ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ವಿದ್ಯಾಸಂಸ್ಥೆಯಲ್ಲಿ ಸಡಗರ ಸಂಭ್ರಮದಿಂದ 80 ನೇ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು.
ಲಾವಣ್ಯ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನಮಂತೇಗೌಡ ದ್ವಜಾರೋಹಣ ನೆರವೇರಿಸಿ ಮಾತನಾಡಿ ಸಾವಿರಾರು ಜನರ ತ್ಯಾಗ ಬಲಿದಾನ ಹೊರಾಟದ ಪಲವಾಗಿ ನಮಗೆ ಸ್ವಾತಂತ್ರ್ಯ ಲಬಿಸಿದೆ. ಅದನ್ನು ಗೌರವಿಸುವ ಹಾಗೂ ಹುತಾತ್ಮರನ್ನು ಸ್ಮರಿಸುವ ಕರ್ತವ್ಯ ನಮ್ಮದಾಗಿದೆ. ಸ್ವಾತಂತ್ರ್ಯ ಕ್ರಾಂತಿಯಿಂದ, ರಕ್ತ ಪಾತದಿಂದ ದೊರೆಯಲಿಲ್ಲಾ. ಬದಲಿಗೆ ಅಹಿಂಸಾ ಹಾಗೂ ಶಾಂತಿ ಮಾರ್ಗದಿಂದ ನಮಗೆ ದೊರೆಯಿತು.
ಶಾಂತಿ ದೂತ ಗಾಂಧೀಜಿಯವರ ಅಹಿಂಸಾ ಮಾರ್ಗ ನಮಗೆ ಪ್ರೇರಣೆಯಾಗಲಿ. ನಾವೆಲ್ಲರೂ ಶಾಂತಿ ಸತ್ಯವಾದ ಮಾರ್ಗದಲ್ಲಿ ನಡೆಯೋಣ. ಜಾತಿಯತೆ ಮತಿಯತೆಯನ್ನು ದೂರಮಾಡಿ ಸಮೃದ್ಧ ಬಾರತವನ್ನು ನಿರ್ಮಾಣ ಮಾಡುವ ಹೊಣೆ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಯುವ ಜನರ ಮತ್ತು ವಿದ್ಯಾರ್ಥಿಗಳ ಪಾತ್ರ ತುಂಬಾ ಮಹತ್ವ ವಹಿಸುತ್ತದೆ ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷೆ ಯಶೋದಮ್ಮ ಹನುಮಂತೇಗೌಡ ಮಾತನಾಡಿ ನಾವು ನಮ್ಮ ನಮ್ಮ ದಾರ್ಮಿಕ ಹಬ್ಬಗಳನ್ನು ಹೇಗೆ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತೇವೆಯೊ ಹಾಗೆಯೇ ನಮ್ಮ ರಾಷ್ಟ್ರೀಯ ಹಬ್ಬಗಳನ್ನು ಸಹ ದರ್ಮಬೇದ ಜಾತಿ ಬೇದ ಮರೆತು ಆಚರಣೆ ಮಾಡಬೇಕು. ಹಾಗಾದಾಗ ಮಾತ್ರ ನಮ್ಮ ಸ್ವಾತಂತ್ರ್ಯ ಹಬ್ಬಕ್ಕೆ ಮಹತ್ವ ದೊರೆಯುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ. ಸಿ.ಮಂಜುನಾಥ್, ಬಿಇಡಿ ಕಾಲೇಜು ಪ್ರಾಂಶುಪಾಲ ಪ್ರೊ,ಜಿ. ಕೃಷ್ಣಮೂರ್ತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅರುಣ್ ಕುಮಾರ್ಸೇರಿದಂತೆ ಎಲ್ಲಾ ವಿಬಾಗಗಳ ಶಿಕ್ಷಕರು ಉಪನ್ಯಾಸಕರು ಸಿಬ್ಬಂದಿ ವರ್ಗದವರು ಬಾಗವಹಿದ್ದರು.ಮಕ್ಕಳಿಂದ ವಿವಿಧ ವೇಶಭೂಷಣ ಸ್ಫರ್ದೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರ ಮನ ಸೆಳೆದವು.



