ನಟ ದರ್ಶನ್ ​ಗೆ ಆರು ವಾರಗಳ ಮಧ್ಯಂತರ ಜಾಮೀನು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿ​ಗೆ ಹೈಕೋರ್ಟ್ ಬುಧವಾರ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

- Advertisement - 

ದರ್ಶನ್ ಬೆನ್ನು ನೋವಿನ ಆರೋಗ್ಯ ತಪಾಸಣೆಗಾಗಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಆದೇಶ ಹೊರಡಿಸಿದ್ದಾರೆ.

- Advertisement - 

ಕೊಲೆ ಆರೋಪಿ ನಟ ದರ್ಶನ್‌ಗೆ ಕಳೆದ ಐದು ತಿಂಗಳಿನಿಂದ ಜೈಲುವಾಸದಲ್ಲಿದ್ದು ಜಾಮೀನು ಸಿಕ್ಕಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲಿರುವ ಅವರ ನಿವಾಸವನ್ನು ಶುಚಿಗೊಳಿಸಲಾಗಿದೆ. ಮನೆ ಕಳೆದ ಐದು ತಿಂಗಳಿನಿಂದ ಬಿಕೋ ಎನ್ನುತ್ತಿತ್ತು.

ಇದೀಗ ನಟನ​ ಆಗಮನದ ಹಿನ್ನೆಲೆಯಲ್ಲಿ ನಿವಾಸ ಮತ್ತು ವಾಹನಗಳನ್ನು ಕೆಲಸಗಾರರು ಶುಚಿಗೊಳಿಸುತ್ತಿದ್ದಾರೆ. ದರ್ಶನ್ ಅವರ ಫೇವರೆಟ್​ ಸ್ಫೋರ್ಟ್ಸ್‌ಕಾರನ್ನು ಮನೆ ಕೆಲಸಗಾರರು ಸ್ವಚ್ಛ ಮಾಡುತ್ತಿದ್ದುದು ಕಂಡುಬಂತು.

- Advertisement - 

ದರ್ಶನ್ ಅವರಿಗೆ ಬೆನ್ನು ನೋವಿರುವ ಹಿನ್ನೆಲೆಯಲ್ಲಿ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಸುದ್ದಿ ಕೇಳಿದ ಕನ್ನಡ ಚಿತ್ರರಂಗದ ಅವರ ಸ್ನೇಹಿತರು ಖುಷಿ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ನಂದ ಕಿಶೋರ್ ಮಾತನಾಡಿ, ದರ್ಶನ್‌ಅವರಿಗೆ ಜಾಮೀನು ಸಿಕ್ಕಿರುವುದು ಕನ್ನಡ ಚಿತ್ರರಂಗಕ್ಕೆ ಸಂಭ್ರಮದ ವಾತಾವರಣ ತಂದುಕೊಟ್ಟಿದೆ. ಅವರ ಕುಟುಂಬಕ್ಕೂ ದೇವರು ಒಳ್ಳೆದು ಮಾಡಲಿ. ನಾನೀಗ ದೇವಸ್ಥಾನದಲ್ಲಿದ್ದೀನಿ. ಈ ಹೊತ್ತಲ್ಲೇ ನನಗೆ ವಿಷಯ ತಿಳಿಯಿತು. ಶುಭ ಸೂಚನೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.

 

Share This Article
error: Content is protected !!
";