ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ಈದ್ಗಾ ಮೈದಾನದಲ್ಲಿ ನಡೆದ ಸೌಹಾರ್ದಯುತ ಕಾರ್ಯಕ್ರಮಕ್ಕೆ ಕೆಪಿಸಿಸಿ ಸಮಿತಿಯ ಉಪಾಧ್ಯಕ್ಷರಾದ ಆರ್. ಮಂಜುನಾಥ್ ಅವರು ಭೇಟಿ ನೀಡಿ, ಮುಸ್ಲಿಂ ಸಮುದಾಯದ ಬಾಂಧವರಿಗೆ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು,
ಜನಪ್ರತಿನಿಧಿಗಳು ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಸ್ಪರ ಹಬ್ಬದ ಶುಭ ಹಾರೈಸಿಕೊಂಡರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಕೆಪಿಸಿಸಿ ಸಮಿತಿ ಉಪಾಧ್ಯಕ್ಷ ಆರ್. ಮಂಜುನಾಥ್, ಮಾಜಿ ಕೌನ್ಸಿಲರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಈರಲಿಂಗೆ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾಗೇಂದ್ರ ನಾಯಕ, ಮಾಜಿ ಕೌನ್ಸಿಲರ್ ಪದ್ಮನಾಭನ್, ಮಾಜಿ ಕೌನ್ಸಿಲರ್
ಜಿ. ಧನಂಜಯ ಕುಮಾರ್,
ಮಾಜಿ ಕೌನ್ಸಿಲರ್ ಈ. ಮಂಜುನಾಥ್, ಸುಹಾಸ್ ಸುಧಾಕರ್, ಎಚ್. ಆರ್. ತಿಮ್ಮಯ್ಯ, ಪ್ರಸನ್ನ ಕಪ್ರೆಹಳ್ಳಿ
ಅರಳ್ಳಿಕೆರೆ ಕೃಷ್ಣಮೂರ್ತಿ,
ಡಾ. ಪ್ರಕಾಶ್, ಜಿ. ಶಿವಾನಂದ್ ಎಂ.ವಿ ಕೊಟ್ಟಿಗೆ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

ವಿಶೇಷ ಸೂಚನೆ: ಹಿರಿಯೂರಿನ ಈದ್ಗಾ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮವು ಸೌಹಾರ್ದತೆ ಮತ್ತು ಭ್ರಾತೃತ್ವಕ್ಕೆ ಸಾಕ್ಷಿಯಾಯಿತು. ಪಕ್ಷದ ವಿವಿಧ ಸ್ತರದ ಮುಖಂಡರು ಒಂದೆಡೆ ಸೇರಿ ಸಮಾಜದ ಬಾಂಧವರೊಂದಿಗೆ ಸಂತೋಷವನ್ನು ಹಂಚಿಕೊಂಡರು.



