ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
೨೦೨೫-೨೬ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಮಿಷನ್ ಯೋಜನೆಯಡಿ ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ಮಿಷನ್ ಕಾರ್ಯಕ್ರಮದಡಿ, ಹೊಸತೋಟಗಳ ಸ್ಥಾಪನೆ, ಹಳೆತೋಟಗಳ ಪುನಶ್ಚೇತನ, ಅಣಬೆ ಉತ್ಪಾದನಾ ಘಟಕ, ಪ್ರಾಥಮಿಕ ಸಂಸ್ಕರಣಾ ಘಟಕ,
ಈರುಳ್ಳಿ ಶೇಖರಣಾ ಘಟಕ, ಟ್ರ್ಯಾಕ್ಟರ್, ಟಿಲ್ಲರ್, ಟ್ರ್ಯಾಕ್ಟರ್ ಚಾಲಿತ ಬೂಮ್ ಸ್ಪ್ರೇಯರ್, ವೈಯಕ್ತಿಕ ಕೃಷಿ ಹೊಂಡ, ಜೇನುಪೆಟ್ಟಿಗೆ, ಪಕ್ಷಿ ನಿರೋಧಕ ಬಲೆ, ತರಕಾರಿ ಬೆಳೆಗಳಿಗೆ ಮಲ್ಚಿಂಗ್ ಅಳವಡಿಕೆ, ಫಾರಂಗೇಟ್ ಪ್ಯಾಕ್ಹೌಸ್, ಸೋಲಾರ್ ಕ್ರಾಪ್ ಡ್ರೈಯರ್, ಹಣ್ಣು ಅಥವಾ ಬಂಚ್ಕವರ್ ಈ ಎಲ್ಲಾ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅವಕಾಶವಿದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಚಿಕ್ಕಮಗಳೂರು - ೮೨೭೭೦೭೮೬೯೬, ಕಡೂರು - ೯೩೮೦೭೯೪೬೧೦, ಕೊಪ್ಪ - ೯೭೪೦೭೫೯೫೯೭, ಮೂಡಿಗೆರೆ - ೯೪೪೯೧೩೭೭೪೩, ನ.ರಾ.ಪುರ - ೯೪೪೯೭೫೯೭೭೭, ಶೃಂಗೇರಿ - ೯೪೪೮೫೩೦೩೫೭ ಹಾಗೂ ತರೀಕೆರೆ - ೯೯೮೦೦೦೯೪೩೮ ಸಂಖ್ಯೆಗಳಲ್ಲಿ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ(ಜಿ.ಪಂ.)ರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪ ನಿರ್ದೇಶಕಿ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


