ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ದಯವಿಲ್ಲದ ಧರ್ಮವದೇವುದಯ್ಯಾ, ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿಯೂ..." ಎಂಬ ಮಾನವೀಯತೆಯ ಮಂತ್ರವನ್ನು ಜಗತ್ತಿಗೆ ಸಾರಿದ 12ನೇ ಶತಮಾನದ ಕ್ರಾಂತಿಕಾರಿ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ.
ಸಾಮಾಜಿಕ ಸುಧಾರಕ, ಶರಣ ಪರಂಪರೆಯ ಮಾರ್ಗದರ್ಶಕ ಬಸವಣ್ಣನವರ ತತ್ವಗಳು ಇಂದಿನ ಆಧುನಿಕ ಸಮಾಜಕ್ಕೂ ದಾರಿದೀಪವಾಗಿವೆ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಗಿದೆ.
ಸಮಾನತೆಯ ಕಹಳೆ ಮೊಳಗಿಸಿದ ಕ್ರಾಂತಿಪುರುಷ 12ನೇ ಶತಮಾನದ ಕಾಲಘಟ್ಟದಲ್ಲಿ ಸಮಾಜದಲ್ಲಿ ಆಳವಾಗಿ ಬೇರೂರಿದ್ದ.
ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ಸಾಮಾಜಿಕ ತಾರತಮ್ಯ-
ಶೋಷಣೆ ಹಾಗೂ ಮೂಢನಂಬಿಕೆಗಳ ವಿರುದ್ಧ ಬಸವಣ್ಣನವರು ಧ್ವನಿ ಎತ್ತಿದರು. ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ ಅವರು, 'ಕಾಯಕವೇ ಕೈಲಾಸ' ಎಂಬ ಸಂದೇಶದ ಮೂಲಕ ದುಡಿಮೆಯ ಗೌರವವನ್ನು ಎತ್ತಿ ಹಿಡಿದರು.
ದಯೆಯೇ ಧರ್ಮದ ಮೂಲ-
ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಬದುಕಿನ ಪಾಠಗಳು. "ದಯವೇ ಧರ್ಮದ ಮೂಲವಯ್ಯಾ" ಎಂಬ ಅವರ ನುಡಿಗಳು ಸಕಲ ಜೀವರಾಶಿಗಳ ಮೇಲಿರಬೇಕಾದ ಕರುಣೆಯನ್ನು ಒತ್ತಿಹೇಳುತ್ತವೆ. ಕೂಡಲಸಂಗಮದೇವನ ಒಲುಮೆ ಬೇಕೆಂದರೆ ದಯೆ ಮತ್ತು ಪ್ರಾಮಾಣಿಕತೆ ಅತಿ ಮುಖ್ಯ ಎಂಬುದು ಅವರ ಅಚಲ ನಂಬಿಕೆಯಾಗಿತ್ತು.
"ವಚನಗಳ ಮೂಲಕ ಜ್ಞಾನದ ಜ್ಯೋತಿ ಬೆಳಗಿದ ಮಹಾನ್ ಮಾನವತಾವಾದಿ ಬಸವಣ್ಣನವರ ಬದುಕು ಮತ್ತು ತತ್ವಗಳು ಸರ್ವರಿಗೂ ಪ್ರೇರಣೆ."
ದೇವೇಗೌಡ, ಮಾಜಿ ಪ್ರಧಾನಿ.
ಸಂದೇಶದ ಸಾರ-ಜಗಜ್ಯೋತಿ ಬಸವೇಶ್ವರರ ಜಯಂತಿಯ ಈ ಶುಭ ಸಂದರ್ಭದಲ್ಲಿ, ಅವರ ಸಮಾನತೆಯ ಆಶಯಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳು ಕತ್ತಲ ಹಾದಿಯಲ್ಲಿರುವ ಸಮಾಜಕ್ಕೆ ಎಂದೆಂದಿಗೂ ಜ್ಞಾನದ ಜ್ಯೋತಿಯಾಗಿ ಬೆಳಗಲಿ ಎಂಬುದು ಭಕ್ತರ ಆಶಯವಾಗಿದೆ.


