Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬದುಕಿನ ದಿಕ್ಕನ್ನೇ ಬದಲಿಸಿದ ಆ ಒಂದು ಸೋಲು…

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1991ರಲ್ಲಿ ನನ್ನ ಎಸ್ಎಸ್ಎಲ್ ಸಿ ಫಲಿತಾಂಶ ಬಂದಾಗ ನಾನು ಅನುತ್ತೀರ್ಣನಾದೆ. ಆ ಫಲಿತಾಂಶ ನನ್ನ ಬದುಕಿನ ಮೊದಲ ದೊಡ್ಡ ಸೋಲು. ಊರಿಗೆ ಮರಳಿದಾಗ ಬಡತನದಲ್ಲಿದ್ದ ನನ್ನ ತಂದೆ
ತಾಯಿಯವರ ಮುಖದಲ್ಲಿ ನೋವು ಕಂಡೆ. ನನ್ನ ಭವಿಷ್ಯಕ್ಕಾಗಿ ಅವರು ನನ್ನನ್ನು ಹಿರಿಯೂರಿನ ಒಂದು ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಸಿ, ಒಂದು ಸಣ್ಣ ಕೊಠಡಿಯಲ್ಲಿ ಉಳಿಸಿ ಊರಿಗೆ ಮರಳಿದರು.

ಅಲ್ಲಿಂದ ನನ್ನ ಹೋರಾಟದ ಜೀವನ ಆರಂಭವಾಯಿತು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾ, ಪ್ರತಿದಿನ ಬೆಳಗಿನ ಜಾವ ಐದು ಗಂಟೆಗೆ ಎದ್ದು ಪತ್ರಿಕೆ ವಿತರಿಸುತ್ತಿದ್ದೆ. ಜೊತೆಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಬ್ಯಾಂಕಿನಲ್ಲಿ ದಿನಗೂಲಿ ಕೆಲಸ ಮಾಡಿದ್ದೇನೆ. ವೆಲ್ಡಿಂಗ್ ಶಾಪ್‌ನಲ್ಲಿ ಕೆಲಸ ಮಾಡಿದ್ದೇನೆ. ಬಂಗಾರದ ಅಂಗಡಿಯಲ್ಲೂ ದುಡಿದಿದ್ದೇನೆ. ಬೇರೆಯವರ ಮನೆಯಲ್ಲಿ ಉಳಿದುಕೊಂಡು ಕಾರು ತೊಳೆಯುವ ಕೆಲಸವನ್ನೂ ಮಾಡಿದ್ದೇನೆ. ಬದುಕಿಗಾಗಿ ಸಿಕ್ಕ ಪ್ರತಿಯೊಂದು ಕೆಲಸವನ್ನೂ ಸಣ್ಣದುದೊಡ್ಡದು ಎಂದು ನೋಡದೆ ಪ್ರಾಮಾಣಿಕವಾಗಿ ಮಾಡಿದ್ದೇನೆ.

Advertisement

ಸುಮಾರು ಮೂರು ವರ್ಷ ಒಂಟಿಯಾಗಿ ಜೀವನ ನಡೆಸಿದೆ. ಆ ಏಕಾಂತವೇ ನನಗೆ ನನ್ನನ್ನು ನಾನು ಅರಿಯಲು ಕಲಿಸಿತು.

ನನ್ನ ಬದುಕಿನಲ್ಲಿ ಬರವಣಿಗೆಯ ಬೀಜ ಬಿತ್ತಿದ ಒಂದು ಸಣ್ಣ ಘಟನೆ ಇದೆ. ನನ್ನ ಸ್ನೇಹಿತನೊಬ್ಬ ಶಾಲೆಯಲ್ಲಿ ಓದುತ್ತಿದ್ದಾಗಲೇ ಕಥೆಗಳನ್ನು ಬರೆಯುತ್ತಿದ್ದ. ಅವನು ಕಥೆ ಬರೆದು ಪುಸ್ತಕದಲ್ಲಿ ಇಟ್ಟುಕೊಳ್ಳುವುದನ್ನು ನಾನು ಕುತೂಹಲದಿಂದ ನೋಡುತ್ತಿದ್ದೆ. ಇವನಿಗೆ ಇಷ್ಟು ಸುಂದರವಾಗಿ ಬರೆಯಲು ಹೇಗೆ ಸಾಧ್ಯ?” ಎಂಬ ಆ ಕುತೂಹಲ ನನ್ನೊಳಗೆ ಒಂದು ಆಸೆಯನ್ನು ಹುಟ್ಟಿಸಿತು. ಆ ಕುತೂಹಲವೇ ಮುಂದೆ ನಾನು ಬರೆಯಬೇಕೆಂಬ ಸ್ಪೂರ್ತಿಯಾಯಿತು.

ಒಂದು ದಿನ ನಾನೂ ಕವಿತೆ ಬರೆಯಬೇಕೆಂಬ ಆಸೆಯಿಂದ ಪೆನ್ನು ಹಿಡಿದೆ. ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ನನ್ನ ಕವಿತೆಯನ್ನು ಕಳುಹಿಸಿದೆ. ಅದಕ್ಕೆ ಮೂರನೇ ಬಹುಮಾನ ಬಂದಾಗ, “ನಾನೂ ಬರೆಯಬಲ್ಲೆಸಾಹಿತ್ಯದಲ್ಲಿ ಏನಾದರೂ ಸಾಧಿಸಬಲ್ಲೆಎಂಬ ಆತ್ಮವಿಶ್ವಾಸ ನನ್ನೊಳಗೆ ಹುಟ್ಟಿತು. ಅಂದು ಹಿಡಿದ ಪೆನ್ನು ಇಂದಿಗೂ ನನ್ನ ಕೈಯಲ್ಲಿದೆ.

ನನ್ನ ಬದುಕಿನಲ್ಲಿ ಹೇಳಲಾಗದ ಮತ್ತೊಂದು ಅಧ್ಯಾಯವೂ ಇದೆಅದು ಪ್ರೀತಿ. ನಾನು ಶಾಲೆಯಲ್ಲಿ ಓದುತ್ತಿದ್ದಾಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೆ. ಅದು ಬಾಲ್ಯದ ಮನಸ್ಸಿನಲ್ಲಿ ಹುಟ್ಟಿದ ಒಂದು ನಿರ್ಮಲವಾದ ಭಾವನೆ. ಆ ಪ್ರೀತಿಯನ್ನು ಇಂದಿಗೂ ನನ್ನ ಹೃದಯದಲ್ಲಿ ಗೌರವದಿಂದ ಕಾಪಾಡಿಕೊಂಡಿದ್ದೇನೆ. ಕಾಲ ಬದಲಾಯಿತು, ಜೀವನದ ದಾರಿಗಳು ಬದಲಾದವುಆದರೆ ಆ ಪ್ರೀತಿ ಮಾತ್ರ ನನ್ನ ಮನಸ್ಸಿನಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಹಾಗೆಯೇ ಉಳಿಯಿತು.

ಇಂದಿಗೂ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಧೈರ್ಯ ನನಗಿಲ್ಲ. ಹೇಳಬೇಕೆಂದಿದ್ದ ಮಾತುಗಳು ಮನಸ್ಸಿನಲ್ಲೇ ಉಳಿದುಹೋಗಿವೆ. ಬಹುಶಃ ಕೆಲವು ಪ್ರೀತಿಗಳಿಗೆ ಒಪ್ಪಿಗೆಯ ಅಗತ್ಯವಿಲ್ಲಅವು ನೆನಪಾಗಿ ಉಳಿದರೂ ಬದುಕಿಗೆ ಒಂದು ಸಿಹಿಯಾದ ಅರ್ಥ ನೀಡುತ್ತವೆ.

ಸಾಹಿತ್ಯ ನನ್ನ ಬದುಕಿಗೆ ದಾರಿ ತೋರಿಸಿತು; ಸಂಘಟನೆ ನನ್ನ ಕನಸುಗಳಿಗೆ ರೆಕ್ಕೆ ನೀಡಿತು.

2021ರಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ, ನನ್ನದೇ ಆದ ವಿಶ್ವ ಕನ್ನಡ ಕಲಾ ಸಂಸ್ಥೆ ಕಟ್ಟಿಕೊಂಡು ಕನ್ನಡ ಸಾಹಿತ್ಯಸಂಸ್ಕೃತಿಯ ಸೇವೆಯಲ್ಲಿ ತೊಡಗಿದ್ದೇನೆ.

ವಿದ್ಯುತ್ ಇಲ್ಲದ ದಿನಗಳಲ್ಲಿ ದೀಪದ ಬತ್ತಿಯಲ್ಲಿ ಬಟ್ಟೆ ಹೊಲೆಯುತ್ತಿದ್ದ ತಾಯಿ, ಕೆಲಸಕ್ಕಾಗಿ ಗುಡ್ಡಕ್ಕೆ ಹೋಗುತ್ತಿದ್ದ ತಂದೆಇಂದು ನನ್ನ ಬೆಳವಣಿಗೆಯನ್ನು ಕಣ್ಣಾರೆ ನೋಡಲು ಅವರಿಬ್ಬರೂ ಇಲ್ಲ. ಆದರೆ ಅವರ ಕನಸು ಮತ್ತು ಆಶೀರ್ವಾದವೇ ನನ್ನ ಪ್ರತಿಯೊಂದು ಹೆಜ್ಜೆಗೆ ಶಕ್ತಿ.

ಒಮ್ಮೆ ನನ್ನನ್ನು ಗುರುತಿಸದವರೇ ಇಂದು ಗೌರವದಿಂದ ನನ್ನ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಆದರೆ ಈ ಗೌರವ ನನ್ನದು ಮಾತ್ರವಲ್ಲ; ನನ್ನ ಹಿಂದೆ ನಿಂತು ನನ್ನನ್ನು ರೂಪಿಸಿದ ತಂದೆತಾಯಿಯದು, ನನ್ನನ್ನು ಪ್ರೇರೇಪಿಸಿದ ಸ್ನೇಹಿತರದು, ನನ್ನ ಕೈಗೆ ಪೆನ್ನು ಕೊಟ್ಟ ಸಾಹಿತ್ಯದದು.

ನನ್ನ ಜೀವನದಲ್ಲಿ ಸೋಲು ಒಂದು ಅಂತ್ಯವಾಗಲಿಲ್ಲ. ಅದೇ ನನ್ನ ಹೊಸ ಬದುಕಿನ ಮೊದಲ ಹೆಜ್ಜೆಯಾಯಿತು.

ಸೋಲು ನನ್ನನ್ನು ನಿಲ್ಲಿಸಲಿಲ್ಲ
ಅದು ನನ್ನ ದಿಕ್ಕನ್ನು ಬದಲಿಸಿತು.
ಬಡತನ ನನ್ನ ಕನಸುಗಳನ್ನು ಕೊಲ್ಲಲಿಲ್ಲ

ಅದು ನನ್ನೊಳಗಿನ ಹೋರಾಟವನ್ನು ಗಟ್ಟಿಗೊಳಿಸಿತು.
ಒಂದು ಸ್ನೇಹಿತನ ಕಥೆ ಬರೆಯುವ ಕುತೂಹಲ ಪೆನ್ನನ್ನು ಹಿಡಿಸಿತು

ಒಂದು ಕವಿತೆಯ ಬಹುಮಾನ ಆತ್ಮವಿಶ್ವಾಸ ನೀಡಿತು
ಮತ್ತು ಸಾಹಿತ್ಯ ನನ್ನ ಬದುಕಿಗೆ ಹೊಸ ಗುರುತನ್ನು ನೀಡಿತು.

ಇಂದು ನಾನು ನಿಂತಿರುವ ಈ ಜಾಗಕ್ಕೆ ಕಾರಣ ನನ್ನ ಪರಿಶ್ರಮ ಮಾತ್ರವಲ್ಲ; ನನ್ನ ತಂದೆತಾಯಿಯ ತ್ಯಾಗ, ಸ್ನೇಹಿತರ ಪ್ರೀತಿ, ನನ್ನೊಳಗಿನ ಕನಸು ಮತ್ತು ಸಾಹಿತ್ಯದ ಮೇಲಿನ ಅಪಾರ ನಂಬಿಕೆ.

ನನ್ನ ಸೋಲನ್ನು ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿದ ಸಾಹಿತ್ಯಕ್ಕೂ, ನನ್ನ ಕನಸುಗಳಿಗೆ ರೆಕ್ಕೆ ನೀಡಿದ ವಿಶ್ವ ಕನ್ನಡ ಕಲಾ ಸಂಸ್ಥೆಗೂ, ನನ್ನ ಬದುಕಿನ ಪ್ರತಿಯೊಂದು ಹಂತದಲ್ಲೂ ಜೊತೆಯಾದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.
ಲೇಖನ-ಈ ರವೀಶ ಅಕ್ಕರ, ಸಂಸ್ಥಾಪಕ ಅಧ್ಯಕ್ಷರು, ವಿಶ್ವ ಕನ್ನಡ ಕಲಾ ಸಂಸ್ಥೆ ಹಿರಿಯೂರು.

 

 

Author
ಸಿ.ಹೆಂಜಾರಪ್ಪ
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮಂಡಳಿಗಳಿಗೆ ಆರ್ಥಿಕ ನೆರವು ಮತ್ತು ಪಕ್ಷ ಸಂಘಟನೆಯ ಸಂಭ್ರಮ "ಅಮೆರಿಕ ಅಧ್ಯಕ್ಷ ಡೊನಾಲ್ಡ್‌ಟ್ರಂಪ್‌ಕೂಡ ನಮ್ಮ ಗ್ಯಾರಂಟಿ ಕಾಪಿ ಮಾಡುತ್ತಿದ್ದಾರೆ" - ಸಿಎಂ ಡಿ.ಕೆ. ಶಿವಕುಮಾರ್‌ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿಅವಘಡ; ಒಂದೇ ಕುಟುಂಬದ ನಾಲ್ವರು ಸಜೀವ ದಹನಚಿಕನ್ ಬಿರಿಯಾನಿ ತಿನ್ನುತ್ತಿರುವ ಗಣೇಶನ ಬ್ಯಾನರ್ ಅಳವಡಿಕೆ ವಿವಾದ; ಅಂಗಡಿ ಮಾಲೀಕನ ಬಂಧನಗಣೇಶೋತ್ಸವ ವಿವಾದ ತೀವ್ರ; ಪೊಲೀಸ್ ಠಾಣೆ ಬಳಿಯೇ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ'ವಂದೇ ಮಾತರಂ' ಮೊದಲ ಎರಡು ಚರಣ ಕಡ್ಡಾಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯುವಶಕ್ತಿಯಲ್ಲಿ ಭಾರತೀಯತೆ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿದ ಮಹಾನ್ ಚೇತನ ತಿಲಕ್ಬದುಕಿನ ದಿಕ್ಕನ್ನೇ ಬದಲಿಸಿದ ಆ ಒಂದು ಸೋಲು…ರಾಜ್ಯ ಮಟ್ಟದ ಪರಿಸರ ಸತ್ಯಾಗ್ರಹ: ಚಿತ್ರದುರ್ಗದಿಂದ 100ಕ್ಕೂ ಹೆಚ್ಚು ಪರಿಸರ ಆಸಕ್ತರು ಭಾಗಿಕುಂಚಿಟಿಗ ಅಧಿಕಾರಿಗಳ ಮತ್ತು ನೌಕರರ ಸಂಘದ 24ನೇ ವಾರ್ಷಿಕ ಸರ್ವ ಸದಸ್ಯರ ಸಭೆ