Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಯದೇವ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಸಂಸ್ಮರಣ ಗ್ರಂಥ ಶೀಘ್ರ..

Advertisement
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಐತಿಹಾಸಿಕ ಮಹತ್ವದ ಬೆಳವಣಿಗೆಗೆ ಮತ್ತಷ್ಟು ಛಾಪು ಮೂಡಲು ತಮ್ಮ ಇಡೀ ಬದುಕನ್ನ ಸಮಾಜದ ಒಳಿತಿಗಾಗಿ ಮುಡುಪಾಗಿರಿಸಿ ಅವಿಶ್ರಾಂತವಾಗಿ ದುಡಿದ ಚಿತ್ರದುರ್ಗ ಶ್ರೀ ಜಗದ್ಗುರು ಮುರಘರಾಜೇಂದ್ರ ಬೃಹನ್ಮಠದ 24ನೇ ಪೀಠಾಧ್ಯಕ್ಷರಾಗಿ ಚಿತ್ರದುರ್ಗ ಕೇಂದ್ರವನ್ನಾಗಿರಿಸಿಕೊಂಡು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ನಮ್ಮೊಂದಿಗೆ ಸದಾ ಇರುವ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ಅಂಗವಾಗಿ ಅವರ ಬಹುಮುಖಿ ಕಾರ್ಯಗಳ ಮೇಲೆ ಬೆಳಕು ಚೆಲುವ ಸಂಸ್ಮರಣ ಗ್ರಂಥ ಹೊರ ತರಲು ಶ್ರೀ ಮುರುಘಮಠದಲ್ಲಿಂದು

ಸೇರಿದ್ದ ವಿದ್ವಾಂಸರು, ಪ್ರಾಜ್ಞರು ಹಾಗೂ ಸ್ವಾಮೀಜಿಗಳವರು ಸೇರಿದ್ದ ಪ್ರಕಟಣಾ ಪೂರ್ವ ಸಮಾಲೋಚನಾ ಸಭೆಯಲ್ಲಿ ಗುರುಗಳ ವಿಚಾರವಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.ಬಹುಮುಖ್ಯವಾಗಿ ಜಯದೇವರ ಪೂರ್ವಾಶ್ರಮ, ಅವರ ಅಧ್ಯಯಕ್ಕೆ ಪ್ರೇರಣೆಯಾದ ಶಕ್ತಿಗಳ ಸ್ಮರಣೆ, ಚಿತ್ರದುರ್ಗದ ಪೀಠಾಧ್ಯಕ್ಷರಾದ ಬಗೆಗೆ ಸೇರಿದಂತೆ ಅವರು ಶ್ರೀಮಠದ ಮೂಲಕ ಸಮಾಜವನ್ನ ಪ್ರಭಾವಿಸಿದ  ಬಗೆಯನ್ನು ಸ್ವತಂತ್ರ ಕರ್ನಾಟಕ ವಿಶೇಷ 1949ರ ಲೇಖನಗಳು, ಸಂಚಯ ಪತ್ರಿಕೆ ವಿಶೇಷ  ಲೇಖನಗಳು, ಜಂಗಮ ಜ್ಯೋತಿ ಸ್ಮರಣ ಸಂಚಿಕೆಯಿಂದಾಯ್ದ ಲೇಖನಗಳು, ಹಳೆಯ ಪುಸ್ತಕಗಳಿಂದ ಗಮನಾರ್ಹ ಲೇಖನಗಳು, ಜಗದ್ಗುರುಗಳನ್ನು ಕುರಿತು ಬಂದಿರುವ ಕೃತಿಗಳು, ಇದರೊಂದಿಗೆ ಹೊಸ ಲೇಖನಗಳು, ಇತ್ತೀಚಿನ ವಿದ್ವಾಂಸರುಗಳು ಹಾಗೂ ಸ್ವಾಮಿಗಳವರ ಬರಹಗಳು, ಆಗಿನ ಕಾಲದ ಪತ್ರಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ದಿನಪತ್ರಿಕೆಗಳು ಮತ್ತು ಇತರ ದಾಖಲೆಗಳ ಸಂಗ್ರಹ. ಒಟ್ಟಾರೆಯಾಗಿ ಜಯದೇವರ ಇಡೀ ಜೀವನ ಸಾಧನೆಯ ಹೂರಣವನ್ನು  ಒಟ್ಟಾಗಿ ಸೇರಿಸಿ ಕಟ್ಟಿಕೊಡುವ ಪ್ರಯತ್ನ ಈ ಕೃತಿಯಲ್ಲಿದೆ ಎಂಬ ಆಶಯ ಸೇರಿದವರಿಂದ ವ್ಯಕ್ತವಾಯಿತು.

ಸಂಶೋಧಕರು, ಸಾಹಿತಿಗಳು, ಕವಿಗಳು ಸೇರಿದ್ದ ಈ ಸಭೆಯಲ್ಲಿ ತಮ್ಮದೇ ಆದ ವಿಭಿನ್ನ ಆಲೋಚನೆ ಮತ್ತು ಕೃತಿಯ ಸ್ವರೂಪ ಹೇಗಿರಬೇಕೆಂಬ ಆಶಯಕ್ಕೆ ತಕ್ಕಂತೆ ಕೃತಿ ಮತ್ತು ಅವರ ಜಯಂತ್ಯುತ್ಸವವೂ ಕೂಡ ಸ್ಮರಣೀಯ ಎನ್ನುವಂತಾಗಬೇಕೆಂಬ ಸದಾಶಯ ಶ್ರೀಜಗದ್ಗುರು ಮುರಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿಯವರದು. ಹಾಗೆ ಇವರ ಜೊತೆಗೆ ದಾವಣಗೆರೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮಿಗಳ ಅವರ ಆಶಯವೂ ಅದೇ ಆಗಿದೆ.

ಇವರೊಂದಿಗೆ ಡಾ. ಮಲ್ಲಾಪುರಂ ಜಿ ವೆಂಕಟೇಶ್, ಡಾ. ಲಕ್ಷ್ಮಣ್ ತೆಲಗಾವಿ, ಡಾ. ಬಿ .ರಾಜಶೇಖರಪ್ಪ, ಡಾ  ಬಿ .ನಂಜುಂಡಸ್ವಾಮಿ, ಬೈರಮಂಗಲ ರಾಮೇಗೌಡ, ವೀರಸಾಬಿಹಳ್ಳಿ ಶಿವಣ್ಣ, ಹಿರಿಯ ಪತ್ರಕರ್ತ ಜಿ.ಎಸ್ .ಉಜ್ಜನಪ್ಪ, ಕೆ .ಎಲ್. ರಾಜಶೇಖರ್, ಗಿರಿಮಲ್ಲಣ್ಣನವರ್, ಸ್ವಾನ್ ಮುದ್ರಣಾಲಯದ ಕೃಷ್ಣಮೂರ್ತಿ ಹಾಗೂ ಎನ್. ತಿಪ್ಪಣ್ಣ ಮತ್ತಿತರರು ಭಾಗವಹಿಸಿದ್ದ ಸಭೆಗೆ ಸಂಸದರು, ವಿಜಯವಾಣಿ ದಿನಪತ್ರಿಕೆಯ ಸಂಸ್ಥಾಪಕ ವಿಜಯ ಸಂಕೇಶ್ವರ ಅವರು ಸಭೆಯಲ್ಲಿ ಭಾಗವಹಿಸಿ ಕೆಲವೊತ್ತು ಇದ್ದು ,ಸಭೆಯ ನಿರ್ಣಯಗಳಿಗೆ ಸಹಮತ ವ್ಯಕ್ತಪಡಿಸಿದರು. 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ