Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದೈವ ಕೃಪೆ, ಮಾನವ ಪ್ರಯತ್ನದಿಂದಾಗಿ ಗಂಗಾವತರಣ: ತರಳಬಾಳು ಶ್ರೀ

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರೈತರಿಗೆ ಬಹುಮುಖ್ಯವಾಗಿ ಬೇಕಾಗಿರುವ ನೀರಿನ ಅವಶ್ಯಕತೆಯನ್ನು ಸರಿಯಾದ ಸಮಯದಲ್ಲಿ ಮನಗಂಡು, ಹಲವು ವರ್ಷಗಳಾದರೂ ಮನಸ್ಸಿಗೆ ಸಮಾಧಾನ ತರುವಂತಹ ಮಳೆಯನ್ನೇ ಕಾಣದ ಅನೇಕ ಊರಿನ ಜನರಿಗೆ, ಆ ಊರುಗಳಲ್ಲಿನ ಕೆರೆಗಳಿಗೆ ಒಂದು ಕಡೆ ಪರಮಪೂಜ್ಯರು ಏತನೀರಾವರಿ ಯೋಜನೆಗಳ ತ್ವರಿತ ಗತಿಯಲ್ಲಿ ಅನುಷ್ಠಾನ ಆಗುವಂತೆ ಮಾಡಿ ನೀರು ಉಣಿಸಿದರೆ; ಮತ್ತೊಂದು ಕಡೆಗೆ ವರುಣ ಕೃಪೆಯಿಂದ ಆ ಕೆರೆಗಳು ಮೈದುಂಬಿ ಹರಿಯುತ್ತಿವೆ. ಪೂಜ್ಯರ ಪರಿಶ್ರಮದ ಜೊತೆಜೊತೆಗೆ ದೇವರ ಅನುಗ್ರಹ ಕೂಡಾ ಜೊತೆಯಾದರೆ ಎಂತಹ ಸಾಮಾಜಿಕ ಪರಿವರ್ತನೆ ಆಗಬಹುದು ಎನ್ನುವುದಕ್ಕೆ ಈ ಎಲ್ಲಾ ಬೆಳವಣಿಗೆಗಳು ನಿದರ್ಶನ.

ಪೂಜ್ಯರ ಋಣವನ್ನು ಮತ್ತು ದೇವರ ಅನುಗ್ರಹದ ಭಾರವನ್ನು ಜನರು ಸೂಕ್ಷ್ಮಮತಿಗಳಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ತೀರಿಸಬೇಕು. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ 1,108 ಶ್ರೀ ಗುರುಗಳಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ರೈತರು ಅಭಿನಂದಿಸಿದ್ದಾರೆ.

ಈ ಕೆರೆಕಟ್ಟೆಗಳನ್ನು ತುಂಬಿಸುವ ಕಾರ್ಯಕ್ರಮಕ್ಕೆ ಸ್ಪಂದಿಸಿದ ಎಲ್ಲಾ ರಾಜಕಾರಣಿಗಳಿಗೂ ಹಾಗೂ ಅಧಿಕಾರಿಗಳಿಗೂ ಮತ್ತು ಹಿರಿಯರಿಗೂ ಧನ್ಯವಾದಗಳನ್ನು ರೈತರು ತಿಳಿಸಿದ್ದಾರೆ.

ಗುರುಗಳ ಕಡೆಯಿಂದ ಸಮಾಜಮುಖಿ ಕಾರ್ಯಕ್ರಮಗಳು ಸಾಕಷ್ಟು ಆಗಿವೆ ಮತ್ತು ಆಗುತ್ತಲೇ ಇರುತ್ತವೆ. ಇಂತಹ ಮಠ ಹಾಗೂ ಗುರುಗಳನ್ನು ಪಡೆದ ನಾವುಗಳೆ ಧನ್ಯರು ಎಂದು ಹೇಳುತ್ತಾ ಇಂತಹ ಅನೇಕ ಕಾರ್ಯಕ್ರಮಗಳಿಗೆ ಎಲ್ಲರೂ ಒಂದಾಗಿ ಕೈಜೋಡಿಸಬೇಕೆಂದು ಪ್ರಾರ್ಥಿಸುವುದಾಗಿ ರೈತರು ಮನವಿ ಮಾಡಿದ್ದಾರೆ.

ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ,
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತನೀವನು ಕೂಡಲಸಂಗಮದೇವ.

ಮೇಲಿನ ವಚನದಂತೆ, ಕೆರೆಗಳಿಗೆ ನೀರು ತರುವುದರ ಹಿಂದೆ ತಮ್ಮದೇ ಪ್ರಯತ್ನ ಇದ್ದರೂ, ಗುರುಗಳು ದೈವದ ಮೇಲೆ ಹಾಕಿದ್ದಾರೆ. ದೈವ ಕೃಪೆಯಿಂದ ಆಗಿದೆ ಎಂದು ಹೇಳಿದ್ದಾರೆ.

ಮಾಡುವ ಕೆಲಸದಲ್ಲಿ ಮಾನವನ ಪ್ರಯತ್ನ ಶೇ.99 ರಷ್ಟು ಇಟ್ಟುಕೊಂಡು ಶೇ.1 ರಷ್ಟನ್ನು ದೈವ ಕೃಪೆಗೆ ಬಿಡಬೇಕು. ಅಂದರೆ ಮಾಡುವ ಕೆಲಸದಲ್ಲಿ ನಾವು ಮುಂದೆ ಇದ್ದರೆ ದೈವವನ್ನು ಹಿಂದೆ ಇಟ್ಟುಕೊಂಡು ಮುನ್ನುಗ್ಗಬೇಕು. ಆಗ ದೈವ ಹಿಂದಿನಿಂದ ಸಹಾಯ ಮಾಡುತ್ತದೆ. ಆದರೆ ಈಗಿನ ಜನರು ದೈವದ ಮೇಲೆಯೇ 99ರಷ್ಟು ಭಾರ ಹಾಕಿ 1ರಷ್ಟು ಪ್ರಯತ್ನ ಮಾಡುತ್ತಾರೆ. ಅಂದರೆ ದೈವವನ್ನೇ ಮುಂದೆ ಬಿಟ್ಟು ತಾವು ಹಿಂದಿನಿಂದ ಪ್ರಯತ್ನ ಮಾಡುತ್ತಾರೆ. ಅಂತವರ ಕೆಲಸ ಆಗಲ್ಲ. ಆಗ ದೈವವನ್ನು ದೂರುತ್ತಾರೆ.

ಆದರೆ ಇಲ್ಲಿ ಗುರುಗಳು ಆಸಕ್ತಿ ವಹಿಸಿ ಕೆಲಸ ಆಗುವ ಹಾಗೆ ನೋಡಿಕೊಂಡಿದ್ದರೂ ಎಲ್ಲವನ್ನೂ ದೈವ ಕೃಪೆ ಎಂದು ಹೇಳಿದ್ದಾರೆ. ಇದು ಗುರುಗಳ ದೊಡ್ಡ ಗುಣ ಎಂದು ರೈತರು ಸ್ಮರಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ