Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮರುಎಣಿಕೆ 'ಡಕಾಯಿತಿ' ಎನ್ನುವುದು ನ್ಯಾಯಾಂಗಕ್ಕೆ ಮಾಡಿದ ಅಪಮಾನ: ಆರ್. ಅಶೋಕ್ ಕಿಡಿ

Advertisement

ಚಂದ್ರವಳ್ಳಿ ನ್ಯೂಸ್, ​​ಬೆಂಗಳೂರು:
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತಗಳ ಮರುಎಣಿಕೆ ಪ್ರಕ್ರಿಯೆಯನ್ನು "ಡಕಾಯಿತಿ" ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರಹಾಕಿದ್ದಾರೆ. ಇದು ಸಿಎಂ ಅವರ ಬೌದ್ಧಿಕ ಮತ್ತು ನೈತಿಕ "ಅವನತಿ"ಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.

​ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲವೇ?:
​"
ನ್ಯಾಯಾಲಯದ ಆದೇಶದಂತೆ ನಡೆದ ಪ್ರಕ್ರಿಯೆಯನ್ನು ಡಕಾಯಿತಿ ಎನ್ನುವುದು ನ್ಯಾಯಾಂಗ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನ. ಸಂವಿಧಾನದ ಪ್ರತಿಯನ್ನು ಹಿಡಿದು ನಾಟಕ ಮಾಡುವ ರಾಹುಲ್ ಗಾಂಧಿ ಅವರ ಹಿಂಬಾಲಕರಾದ ಸಿದ್ದರಾಮಯ್ಯನವರಿಗೆ ಸಂವಿಧಾನದ ಅಡಿಪಾಯವಾದ ನ್ಯಾಯಾಂಗದ ಮೇಲೆ ನಂಬಿಕೆ ಇಲ್ಲದಿರುವುದು ಈ ನಾಡಿನ ದುರಂತ," ಎಂದು ಅಶೋಕ್ ಟ್ವೀಟ್ ಮಾಡಿದ್ದಾರೆ.

​ಕಾಂಗ್ರೆಸ್‌ಗೆ ಅಕ್ರಮ ಬಯಲಾಗುವ ಭಯವೇ?:
​ಮರುಎಣಿಕೆ ಎಂದ ಕೂಡಲೇ ಕಾಂಗ್ರೆಸ್ ಪಕ್ಷ ಇಷ್ಟೊಂದು ಬೆದರುತ್ತಿರುವುದೇಕೆ? ನಿಮ್ಮ ಅಕ್ರಮಗಳು ಬಯಲಾಗುವ ಭಯ ಕಾಡುತ್ತಿದೆಯೇ? ಎಂದು ಪ್ರಶ್ನಿಸಿರುವ ಅಶೋಕ್, "ಕಾನೂನು ಪದವೀಧರರಾದ ನೀವು, ಕಾನೂನು ಪಾಲನೆಯನ್ನೇ ಡಕಾಯಿತಿ ಎನ್ನುತ್ತಿರುವುದು ನಿಮ್ಮ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ," ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

​ಊಸರವಳ್ಳಿ ನಾಟಕ ಎಂದ ಅಶೋಕ್:
​ಸಿದ್ದರಾಮಯ್ಯನವರ ಹೇಳಿಕೆಗಳನ್ನು ಹಂಗಿಸಿರುವ ಅಶೋಕ್, "ಒಮ್ಮೆ ವೋಟ್ ಚೋರಿ ಎನ್ನುತ್ತೀರಿ, ಇನ್ನೊಮ್ಮೆ ಇವಿಎಂ ಹ್ಯಾಕಿಂಗ್ ಎನ್ನುತ್ತೀರಿ, ಈಗ ನ್ಯಾಯಾಲಯದ ಆದೇಶವನ್ನೇ ಡಕಾಯಿತಿ ಎನ್ನುತ್ತಿದ್ದೀರಿ. ನಿಮ್ಮ ಈ ಬಣ್ಣ ಬದಲಿಸುವ ಊಸರವಳ್ಳಿ ನಾಟಕವನ್ನು ಕರ್ನಾಟಕದ ಜನತೆ ಗಮನಿಸುತ್ತಿದ್ದಾರೆ. ಇದು ಡಕಾಯಿತಿಯಲ್ಲ, ನಿಮ್ಮ ಅಕ್ರಮಕ್ಕೆ ಹಿಡಿದ ಕನ್ನಡಿ ಮತ್ತು ಜನರ ತೀರ್ಪನ್ನು ಹತ್ತಿಕ್ಕುವ ನಿಮ್ಮ ಪ್ರಯತ್ನಕ್ಕೆ ಬಿದ್ದ ಪೆಟ್ಟು," ಎಂದು ಹೇಳಿದ್ದಾರೆ.

​​ಸವಾಲು: ದಮ್ಮಿದ್ದರೆ, ತಾಕತ್ತಿದ್ದರೆ ಮೈಕ್ ಮುಂದೆ ಗರ್ಜಿಸುವುದನ್ನು ಬಿಟ್ಟು ನ್ಯಾಯಾಲಯದಲ್ಲಿ ವಾದ ಮಂಡಿಸಿ.
​ಎಚ್ಚರಿಕೆ: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ನಿಮ್ಮ ಮಿತ್ರರಿಗೆ ಬಂದ ಗತಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಬರಲಿದೆ.

​ಹಿನ್ನೆಲೆ: 2023ರ ವಿಧಾನಸಭಾ ಚುನಾವಣೆಯ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆಗೆ ಹೈಕೋರ್ಟ್ ಆದೇಶಿಸಿತ್ತು. ಇತ್ತೀಚೆಗೆ ನಡೆದ ಮರುಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್ ಅವರು ವಿಜಯಿ ಎಂದು ಘೋಷಿತರಾಗಿದ್ದಾರೆ.

​ಈ ಬೆಳವಣಿಗೆಯಿಂದಾಗಿ ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
೨೪ ಗಂಟೆಯೊಳಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ-ಸಂಸದ ಕಾರಜೋಳಮರು ಮೌಲ್ಯಮಾಪನದಲ್ಲಿ ಹೆಚ್ಚಿದ ಅಂಕ ಕಲಾ ವಿಭಾಗದ ಪಿ.ವಾಣಿ ಜಿಲ್ಲೆಗೆ ಟಾಪರ್ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮ ಯಶಸ್ವಿ ಗೊಳಿಸಬೇಕಿದೆ-ಎಸ್. ಎಂ. ಹರೀಶ್ ಗೌಡಜೆಡಿಎಸ್ ಜಿಲ್ಲಾಧ್ಯಕ್ಷರು ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸಬೇಕು- ಹುಸ್ಕೂರ್ ಆನಂದ್ಸ್ಟಾರ್ಟ್‌ಅಪ್‌ಗಳ ಸಂಶೋಧನೆಗಳಿಗೆ ಜಾಗತಿಕ ಮಾನ್ಯತೆ ಕಲ್ಪಿಸಲು ಒಪ್ಪಂದಕ್ಕೆ ಸಹಿಪಠ್ಯ ಪುಸ್ತಕದಲ್ಲಿ ಇರುವಂತೆಯೇ ಮಾತನಾಡುತ್ತೇವೆ- ಡಾ.ಭಾಸ್ಕರಾನಂದ ಕುಮಾರ್ಎಸ್.ಎಂ. ಕೃಷ್ಣ ದತ್ತಿ ನಿಧಿಗೆ ಯುವ ಮುಖಂಡ ರಘುವೀರ್ ಎಸ್ ಗೌಡ 3 ಲಕ್ಷ ದೇಣಿಗೆಬಿಎಸ್ ವೈ ಅಭಿಮಾನೋತ್ಸವ ಹಿನ್ನೆಲೆ ಮಾದಿಗ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಮರುಎಣಿಕೆ 'ಡಕಾಯಿತಿ' ಎನ್ನುವುದು ನ್ಯಾಯಾಂಗಕ್ಕೆ ಮಾಡಿದ ಅಪಮಾನ: ಆರ್. ಅಶೋಕ್ ಕಿಡಿಕೇರಳದಲ್ಲಿ ಯುಡಿಎಫ್ ಸುನಾಮಿ: ಕಾಂಗ್ರೆಸ್ ಗೆಲುವಿನಲ್ಲಿ ಶ್ರಮ ಸಾರ್ಥಕ! ಸಚಿವ ಎಂ.ಬಿ. ಪಾಟೀಲ್