ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ತೂಬಗೆರೆ ವಲಯದ ಘಾಟಿ ಸುಬ್ರಹ್ಮಣ್ಯ ದೇವಾಲಯದ ಕಲ್ಯಾಣಿ ಸ್ವಚ್ಛತೆ ಹಾಗೂ ಹೂಳು ತೆಗೆಯುವ ಕಾಮಗಾರಿಗೆ ಘಾಟಿ ಪ್ರಾಧಿಕಾರದ ಮ್ಯಾನೇಜರ್ ಮಹಾಂತೇಶ್ ಚಾಲನೆ ನೀಡಿದರು.
ಕಲ್ಯಾಣಿಗೆ ಪೂಜಾ ವಿಧಿ ವಿಧಾನಗಳೊಂದಿಗೆ ದೇವಾಲಯದ ಅರ್ಚಕರಾದ ನವೀನ್ ರವರು ಪೂಜೆ ಸಲ್ಲಿಸಿದರು.
ತೂಬಗೆರೆಯ ಚಂದ್ರಶೇಖರ್ ಅವರಿಗೆ ಸ್ವಚ್ಚತೆ ಹಾಗೂ ಹೂಳು ತೆಗೆಯುವ ಕಾಮಗಾರಿಯ ಆದೇಶ ಪತ್ರ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ,ಘಾಟಿ ಪ್ರಾಧಿಕಾರ ಸದಸ್ಯರಾದ ಹೇಮಲತಾ ರಮೇಶ್, ಒಕ್ಕೂಟದ ಅಧ್ಯಕ್ಷರಾದ ಮುನಿರಾಜು, ಗ್ರಾಂ ಪಂಚಾಯತ್ ಸದಸ್ಯರಾದ ಪುರುಷೋತ್ತಮ್ , ಒಕ್ಕೂಟದ ಪದಾಧಿಕಾರಿ ಚಂದ್ರಶೇಖರ್ ,ಶೈಲಜಾ, ದೇವಾಲಯ ಸಿಬ್ಬಂದಿ ಮಂಜುನಾಥ್, ಶಿವಪುರ ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್ ,ತಾಲೂಕು ಕೃಷಿ ಮೇಲ್ವಿಚಾರಕರು,
/ಕೆರೆ ನೋಡೆಲ್ ಅಧಿಕಾರಿ ಲೋಹಿತ್ ಗೌಡ , ಕಛೇರಿ ಪ್ರಭಂಧಕರಾದ ಮಂಜುನಾಥ್, ಮೇಲ್ವಿಚಾರಕರಾದ ಶಬರೀಶ್, ಈರಣ್ಣ, ರಘು, ಬಸವರಾಜ್, ಆಡಿಟರ್ ನೇತ್ರಾವತಿ,ಶಿವಪುರ ಶೌರ್ಯ ತಂಡದ ಅಮರಾವತಿ, ಮಂಜುನಾಥ್,ಮಂಜುಳ ಸೇವಾಪ್ರತಿನಿಧಿ ರೂಪ, ಹೇಮಾ ಉಪಸ್ಥಿತರಿದ್ದರು.



