Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಲಕ್ಷಾಂತರ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

Advertisement

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ಕಾರ್ಯಾ ಚರಣೆ,ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಿಯದರ್ಶಿನಿ ಬಡಾವಣೆಯ ತೂಬಗೆರೆ ಹರೀಶ್ ಎಂಬುವವರ ಗೋಡೌನ್ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಬರೋಬ್ಬರಿ 21.5 ಟನ್ ಅಕ್ರಮ ಪಡಿತರ ಅಕ್ಕಿ ವಶಪಡೆಸಿ ಕೊಂಡು, ಆರೋಪಿ ಹರೀಶ್ ಎಂಬುವವರನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

ಇತ್ತೀಚೆಗೆ ರಾಜ್ಯಾದ್ಯಂತ ಪಡಿತರ ಅಕ್ಕಿ ಸಾಗಟ,ಮತ್ತು ದಾಸ್ತಾನು ಮಾಡಿ ರಾಜ್ಯ ಸರ್ಕಾರದ ಅನ್ನ ಭಾಗ್ಯ ಅಕ್ಕಿ ಕನ್ನಹಾಕುತಿದ್ದ ಅನೇಕಪ್ರಕರಣಗಳು ದಿನ ನಿತ್ಯ ಸುದ್ದಿ ಯಾಗುತ್ತಿರುವ ಹಿನ್ನಲೆ ಜನಸಾಮಾನ್ಯರು ಜಾಗೃತರಾಗಿ  ಅಕ್ರಮ ಅಕ್ಕಿದಂದೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಅವರಿಗೆ ಹತ್ತಿರ ಮತ್ತು ನಂಬಿಕೆಯಿರುವ ಅಧಿಕಾರಿ ಅಥವಾ ಸುದ್ದಿ ಮಾದ್ಯಮ ಸ್ನೇಹಿತರ ಗಮನೆತರುವಂತಹ ಕಾರ್ಯಕ್ಕೆ ಕೈಹಾಕುತ್ತಿರುವುದು ಶ್ಲಾಗನೀಯ.

ಅದರಂತೆ ನೆನ್ನೆ ನಗರ ಹೊರವಲಯದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಅಕ್ರಮ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಮಾಹಿತಿ ಪಡೆದ ತಹಶಿಲ್ದಾರ್ ಮಲ್ಲಪ್ಪ ನವರು ಮತ್ತು ಪೊಲೀಸ್ ಇನ್ಸಪೆಕ್ಟರ್ ಸಾದಿಕ್ ಪಾಷರವರು  ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ  ಆದೇಶ ಪಡೆದ ತಂಡ ಕಾರ್ಯಾಚರಣೆಗೆ ಮುಂದಾದಾಗ  ನಿರೀಕ್ಷೆಗೂ ಮೀರಿ ಮೂರು ಕಡೆ ದಸ್ತಾನುಮಾಡಲಾಗಿದ್ದ ಬರೋಬ್ಬರಿ 21.5. ಟನ್ ಅಕ್ಕಿ ಮತ್ತು ಸ್ವಲ್ಪ ಪ್ರಮಾಣದ ರಾಗಿಯನ್ನು ವಶಕ್ಕೆ ಪಡೆಯುದರಲ್ಲಿ ಅಧಿಕಾರಿಗಳು  ಯಶಸ್ವಿ ಯಾಗಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದಹಿನ್ನಲೆಯಲ್ಲಿ ಆಹಾರ ಸಚಿವರ ಉಸ್ತುವಾರಿ ಕ್ಷೇತ್ರದಲ್ಲೇ ಈರೀತಿ  ಪಡಿತರ ಅಕ್ರಮವಾಗಿ ಅಡ್ಡದಾರಿ ಹಿಡಿದರೇ ರಾಜ್ಯಾದ್ಯಂತ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೇವರೇ ಬಲ್ಲ ಎಂದು ತಮ್ಮ ಆಶ್ಚರ್ಯ ವ್ಯಕ್ತಪಡೆಸಿದ್ದಾರೆ.
ಕಾರ್ಯಾಚರಣೆಯ ತಂಡದಲ್ಲಿ ತಾಲ್ಲೂಕು ಆಹಾರ ನಿರೀಕ್ಷಕ ಅನಂತ ಕುಮಾರ್,ಸಹಾಯಕ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಸೈ ಚಂದ್ರಕಲಾ, ಎಎಸ್ಸೈ ರಂಗಸ್ವಾಮಿ ಸಿಬ್ಬಂದಿ ಶ್ರೀನಿವಾಸ ಹಾಜರಿದ್ದರು.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸ್ಫೂರ್ತಿದಾಯಕ ಸದ್ಗ್ರಂಥ ಶ್ರೀಮದ್ ಭಗವದ್ಗೀತೆ- ಅಭಿಷೇಕ್ ಚಕ್ರವರ್ತಿ'ಬ್ರ್ಯಾಂಡ್ ಬೆಂಗಳೂರು' ಹೆಸರಲ್ಲಿ 'ಗಾರ್ಬೇಜ್ ಬೆಂಗಳೂರು' ಸೃಷ್ಟಿ: ಅಶೋಕ್ ವಾಗ್ದಾಳಿ'ಗೃಹ ಜ್ಯೋತಿ' ಹೆಸರಲ್ಲಿ ರಾಜ್ಯಕ್ಕೆ ಕತ್ತಲೆ ಭಾಗ್ಯ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ರಾಜಕೀಯ ಅಂತ್ಯದ ಕಾಲ ಆರಂಭ: ಆರ್. ಅಶೋಕ್ ಭವಿಷ್ಯರಾಜ್ಯದ ಫಲವತ್ತಾದ ಮಣ್ಣಲ್ಲಿ ಕ್ಯಾಲಿಫೋರ್ನಿಯಾ ದ್ರಾಕ್ಷಿ: ಸಿದ್ದೇಶ್ವರ ಶ್ರೀಗಳ ಕನಸು ನನಸುಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ: ನರೇಂದ್ರ ಮೋದಿ ನಾಯಕತ್ವಕ್ಕೆ ಸಂದ ಜಯ ಎಂದ ನಿಖಿಲ್ಅಸ್ಸಾಂನಲ್ಲಿ ಎನ್‌ಡಿಎ ಹ್ಯಾಟ್ರಿಕ್ ಗೆಲುವು: ನಿಖಿಲ್ ಕುಮಾರಸ್ವಾಮಿ ಅಭಿನಂದನೆಸಮುದ್ರದ ಆಳದಲ್ಲಿ ಗಿನ್ನೆಸ್ ದಾಖಲೆ: ಕನ್ನಡಿಗ ಶರತ್ ಆರ್. ಅಶೋಕ್ ತಂಡದ ಐತಿಹಾಸಿಕ ಸಾಧನೆಗೆ ಅಭಿನಂದನೆಬಾಳೆಹೊನ್ನೂರು ಶ್ರೀಗಳಿಗೆ 'ಬಿಎಸ್‌ವೈ ಅಭಿಮಾನೋತ್ಸವ'ಕ್ಕೆ ಆಮಂತ್ರಣ ನೀಡಿದ ಬಿ.ವೈ. ವಿಜಯೇಂದ್ರಅಸ್ಸಾಂನಲ್ಲಿ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಭರ್ಜರಿ ಜಯ: ಬಿ.ವೈ. ವಿಜಯೇಂದ್ರ ಅಭಿನಂದನೆ