LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಾಮಾಜಿಕ ಭದ್ರತಾ ಪಿಂಚಣಿ ಅಕ್ರಮಕ್ಕೆ ಬ್ರೇಕ್: 18.06 ಲಕ್ಷ ಫಲಾನುಭವಿಗಳ ಪಿಂಚಣಿ ಅಮಾನತು!

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂಧ್ಯಾ ಸುರಕ್ಷಾ’ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ನಡೆಯುತ್ತಿದ್ದ ನಕಲಿ ಹಾಗೂ ಅಕ್ರಮ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಭಾರಿ ಕಾರ್ಯಾಚರಣೆ ನಡೆಸಿದೆ.

ಅರ್ಹತೆ ಇಲ್ಲದಿದ್ದರೂ ಪಿಂಚಣಿ ಪಡೆಯುತ್ತಿದ್ದವರನ್ನು ಪತ್ತೆ ಹಚ್ಚಲಾಗಿದ್ದುರಾಜ್ಯಾದ್ಯಂತ ಒಟ್ಟು 18.06 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ನೀಡಿರುವ ಮಾಹಿತಿಯ ಪ್ರಮುಖ ಮುಖ್ಯಾಂಶಗಳು ಹೀಗಿವೆ.

ತಪಾಸಣೆಯ ಪ್ರಮುಖ ಅಂಕಿ-ಅಂಶಗಳು (2026ರ ಆಗಸ್ಟ್ 13ರವರೆಗೆ)ಒಟ್ಟು ನೋಂದಾಯಿತ ಫಲಾನುಭವಿಗಳು: 83,12,536ಗುರುತಿಸಲಾದ ಶಂಕಾಸ್ಪದ ಪ್ರಕರಣಗಳು: 23,14,544ತಾತ್ಕಾಲಿಕವಾಗಿ ಸ್ಥಗಿತಗೊಂಡ ಪಿಂಚಣಿಗಳು: 18,06,0322026ರ ಜುಲೈನಲ್ಲಿ ಪಿಂಚಣಿ ಪಡೆದವರು: 62,43,640.

ಅಕ್ರಮ ತಡೆಯಲು 'ಸಂಯೋಜನಆ್ಯಪ್ ಬಳಕೆಕುಟುಂಬದ ದತ್ತಾಂಶಆದಾಯ ತೆರಿಗೆ ಪಾವತಿದಾರರ ಮಾಹಿತಿ, APL ಕಾರ್ಡ್‌ಗಳುವಯಸ್ಸಿನ ವ್ಯತ್ಯಾಸ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (HRMS) ದಾಖಲೆಗಳನ್ನು ಸಂಯೋಜನ’ ಮೊಬೈಲ್ ಆಪ್ ಮೂಲಕ ಪರಿಶೀಲಿಸಲಾಗಿದೆ. ತದನಂತರ ಗ್ರಾಮ ಲೆಕ್ಕಾಧಿಕಾರಿಗಳು ಭೌತಿಕ ತಪಾಸಣೆ ನಡೆಸಿಶಂಕಾಸ್ಪದ ಪ್ರಕರಣಗಳ ಪಟ್ಟಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದ್ದಾರೆ.

ಯಾವ ಯೋಜನೆಯಲ್ಲಿ ಎಷ್ಟು ಶಂಕಾಸ್ಪದ ಪ್ರಕರಣಗಳಾದ ಸಂಧ್ಯಾ ಸುರಕ್ಷಾ ಯೋಜನೆ 12,61,610ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ 5,63,938ವಿಧವಾ ಪಿಂಚಣಿ 3,36,746ಅಂಗವಿಕಲರ ಪಿಂಚಣಿ 2,56,750ಮನಸ್ವಿನಿ ಪಿಂಚಣಿ 17,360ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ 883ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಪಿಂಚಣಿ 526ಮೈತ್ರಿ ಪಿಂಚಣಿ 454ಆ್ಯಸಿಡ್ ದಾಳಿ ಸಂತ್ರಸ್ತರ ಪಿಂಚಣಿ 08.

ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿಗಳ ವಿವರ ಬೆಳಗಾವಿ: 1,82,758, ಶಂಕಾಸ್ಪದ ಪ್ರಕರಣಗಳು (1,51,311 ಪಿಂಚಣಿ ಸ್ಥಗಿತ), ಬೆಂಗಳೂರು ನಗರ: 1,36,669 ಶಂಕಾಸ್ಪದ ಪ್ರಕರಣಗಳು (1,24,073 ಪಿಂಚಣಿ ಸ್ಥಗಿತ), ಮೈಸೂರು: 1,33,831 ಶಂಕಾಸ್ಪದ ಪ್ರಕರಣಗಳು (1,11,808 ಪಿಂಚಣಿ ಸ್ಥಗಿತ), ಕಲಬುರಗಿ: 1,18,387 ಶಂಕಾಸ್ಪದ ಪ್ರಕರಣಗಳು (98,984 ಪಿಂಚಣಿ ಸ್ಥಗಿತ), ತುಮಕೂರು: 1,18,217 ಶಂಕಾಸ್ಪದ ಪ್ರಕರಣಗಳು (71,111 ಪಿಂಚಣಿ ಸ್ಥಗಿತ), ದಾವಣಗೆರೆ: 1,04,805 ಶಂಕಾಸ್ಪದ ಪ್ರಕರಣಗಳು (94,012 ಪಿಂಚಣಿ ಸ್ಥಗಿತ), ರಾಯಚೂರು: 1,01,272 ಶಂಕಾಸ್ಪದ ಪ್ರಕರಣಗಳು (89,387 ಪಿಂಚಣಿ ಸ್ಥಗಿತ). ವಿಳಾಸ ಬದಲಾವಣೆಆದಾಯ ಪ್ರಮಾಣಪತ್ರ ಸಲ್ಲಿಸದಿರುವುದು ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ಪಿಂಚಣಿ ತಡೆಹಿಡಿಯಲಾಗಿದೆ.

ನೈಜ ಹಾಗೂ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸಿದ ತಕ್ಷಣವೇ ಅವರ ಪಿಂಚಣಿಯನ್ನು ಪುನರಾರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ಯಾರೂ ಗೈರಾಗಬೇಡಿ, ಒಗ್ಗಟ್ಟಿನಿಂದ ವಿಪಕ್ಷಗಳನ್ನು ಎದುರಿಸಿ": ಸಿಎಂ ಡಿ.ಕೆ. ಶಿವಕುಮಾರ್ಹಿನ್ನೀರಿಗೆ ಇಳಿದು ಯುವಕ ಸಾವು, ದಾವಣಗೆರೆಯಲ್ಲಿ ಭೀಕರ ಬೈಕ್ ಅಪಘಾತ: ಮೂವರ ದುರಂತ ಅಂತ್ಯ!ದಕ್ಷಿಣ ವಲಯ ಮಂಡಳಿ ಸಭೆ: ಅಮಿತ್ ಶಾಗೆ ಭವ್ಯ ಸ್ವಾಗತ1.07 ಕೋಟಿ ಮತದಾರರು ಪರಿಷ್ಕೃತ ಪಟ್ಟಿಯಿಂದ ಹೊರಕ್ಕೆ: ಮುಖ್ಯ ಚುನಾವಣಾಧಿಕಾರಿ ಮಾಹಿತಿಸಾಮಾಜಿಕ ಭದ್ರತಾ ಪಿಂಚಣಿ ಅಕ್ರಮಕ್ಕೆ ಬ್ರೇಕ್: 18.06 ಲಕ್ಷ ಫಲಾನುಭವಿಗಳ ಪಿಂಚಣಿ ಅಮಾನತು!ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ: ಸ್ವಕ್ಷೇತ್ರ ತಿಪಟೂರಿನಲ್ಲಿ ಇಂದು ಅಂತಿಮ ಸಂಸ್ಕಾರರಾಜ್ಯದ ಜೈಲುಗಳಲ್ಲಿ 'ವಿಐಪಿ' ಸಂಸ್ಕೃತಿ ಇಲ್ಲ, ಕಾನೂನು ಎಲ್ಲರಿಗೂ ಒಂದೇ: ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟನೆ"ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಸೇರಿಸಿ": ರಾಜ್ಯ ಸರ್ಕಾರಕ್ಕೆ ನೀರಾವರಿ ಹೋರಾಟ ಸಮಿತಿ ಉಗ್ರ ಆಗ್ರಹ!27.60 ಲಕ್ಷ ಲಾಭದಲ್ಲಿ ವಿಶ್ವ ಚೇತನ ಸಹಕಾರಿ ಸಂಘ : ಎ. ಲಕ್ಷ್ಮೀಶಚಿತ್ರದುರ್ಗ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ : ಕೆ ಮಂಜುನಾಥ್