿವರಾಂ, ಮೇಘಾ, ಅಮೃತ ಆಯುರ್ವೇದಿಕ್ ಕಾಲೇಜಿನ ಡಾ.ನವೀನ್ ಸಜ್ಜನ್ ಹಾಗೂ ವೈದ್ಯರುಗಳ ತಂಡ, ಯೋಗ ಗುರು ಭರಮಸಾಗರ ತಿಪ್ಪೇಸ್ವಾಮಿ, ಡಾ.ಶ್ರೀಹರ್ಷ ಇವರುಗಳು ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿದ್ದರು.
ಜೆ.ಎಸ್.ಗುರುಮೂರ್ತಿ ವಂದಿಸಿದರು. ಡಾ.ಶಶಿಕಿರಣ್ ಗುಡೆಕೋಟೆ ನಿರೂಪಿಸಿದರು. ೧೩೦ ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.



