ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
‘ಸಂಧ್ಯಾ ಸುರಕ್ಷಾ’ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ನಡೆಯುತ್ತಿದ್ದ ನಕಲಿ ಹಾಗೂ ಅಕ್ರಮ ಪ್ರಕರಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಭಾರಿ ಕಾರ್ಯಾಚರಣೆ ನಡೆಸಿದೆ.
ಅರ್ಹತೆ ಇಲ್ಲದಿದ್ದರೂ ಪಿಂಚಣಿ ಪಡೆಯುತ್ತಿದ್ದವರನ್ನು ಪತ್ತೆ ಹಚ್ಚಲಾಗಿದ್ದು, ರಾಜ್ಯಾದ್ಯಂತ ಒಟ್ಟು 18.06 ಲಕ್ಷ ಫಲಾನುಭವಿಗಳ ಪಿಂಚಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಶಾಸಕರಾದ ಡಿ. ವೇದವ್ಯಾಸ ಕಾಮತ್ ಮತ್ತು ಡಾ. ವೈ. ಭರತ್ ಶೆಟ್ಟಿ ಅವರ ಪ್ರಶ್ನೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ನೀಡಿರುವ ಮಾಹಿತಿಯ ಪ್ರಮುಖ ಮುಖ್ಯಾಂಶಗಳು ಹೀಗಿವೆ.
ತಪಾಸಣೆಯ ಪ್ರಮುಖ ಅಂಕಿ-ಅಂಶಗಳು (2026ರ ಆಗಸ್ಟ್ 13ರವರೆಗೆ)ಒಟ್ಟು ನೋಂದಾಯಿತ ಫಲಾನುಭವಿಗಳು: 83,12,536, ಗುರುತಿಸಲಾದ ಶಂಕಾಸ್ಪದ ಪ್ರಕರಣಗಳು: 23,14,544, ತಾತ್ಕಾಲಿಕವಾಗಿ ಸ್ಥಗಿತಗೊಂಡ ಪಿಂಚಣಿಗಳು: 18,06,032, 2026ರ ಜುಲೈನಲ್ಲಿ ಪಿಂಚಣಿ ಪಡೆದವರು: 62,43,640.
ಅಕ್ರಮ ತಡೆಯಲು 'ಸಂಯೋಜನ' ಆ್ಯಪ್ ಬಳಕೆಕುಟುಂಬದ ದತ್ತಾಂಶ, ಆದಾಯ ತೆರಿಗೆ ಪಾವತಿದಾರರ ಮಾಹಿತಿ, APL ಕಾರ್ಡ್ಗಳು, ವಯಸ್ಸಿನ ವ್ಯತ್ಯಾಸ ಹಾಗೂ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯ (HRMS) ದಾಖಲೆಗಳನ್ನು ‘ಸಂಯೋಜನ’ ಮೊಬೈಲ್ ಆಪ್ ಮೂಲಕ ಪರಿಶೀಲಿಸಲಾಗಿದೆ. ತದನಂತರ ಗ್ರಾಮ ಲೆಕ್ಕಾಧಿಕಾರಿಗಳು ಭೌತಿಕ ತಪಾಸಣೆ ನಡೆಸಿ, ಶಂಕಾಸ್ಪದ ಪ್ರಕರಣಗಳ ಪಟ್ಟಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದ್ದಾರೆ.
ಯಾವ ಯೋಜನೆಯಲ್ಲಿ ಎಷ್ಟು ಶಂಕಾಸ್ಪದ ಪ್ರಕರಣಗಳಾದ ಸಂಧ್ಯಾ ಸುರಕ್ಷಾ ಯೋಜನೆ 12,61,610, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ 5,63,938, ವಿಧವಾ ಪಿಂಚಣಿ 3,36,746, ಅಂಗವಿಕಲರ ಪಿಂಚಣಿ 2,56,750, ಮನಸ್ವಿನಿ ಪಿಂಚಣಿ 17,360, ಎಂಡೋಸಲ್ಫಾನ್ ಸಂತ್ರಸ್ತರ ಪಿಂಚಣಿ 883, ಆತ್ಮಹತ್ಯೆ ಮಾಡಿಕೊಂಡ ರೈತರ ವಿಧವೆಯರ ಪಿಂಚಣಿ 526, ಮೈತ್ರಿ ಪಿಂಚಣಿ 454, ಆ್ಯಸಿಡ್ ದಾಳಿ ಸಂತ್ರಸ್ತರ ಪಿಂಚಣಿ 08.
ಜಿಲ್ಲಾವಾರು ಸ್ಥಗಿತಗೊಂಡ ಪಿಂಚಣಿಗಳ ವಿವರ ಬೆಳಗಾವಿ: 1,82,758, ಶಂಕಾಸ್ಪದ ಪ್ರಕರಣಗಳು (1,51,311 ಪಿಂಚಣಿ ಸ್ಥಗಿತ), ಬೆಂಗಳೂರು ನಗರ: 1,36,669 ಶಂಕಾಸ್ಪದ ಪ್ರಕರಣಗಳು (1,24,073 ಪಿಂಚಣಿ ಸ್ಥಗಿತ), ಮೈಸೂರು: 1,33,831 ಶಂಕಾಸ್ಪದ ಪ್ರಕರಣಗಳು (1,11,808 ಪಿಂಚಣಿ ಸ್ಥಗಿತ), ಕಲಬುರಗಿ: 1,18,387 ಶಂಕಾಸ್ಪದ ಪ್ರಕರಣಗಳು (98,984 ಪಿಂಚಣಿ ಸ್ಥಗಿತ), ತುಮಕೂರು: 1,18,217 ಶಂಕಾಸ್ಪದ ಪ್ರಕರಣಗಳು (71,111 ಪಿಂಚಣಿ ಸ್ಥಗಿತ), ದಾವಣಗೆರೆ: 1,04,805 ಶಂಕಾಸ್ಪದ ಪ್ರಕರಣಗಳು (94,012 ಪಿಂಚಣಿ ಸ್ಥಗಿತ), ರಾಯಚೂರು: 1,01,272 ಶಂಕಾಸ್ಪದ ಪ್ರಕರಣಗಳು (89,387 ಪಿಂಚಣಿ ಸ್ಥಗಿತ). ವಿಳಾಸ ಬದಲಾವಣೆ, ಆದಾಯ ಪ್ರಮಾಣಪತ್ರ ಸಲ್ಲಿಸದಿರುವುದು ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕಾಗಿ ಪಿಂಚಣಿ ತಡೆಹಿಡಿಯಲಾಗಿದೆ.
ನೈಜ ಹಾಗೂ ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಪೂರ್ಣಗೊಳಿಸಿದ ತಕ್ಷಣವೇ ಅವರ ಪಿಂಚಣಿಯನ್ನು ಪುನರಾರಂಭಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.



