ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲುಕೈಗೊಂಡಿರುವ ಕಾಮಗಾರಿಯ ಗುಣಮಟ್ಟ ಹಾಗೂ ಮಾಹಿತಿ ಕೇಳಲು ಹೋದರೆ ಗುತ್ತಿಗೆದಾರರು ದೌರ್ಜನ್ಯ ಮಾಡುತ್ತಿದ್ದು ಮಾಹಿತಿ ನೀಡದೆ ದರ್ಪ ಮೆರೆಯುತ್ತಿದ್ದಾರೆ ಎಂದು ಸ್ಥಳೀಯ ವರ್ತಕ ಅಶ್ವಥ್ ರೆಡ್ಡಿ ಆರೋಪಿಸಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾವಿರಾರು ಗ್ರಾಹಕರು ನೂರಾರು ವರ್ತಕರು,ಕೃಷಿಕರು ದೈನಂದಿಕ ವೈವಾಟುಗಳಿಸುತ್ತಾರೆ. ಮಾರುಕಟ್ಟೆಗೆ ಬರುವ ಕೃಷಿಕರಿಗೆ ಹಾಗೂ ವರ್ತಕರಿಗೆ ಸಹಕಾರಿಯಾಗಲಿ ಎಂದು ಕುಡಿಯುವ ನೀರಿನ ಸರಬರಾಜಿಗೆ ಸೌಲಭ್ಯ ತಪ್ಪಿಸಲಾಗುತ್ತಿದೆ ಈ ಕಾಮಗಾರಿಯನ್ನು ಪಡೆದಿರುವ ಗುತ್ತಿಗೆದಾರರ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ವರ್ತಕರು ಆರೋಪವೆಸಿಗಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗ ಧರಣಿ ಕುಳಿತ ವರ್ತಕ ಮಾತನಾಡಿ ಕಾಮಗಾರಿ ಕುರಿತು ಮಾಹಿತಿ ಪಡೆಯಲು ಹೋಗಿದ್ದೆವು , ಆದರೆ ಗುತ್ತಿಗೆದಾರರು ವರ್ತಕರಿಗೆ ಯಾವುದೇ ಬೆಲೆ ಕೊಡದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಅಲ್ಲದೆ ಯಾವ ಅಧಿಕಾರಿಗೆ ಹೇಳುತ್ತೀಯಾ ಹೇಳಿಕೊ ಹೋಗು ಎಂಬ ಉಡಾಫೆ ಉತ್ತರವನ್ನು ನೀಡುತ್ತಿದ್ದು. ಪ್ರಶ್ನೆ ಮಾಡಿದ ವರ್ತಕರ ಮೇಲೆ ಹಲ್ಲೆ ಮಾಡಲು ಮುಂದಾಗಿ ದೌರ್ಜನ್ಯ ಮಾಡುತ್ತಿದ್ದಾರೆ ಈ ಕಾಮಗಾರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ವರ್ತಕರಿಗೆ ಒದಗಿಸಬೇಕು ಇಲ್ಲವೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಅಗ್ರಹಿಸಿದರು.
ಈ ಕಾಮಗಾರಿಯಲ್ಲಿ ಬಳಸಲಾಗುತ್ತಿರುವ ವಸ್ತುಗಳು ಕಳಪೆ ಮಟ್ಟದ್ದಾಗಿದ್ದು ಪ್ರತಿನಿತ್ಯ ಮಾರುಕಟ್ಟೆಯಲ್ಲಿ 40 ಟನ್ ಗಳ ಭಾರ ಹೊಂದಿರುವ ವಾಹನಗಳು ಚಲಿಸುತ್ತಿರುತ್ತದೆ ಪೈಪ್ ಲೈನ್ ಹಾಕಲು ಮಾಡಿರುವ ಹಳ್ಳವು ಒಂದು ಅಡಿಗಿಂತಲೂ ಕಡಿಮೆ ಇದ್ದು ಬಾರಿ ವಾಹನಗಳು ಬಂದಾಗ ಪೈಪ್ ಲೈನ್ ಹೊಡೆದು ಹೋಗುತ್ತದೆ ಅದನ್ನು ಹೇಳಿದರೆ ಗುತ್ತಿಗೆದಾರರು ನಮ್ಮ ಮೇಲೆ ಗಲಾಟೆಗೆ ಬರುತ್ತಾರೆ ಉತ್ತಮ ಕಾಮಗಾರಿ ಮಾಡದೆ ಸಾರ್ವಜನಿಕರ ಹಣ ಪೋಲು ಮಾಡುವುದು ಎಷ್ಟು ಸರಿ ಈ ಕುರಿತು ಎಪಿಎಂಸಿ ಮಾರುಕಟ್ಟೆಯ ಅಧಿಕಾರಿಗಳು ಗಮನ ಹರಿಸಬೇಕು ಕಾಮಗಾರಿಯನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಹನುಮಂತ್ ರಾಜು ಟಿ ಕೆ,ಶಿವಕುಮಾರ್, ಅರುಣ್,ಕೆಂಪೇಗೌಡ ಸೇರಿದಂತೆ ಹಲವು ವರ್ತಕರು ಹಾಜರಿದ್ದರು.



