ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾಣೇಹಳ್ಳಿ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಶ್ರೀ ಶಿವಕುಮಾರ ಕಲಾ ಸಂಘ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ 2026ರ ಮೇ 17 ರಿಂದ ಜೂನ್ 5 ರವರೆಗೆ "ಯುವಜನ ಶೈಕ್ಷಣಿಕ ರಂಗ ಶಿಬಿರ" ಹೊಸ ತಲೆಮಾರಿಗೆ 20 ದಿನಗಳ ವಸತಿ ಸಹಿತ ರಂಗ ಶಿಕ್ಷಣವನ್ನು ಆಯೋಜಿಸಲಾಗಿದೆ.
ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕಳೆದ 18 ವರ್ಷಗಳಿಂದ ರಂಗಶಿಕ್ಷಣ ನೀಡುತ್ತಾ ಬಂದಿರುವ ಈ ಸಂಸ್ಥೆಯು, ರಂಗಾಸಕ್ತ ಯುವಜನತೆಗಾಗಿ ಈ ವಿಶೇಷ ಶಿಬಿರವನ್ನು ಹಮ್ಮಿಕೊಂಡಿದೆ.
ತರಬೇತಿ ವಿಷಯಗಳು: ನಟನೆ, ಸಂವಹನ ಕೌಶಲ್ಯ, ರಂಗ ವಿನ್ಯಾಸದ ಪ್ರಾಯೋಗಿಕ ಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಸಾಮಾಜಿಕ ತಿಳುವಳಿಕೆ. ವಿಶೇಷತೆ: ನುರಿತ ಅಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರಿಂದ ತರಬೇತಿ ಹಾಗೂ ಖ್ಯಾತ ನಿರ್ದೇಶಕರಿಂದ ನಾಟಕ ಪ್ರಯೋಗ.
ಸೌಲಭ್ಯ: ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ.
ಪ್ರವೇಶಾತಿ ನಿಯಮಗಳು: ವಯೋಮಿತಿ: 18 ರಿಂದ 32 ವರ್ಷದೊಳಗಿರಬೇಕು. ವಿದ್ಯಾರ್ಹತೆ: ಕನಿಷ್ಠ ಎಸ್ಎಸ್ಎಲ್ಸಿ ಅಥವಾ ಪಿಯುಸಿ ತೇರ್ಗಡೆಯಾಗಿರಬೇಕು.
ಆದ್ಯತೆ: ರಂಗಭೂಮಿ ಅನುಭವವಿರುವ ಕಲಾವಿದರು ಹಾಗೂ ಪದವಿ/ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಪ್ರವೇಶ ಶುಲ್ಕ: ₹500 (ಐನೂರು ರೂಪಾಯಿಗಳು ಮಾತ್ರ).
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು ಅರ್ಜಿಗಳನ್ನು ಆನ್ಲೈನ್ ಮೂಲಕ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲು ಮೇ 15, 2026 ಕೊನೆಯ ದಿನಾಂಕವಾಗಿದೆ.
ವಿಳಾಸ: ಪ್ರಾಂಶುಪಾಲರು, ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಸಾಣೇಹಳ್ಳಿ, ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ - 577515.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದೂರವಾಣಿ: 9880872740, 9448398144, 9480282791 , 9902100881
ವೆಬ್ಸೈಟ್* : https://theatreschoolsanehalli.in
ಹೊಸಬರಿಗೆ ರಂಗಭೂಮಿಯ ಪ್ರವೇಶಕ್ಕೆ ಹಾಗೂ ಅನುಭವವಿರುವವರಿಗೆ ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಇದು ಉತ್ತಮ ಅವಕಾಶ.
ರಂಗಾಸಕ್ತರು ಹೆಚ್ಚಿನ ಮಾಹಿತಿಗಾಗಿ ಡಾ.ಟಿ.ಎಚ್.ಲವಕುಮಾರ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ- academy.nataka@gmail.ಕಾಂ ಇವರನ್ನು ಸಂಪರ್ಕಿಸಬಹುದು.


