ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ (62) ಅವರು ಮೇ 10 ರಂದು ಶನಿವಾರ ಮುಂಜಾನೆ 03:15 ಗಂಟೆಗೆ ವಿಧಿವಶರಾಗಿದ್ದಾರೆ.
ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ವಿವರ-
ನೆಚ್ಚಿನ ನಾಯಕನ ಅಂತಿಮ ದರ್ಶನಕ್ಕಾಗಿ ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ಈ ಕೆಳಗಿನಂತೆ ವ್ಯವಸ್ಥೆ ಮಾಡಿದ್ದಾರೆ.
ಮಧ್ಯಾಹ್ನ 12:00 - 04:00 ಗಂಟೆ ತನಕ ಹಿರಿಯೂರಿನ ನೆಹರೂ(ಕಡ್ಲೆಕಾಯಿ ಮಂಡಿ) ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹಿರಿಯೂರಿನಲ್ಲಿ ಅಂತಿಮ ದರ್ಶನ ಮುಗಿಸಿಕೊಂಡು ಸಂಜೆ 04 ಗಂಟೆ ಹೊರಟು ಸಂಜೆ 4:45 ಚಳ್ಳಕೆರೆಯ ಸ್ವಗೃಹದಲ್ಲಿ ಕೆಲ ಧಾರ್ಮಿಕ ವಿಧಿವಿಧಾನಗಳನ್ನು ಮಾಡಲಾಗುತ್ತದೆ.
ಇದಾದ ನಂತರವೇ ಚಳ್ಳಕೆರೆಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಅಂತ್ಯಕ್ರಿಯೆ: ಮೇ-11 ರಂದು ಸೋಮವಾರ ಮಧ್ಯಾಹ್ನ 03:00 ರಿಂದ 04:00 ಗಂಟೆಯ ಅವಧಿಯಲ್ಲಿ ಜೈನ ಸಮುದಾಯದಲ್ಲಿನ ಪದ್ಧತಿಯಂತೆ ಅಂತ್ಯಕ್ರಿಯೆ ನೆರವೇರಲಿದೆ.


