Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಂದ್ರವಳ್ಳಿ ಮಯೂರ ಶಾಸನ ಸತ್ಯವಾಗಿದೆ-ಸಂಶೋಧಕ ಮಹಂತೇಶ್

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಚಂದ್ರವಳ್ಳಿಯಲ್ಲಿರುವ ಮಯೂರ ಶರ್ಮನ ಶಾಸನವನ್ನು ೧೯೨೮ ರಲ್ಲಿ ಡಾ.ಎಂ.ಎಚ್.ಕೃಷ್ಣ ಓದಿರುವ ಮೂಲ ಚರಿತ್ರೆ ಸತ್ಯವಾಗಿದೆ. ಯಾವುದೇ ಗೊಂದಲ ತಪ್ಪು ಇಲ್ಲ. ಚಿತ್ರದುರ್ಗದ ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪನವರು ೧೯೮೪ ರಲ್ಲಿ ಮಯೂರ ಶರ್ಮನ ಶಾಸನವನ್ನು ಮರು ಪರಿಶೀಲನೆ ನಡೆಸಿರುವುದು ಊಹಾ ಪಾಠವಾಗಿದ್ದು
, ಎಂ.ಎಚ್.ಕೃಷ್ಣರವರ ಪಾಠಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಮಯೂರ ಶರ್ಮನ ಐತಿಹಾಸಿಕ ಸಂಗತಿಗಳನ್ನು ಕೈಬಿಟ್ಟಿದ್ದಾರೆ. ಇದರಿಂದ ಮಯೂರ ಶರ್ಮನ ಇತಿಹಾಸ ಕರ್ನಾಟಕದ ಪ್ರಾರಂಭದ ರಾಜಕೀಯ ಚರಿತ್ರೆಗೆ ಧಕ್ಕೆಯುಂಟಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಆಪಾದಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಎಂ.ಎಚ್.ಕೃಷ್ಣರವರು ಚಂದ್ರವಳ್ಳಿ ಶಾಸನವನ್ನು ಪತ್ತೆ ಹಚ್ಚಿದಾಗ ಹುಲ್ಲೂರು ಶ್ರೀನಿವಾಸ ಜೋಯಿಸರು ಸಹಾಯ ಮಾಡುತ್ತಾರೆ. ಮೂರು ಸಾಲಿನ ಈ ಶಾಸನ ಕ್ರಿ.ಶ.೨೫೮ ಕ್ಕೆ ಸೇರಿದ್ದು, ಮೂಲ ಶಾಸನ ಚರಿತ್ರೆ ಕಟ್ಟಲು ಇತಿಹಾಸ ಬೇಕು.

ಮೈಸೂರಿನಿಂದ ಇಲ್ಲಿಗೆ ಬಂದು ಚಂದ್ರವಳ್ಳಿಯಲ್ಲಿ ಕೆಲಸ ಮಾಡುತ್ತಾರೆ. ವಿಶೇಷವಾದ ಈ ಶಾಸನದ ಬಗ್ಗೆ ಯಾವ ವಿದ್ವಾಂಸರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ ೧೯೮೪ ರಲ್ಲಿ ಇದೆ ಶಾಸನವನ್ನು ಮರು ಪರಿಶೀಲಿಸಿದ ಡಾ.ಬಿ.ರಾಜಶೇಖರಪ್ಪನವರು ಪದಗಳನ್ನು ಬದಲಿಸಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಎಂದರು.

ಕರ್ನಾಟಕ ರಾಜಕೀಯ ಚರಿತ್ರೆಗೆ ಹಾಗೂ ಕದಂಬರ ಚರಿತ್ರೆಗೆ ಅನೇಕ ಹೊಸ ಸಂಗತಿಗಳು ಸೇರ್ಪಡೆಗೊಂಡು ಆ ಮೂಲಕ ಇಂತಹ ಅಮೂಲ್ಯ ಶಾಸನ ಪ್ರಕಟಿಸಿದ ಡಾ.ಎಂ.ಎಚ್.ಕೃಷ್ಣ ಅವರಿಗೆ ಹಿರಿಮೆ, ಗರಿಮೆ ಪ್ರಾಪ್ತವಾದವು. ಈ ಶಾಸನ ಪಾಠದ ಪಡಿಯಚ್ಚನ್ನು ಅವಲೋಕಿಸಿದ ಕೆಲವು ವಿದ್ವಾಂಸರು ಅದರಲ್ಲಿನ ಹಲವು ಸಂಗತಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಇಡಿ ಶಾಸನ ಪಾಠವನ್ನು ಯಾರು ಬದಲಿಸಲಿಲ್ಲ.

ಚಿತ್ರದುರ್ಗದ ಸ್ಥಳೀಯ ಶಾಸನ ತಜ್ಞರಾದ ಡಾ.ಬಿ.ರಾಜಶೇಖರಪ್ಪನವರು ಚಂದ್ರವಳ್ಳಿ ಶಾಸನವನ್ನು ಪುನರ್ ಪರಿಶೀಲನೆ ಮಾಡುವುದರ ಮೂಲಕ ಇಡಿ ಶಾಸನ ಪಾಠವನ್ನು ಬದಲಿಸಿ ಹೊಸ ವಿವರಣೆ ನೀಡಿದರೆ ವಿನಃ ಶಾಸನ ಪಾಠದ ಪಡಿಯಚ್ಚನ್ನು ತೆಗೆಯಲಿಲ್ಲ. ಅಕ್ಷರ ಸಂಸ್ಕೃತಿಯನ್ನು ಮೊಟ್ಟ ಮೊದಲು ಚಿತ್ರದುರ್ಗದಲ್ಲಿ ಕೊಟ್ಟಿದ್ದು, ಮಯೂರ ಶರ್ಮ. ಅದಕ್ಕಾಗಿ ಅಧ್ಯಯನ ಶಾಸನಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು. 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ