ರಾಜಕೀಯ ಸಾಮಾಜಿಕ ಜವಾಬ್ದಾರಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜನರ ಮನದಲ್ಲಿ ಪ್ರಭುತ್ವದ ರಾಜಕೀಯ ಬೆಳೆದು ನಿಂತಿದೆ. ಸಾರ್ವಜನಿಕ ಸಮತೋಲನವನ್ನು ಸರಿಪಡಿಸುವ ಜ್ಞಾನ ಅರಿತ ವ್ಯಕ್ತಿಗಳಿಗೆ ಜನಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ರಾಜಕೀಯ ಪಕ್ಷಗಳು ಕಲ್ಪಿಸಬೇಕು. ಸಾಂವಿಧಾನಿಕ ನೀತಿಯಲ್ಲಿ ನಮ್ಮ ಮತ ನಮ್ಮ ಹಕ್ಕು ಈ ವಿಚಾರ ಮತದಾರರು ಅರಿಯಬೇಕು. ಸ್ವಾಭಿಮಾನದ ಬದುಕಿನ ಜೊತೆ ಜೊತೆಗೆ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಮತ ಎಂಬ ಸಂಕಲ್ಪಮಾಡಿ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾರ ಪ್ರಭುಗಳು ಮತದಾನ ಮಾಡಬೇಕು.

- Advertisement - 

ರಾಜಕೀಯದ ಅಧಿಕಾರದಲ್ಲಿ  ತಂತ್ರ ಕುತಂತ್ರಗಳ ನೀತಿಯಲ್ಲಿ ಆಸ್ತಿ ಅಂತಸ್ತು ಗಳಿಸಲು ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠೆ ಪ್ರದರ್ಶಿಸಲು ರಾಜಕೀಯ ಕ್ಷೇತ್ರಕ್ಕೆ ಬರಬಾರದು. ಕ್ಷೇತ್ರದಲ್ಲಿನ  ಮೂಲಭೂತ ಸೌಕರ್ಯಗಳ ಜೊತೆಗೆ  ಜನತೆಯ ಸ್ವಾಭಿಮಾನದ ಜೀವನ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ಈ ಮಹತ್ವದ ವಿಚಾರದಲ್ಲಿಯೇ ರಾಜಕೀಯ ಮುಖಂಡರು ಸ್ಪರ್ಧಾತ್ಮಕ ನೀತಿಯಲ್ಲಿ ಬೆಳೆಯಬೇಕು.

- Advertisement - 

 ಹಣ ಹೂಡಿಕೆ ಮಾಡಿ. ಹಣ ಸಂಪಾದನೆ ಮಾಡುವ ವ್ಯಾಪಾರಿ ನೀತಿ ರಾಜಕೀಯ ಕ್ಷೇತ್ರದಲ್ಲಿ ಅಡಗಿರುವುದಿಲ್ಲ . ರಾಜಕೀಯ ಎಂಬುದು ಸೇವಾ ಮನೋಭಾವದ ಪರಂಪರೆ. ಸೇವೆಯ ಮನೋಧರ್ಮದ  ಜನಾನುರಾಗಿಯೇ ನಮ್ಮ ಜನನಾಯಕ. ಇದುವೇ ಜನರಿಂದ ಜನರಿಗಾಗಿರುವ ವರ್ತಮಾನದ ಭವ್ಯ ಭವಿಷ್ಯ.
ಲೇಖನ-ರಘು ಗೌಡ.

 

- Advertisement - 

Share This Article
error: Content is protected !!
";