LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಸಮಾಧಾನಿತ ಶಾಸಕರಿಗೆ ನಿಗಮ-ಮಂಡಳಿ 'ಅಧ್ಯಕ್ಷ' ಪಟ್ಟ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು: 
ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದೆ ತೀವ್ರ ಬೇಸರಗೊಂಡಿರುವ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಸಮಾಧಾನಪಡಿಸಲು ರಾಜ್ಯ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.

ಸುಮಾರು 25 ಕ್ಕೂ ಹೆಚ್ಚು ಶಾಸಕರಿಗೆ ಸಚಿವ ದರ್ಜೆಯ ಸ್ಥಾನಮಾನದೊಂದಿಗೆ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷ ಹುದ್ದೆ ನೀಡಲು ಪಟ್ಟಿ ಸಿದ್ಧಪಡಿಸಲಾಗಿದ್ದು, ಈ ಕುರಿತು ಆಗಸ್ಟ್ 17 ಸೋಮವಾರ ಅಧಿಕೃತ ಆದೇಶ ಹೊರಬೀಳುವ ನಿರೀಕ್ಷೆಯಿದೆ.

ಹಳೆಯ ಅಧ್ಯಕ್ಷರ ರಾಜೀನಾಮೆ, ಶಾಸಕರಿಗೆ ಪ್ರಮುಖ ಹುದ್ದೆ:
ಈ ಹಿಂದೆ ವಿವಿಧ ನಿಗಮ-ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧ್ಯಕ್ಷರ ಅವಧಿ ಮುಕ್ತಾಯಗೊಂಡಿದ್ದು
, ಅವರಿಂದ ಈಗಾಗಲೇ ರಾಜೀನಾಮೆ ಪಡೆಯಲಾಗಿದೆ. ತೆರವಾದ ಈ ಸ್ಥಾನಗಳಲ್ಲಿ 2-3 ಬಾರಿ ಗೆದ್ದಿರುವ ಹಿರಿಯ ಶಾಸಕರು ಹಾಗೂ ಹೊಸದಾಗಿ ಆಯ್ಕೆಯಾದ ಶಾಸಕರನ್ನು ನೇಮಿಸಲು ನಿರ್ಧರಿಸಲಾಗಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದು ವಂಚಿತರಾದ ನಾಯಕರಿಗೆ ಸೂಕ್ತ ಅಧಿಕಾರ ಹಾಗೂ ಗೌರವ ನೀಡುವ ಮೂಲಕ ಆಡಳಿತದಲ್ಲಿ ಅಸಮಾಧಾನ ಶಮನಗೊಳಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.

ಈಗಾಗಲೇ ಮುಖ್ಯ ಹುದ್ದೆ ಪಡೆದ ಮೂವರು ನಾಯಕರು:
ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಪ್ರಮುಖ ನಾಯಕರಿಗೆ ಈಗಾಗಲೇ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಎ.ಎಸ್. ಪೊನ್ನಣ್ಣ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ.
ಶ್ರೀನಿವಾಸ ಮಾನೆ: ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ ನಿಯೋಜನೆ. ಆರ್.ವಿ. ದೇಶಪಾಂಡೆ: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಅಂತಿಮ ವರದಿ ಸಲ್ಲಿಸಿದ್ದರೂ
, ಪುನಃ ಸಂಪುಟ ದರ್ಜೆಯ ಸಚಿವ ಸ್ಥಾನಮಾನದೊಂದಿಗೆ ಅದೇ ಆಯೋಗದ ಅಧ್ಯಕ್ಷರಾಗಿ ಮರುನೇಮಕ.

ಉಳಿದ 25ಕ್ಕೂ ಹೆಚ್ಚು ಶಾಸಕರಿಗೆ ಸದ್ಯದಲ್ಲೇ ಪ್ರಮುಖ ನಿಗಮ-ಮಂಡಳಿಗಳ ಜವಾಬ್ದಾರಿ ಹಸ್ತಾಂತರವಾಗಲಿದ್ದು, ಸರ್ಕಾರದ ಈ ನಡೆ ಆಡಳಿತ ಪಕ್ಷದಲ್ಲಿನ ಅಸಮಾಧಾನವನ್ನು ಎಷ್ಟರ ಮಟ್ಟಿಗೆ ಶಮನಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಣಿ ವಿಲಾಸ ಸಾಗರದ ಸನಿಹದಲ್ಲೇ ಒಣಗುತ್ತಿರುವ ಅಡಿಕೆ ತೋಟಗಳು: ರೈತರ ಕಣ್ಣೀರಿಗೆ ಸಿಗುವುದೇ ಸರ್ಕಾರದ ಸ್ಪಂದನೆ?​ ಅರಿವಿನ ಪಯಣದೊಂದಿಗೆ 12 ವರ್ಷಗಳ ಸುದೀರ್ಘ ಸಮಾನತೆಯ ಕರುಣ-ಮೈತ್ರಿ ಹಾದಿಯಲ್ಲಿ ಪಯಣ:ಆರ್‌ಎಸ್ಎಸ್ ಕಾನೂನಾತ್ಮಕ ಅಸ್ತಿತ್ವ ಮತ್ತು ಹೊಣೆಗಾರಿಕೆ ಕುರಿತು ಪ್ರಿಯಾಂಕ್ ಖರ್ಗೆ ಪ್ರಶ್ನೆಸ್ವಾತಂತ್ರ್ಯ ದಿನದ ‘ಸ್ಪೆಷಲ್ ಎಡಿಷನ್’ HMT ವಾಚ್‌ಗಾಗಿ 2 ಕಿ.ಮೀ. ಸಾಲು ನಿಂತ ಬೆಂಗಳೂರಿಗರು!ಮಹಿಳೆ ಜೊತೆ ಅಸಭ್ಯ ವರ್ತನೆ, ಸ್ವಾಮೀಜಿಗೆ ಸ್ಥಳೀಯರಿಂದ ಧರ್ಮದೇಟು"ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ": ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ'ತಿಪಟೂರು ಪ್ರತ್ಯೇಕ ಜಿಲ್ಲೆ' ಬಾವುಟ ಹಾರಿಸಿದ ಶಾಸಕ ಕೆ. ಷಡಕ್ಷರಿನೈಸ್ ಅಕ್ರಮ: ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲಿಸಿ ಸೂಕ್ತ ಕ್ರಮ – ಎಚ್‌ಡಿಕೆ ಪತ್ರಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆಅಸಮಾಧಾನಿತ ಶಾಸಕರಿಗೆ ನಿಗಮ-ಮಂಡಳಿ 'ಅಧ್ಯಕ್ಷ' ಪಟ್ಟತುಮಕೂರಿಗೆ ನಮ್ಮ ಮೆಟ್ರೋ ಹಾಗೂ ಎರಡು ಹೊಸ ರೈಲು ಮಾರ್ಗಗಳ ಸೌಲಭ್ಯ: ಡಾ. ಜಿ. ಪರಮೇಶ್ವರ್