ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಭೂಮಿ ಪೂಜೆ ಸಲ್ಲಿಸಿ ಮಾತನಾಡಿ ೧೯೧೨ ರಲ್ಲಿ ಸ್ಥಾಪನೆಯಾದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣಕ್ಕೆ ಎರಡುವರೆ ಕೋಟಿಯಿಂದ ಎರಡು ಮುಕ್ಕಾಲು ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಡಿಸಿಸಿ. ಬ್ಯಾಂಕ್ನಿಂದ ೨ ಕೋಟಿ ರೂ.ಗಳ ಸಾಲ ಪಡೆಯಲಾಗಿದೆ. ಈ.ಟೆಂಡರ್ ಮೂಲಕ ಆರ್.ಮಂಜುನಾಥ್ಗೆ ಗುತ್ತಿಗೆ ನೀಡಿದ್ದು, ಜಿಲ್ಲೆಯಲ್ಲಿಯೇ ಎಲ್ಲಿಯೂ ಇಲ್ಲದಂತ ಸಹಕಾರಿ ಭವನ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
೯೦ ಅಡಿ ಫಂಕ್ಷನ್ ಹಾಲ್, ಏಳು ರೂಂ, ಡೈನಿಂಗ್ ಹಾಲ್, ಸ್ಟೋರ್ ರೂಂ, ಲಿಫ್ಟ್, ಎಸಿ. ವ್ಯವಸ್ಥೆಯಿರುತ್ತದೆ. ಜನವರಿ ಒಳಗೆ ಹೈಟೆಕ್ ಸಹಕಾರಿ ಸಮುದಾಯ ಭವನ ಕಟ್ಟಡ ಪೂರ್ಣಗೊಳಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಶಾಸಕರುಗಳಾದ ಕೆ.ಸಿ.ವೀರೇಂದ್ರಪಪ್ಪಿ, ಬಿ.ಜಿ.ಗೋವಿಂದಪ್ಪ ಹಾಗೂ ಡಿಸಿಸಿ. ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾದ ಇಲಿಯಾಸ್ ಉಲ್ಲಾ ಷರೀಪ್ ಇವರುಗಳ ಸಹಕಾರದೊಂದಿಗೆ ಸುಸಜ್ಜಿತವಾದ ಹೈಟೆಕ್ ಸಹಕಾರಿ ಸಮುದಾಯ ಭವನ ನಿರ್ಮಾಣವಾಗಲಿದೆ ಎಂದು ಹೇಳಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷೆ ಎನ್.ಎಂ.ಪುಷ್ಪವಲ್ಲಿ, ನಿರ್ದೇಶಕರುಗಳಾದ ಸುರೇಶ್ಭಾಫ್ನ, ಸಿ.ಕೆ.ಸತ್ಯಮೂರ್ತಿ, ಶ್ರೀನಿವಾಸ್ಮೂರ್ತಿ, ಹರೀಶ್ಬಾಬು, ಸೂರ್ಯಪ್ರಕಾಶ್, ಚಂಪಿಕ, ನಿಶಾನಿ ದಶರಥ, ಚಂದ್ರಪ್ಪ, ತಿಪ್ಪೇಸ್ವಾಮಿ, ಶಬ್ಬೀರ್ ಅಹಮದ್, ದೊರೆಸ್ವಾಮಿ ಕೆ, ಸಾಧಿಕ್ ಅಲಿಖಾನ್, ವ್ಯವಸ್ಥಾಪಕ ನಯೀಮ್ ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗದವರು ಭೂಮಿ ಪೂಜೆಯಲ್ಲಿದ್ದರು.



