Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕರ್ನಾಟಕ ಆರ್ಟ್ಸ್ ಫೌಂಡೇಷನ್ ವತಿಯಿಂದ ಚಿತ್ರಕಲಾವಿದರ ಕಾಫಿ ಕೂಟ ಯಶಸ್ವಿ ಚರ್ಚೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಆರ್ಟ್ಸ್ ಫೌಂಡೇಷನ್ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ ಆಯೋಜಿಸಿದ್ದ ಕಲಾ ಕೃತಿ ರಚನೆ ಮತ್ತು ಕಲಾವಿದನ ಬಗ್ಗೆ ಕಾಫಿ ಕೂಟದ ಚರ್ಚೆಯನ್ನು
ನಗರದ ಕೆಂಗೇರಿ ಹೋಬಳಿಯ ಭೀಮ ಆರ್ಟ್ ಗ್ಯಾಲರಿ, ಕೆಎಚ್ ಬಿ ಕಾಲೋನಿ, ನೇತಾಜಿ ಬಡಾವಣೆಯಲ್ಲಿ ನಡೆಯಿತು. 

ಇದರ ಅಂಗವಾಗಿ ರಾಜ್ಯದ ಖ್ಯಾತ ಚಿತ್ರಕಲಾವಿದರು ಹಾಗೂ ಸಮಾಜ ಸೇವಕರು, ಬಹುಮುಖ್ಯ ಪ್ರತಿಭೆ, ಕರ್ನಾಟಕ ಲಲಿತಕಲಾ ಅಕಾಡೆಮಿ ನಿಕಟಪೂರ್ವ ಸದಸ್ಯರಾದ ಶ್ರೀ ಆತ್ಮಾನಂದ ಅವರ ಇತ್ತೀಚಿಗೆ ಹಮ್ಮಿಕೊಂಡಿದ್ದ ನಗರದಲ್ಲಿರುವ ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣ ಆರ್ಟ್ ಗ್ಯಾಲರಿ ಕನ್ನಡ ಭವನದಲ್ಲಿ ಅತ್ಯಂತ ವಿಶಿಷ್ಟವಾದ ಚಿತ್ರಕಲಾ ಪ್ರದರ್ಶನವನ್ನು ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ ಬಗ್ಗೆ ವಿಸ್ತೃತವಾಗಿ ಚರ್ಚಿಸುವ ಮೂಲಕ ಮುಂಬರುವ ದಿನಗಳಲ್ಲಿ ಚಿತ್ರಕಲಾವಿದರ ಹಲವಾರು ರೀತಿಯ ಸಮಸ್ಯೆಗಳು, ಸೌಲಭ್ಯಗಳು, ಕಾನೂನಾತ್ಮಕ ಮತ್ತಿತರರ ಎಲ್ಲಾ ಅಂಶಗಳನ್ನು ಸರ್ಕಾರಗಳು ಪರಿಗಣಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಅವರಿಗೆ ತಿಳಿಸಲಾಯಿತು.

ಈ ಸಮಯದಲ್ಲಿ ಎಲ್ಲಾ ಗಣ್ಯ ಅತಿಥಿಗಳು ಹಾಗೂ ಕಲಾವಿದರು, ಕರ್ನಾಟಕ ಆರ್ಟ್ಸ್ ಫೌಂಡೇಷನ್ ಪದಾಧಿಕಾರಿಗಳು ಇನ್ನಿತರರು ಸೇರಿ ನಾಡು ಕಂಡ ಶೇಷ್ಠ ಚಿತ್ರಕಲಾವಿದ ಕೆ.ಬಿ. ಶಿವಪ್ರಸಾದ್ ರವರಿಗೆ ಕಲಾ ನಮನ ಸಲ್ಲಿಸಲಾಯಿತು.

ಇದೇ ವೇಳೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಜನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತು, ಯಶವಂತಪುರ ವಿಧಾನಸಭಾ ಅಧ್ಯಕ್ಷ ಸುದೀಂದ್ರ ಕುಮಾರ್, ಸಂಸ್ಕಾರ ಭಾರತಿ, ಕರ್ನಾಟಕ ದಕ್ಷಿಣ ವಿಭಾಗ ಪ್ರಮುಖರು ರಾಮಸಂದ್ರ, ಕಲಾವಿದರಾದ ಕೆ.ಎಲ್. ಲಿಂಗದೇವರು, ಎಲ್. ಗೌತಮ್, ಅಶೋಕ್ ಕುಮಾರ್, ಆತ್ಮಾನಂದ ಎಚ್.ಎ, ಕರ್ನಾಟಕ ಆರ್ಟ್ಸ್ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ಸರೋಜಾ, ರಂಗಕರ್ಮಿ ಮಲ್ಲಿಕಾರ್ಜುನ್ ಮಹಾಮನೆ, ಬೆಂವಿವಿಯ ನೌಕರ ಗೌರಿಶಂಕರ್, ಸಾಹಿತಿ ಎ.ಪಿ. ಕುಮಾರ್ ಕೆಂಗೇರಿ ಮತ್ತು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗೌತಮ್ ಎಸ್, ಖಜಾಂಚಿ ದೀಪಕ್ ಎಚ್.ಎ, ಸದಸ್ಯ ಶಿವಣ್ಣ, ಅರುಣ್ ಕುಮಾ‌ರ್, ಸಂಶೋಧಕರು ಹಾಗೂ ಪತ್ರಕರ್ತ ಡಾ. ಈಶ್ವರ್ ಸಿರಿಗೇರಿ, ಕಲಾವಿದರು ಸೇರಿದಂತೆ ಅಭಿಮಾನಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.