Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಡಿ. ಸುಧಾಕರ್: ದಾನ ಧರ್ಮದಲ್ಲಿ ಎತ್ತಿದ ಕೈ

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಚಿವ ಡಿ. ಸುಧಾಕರ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಿಂದ ಆಯ್ಕೆಯಾದ ಪ್ರಭಾವಿ ರಾಜಕಾರಣಿ ಮಾತ್ರವಲ್ಲದೆ
, ತಮ್ಮ ದಾನ-ಧರ್ಮ ಹಾಗೂ ಸಮಾಜಮುಖಿ ಕಾರ್ಯಗಳಿಂದ "ದಾನಿ" ಎಂದೇ ಜನಪ್ರಿಯರಾಗಿದ್ದರು.

ಡಿ. ಸುಧಾಕರ್: ದಾನ ಧರ್ಮದಲ್ಲಿ ಎತ್ತಿದ ಕೈ
ರಾಜಕೀಯ ಎನ್ನುವುದು ಅಧಿಕಾರಕ್ಕಾಗಿ ಮಾತ್ರವಲ್ಲ
, ಅದು ಜನಸೇವೆಯ ಒಂದು ಮಾಧ್ಯಮ ಎಂದು ನಂಬಿರುವವರು ಸಚಿವ ಡಿ. ಸುಧಾಕರ್. ಚಿತ್ರದುರ್ಗದ ಈ ಮಣ್ಣಿನ ಮಗ, ತಮ್ಮ ಉದಾರ ಮನೋಭಾವ ಮತ್ತು ಬಡವರ ಸಂಕಷ್ಟಗಳಿಗೆ ಸ್ಪಂದಿಸುವ ಗುಣದಿಂದಾಗಿ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.

ಶಿಕ್ಷಣಕ್ಕೆ ಆಸರೆ:
ಸುಧಾಕರ್ ಅವರು ಶಿಕ್ಷಣದ ಮಹತ್ವವನ್ನು ಅರಿತವರು. ಆರ್ಥಿಕವಾಗಿ ಹಿಂದುಳಿದ ನೂರಾರು ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ಪಾವತಿಸುವುದು, ಪುಸ್ತಕ ಹಾಗೂ ಸಮವಸ್ತ್ರ ವಿತರಿಸುವ ಮೂಲಕ ಅವರು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಳಕಾಗಿದ್ದಾರೆ. ಇವರು ಬೆಳೆದು ಬಂದ ಹಾದಿಯೇ ಇವರನ್ನು ಬಡ ವಿದ್ಯಾರ್ಥಿಗಳ ಪರ ನಿಲ್ಲುವಂತೆ ಮಾಡಿದೆ.

ಆರೋಗ್ಯ ಸೇವೆಯಲ್ಲಿ ಮುಂದು:
ಬಡವರಿಗೆ ಆರೋಗ್ಯದ ಸಮಸ್ಯೆ ಎದುರಾದಾಗ 'ಸಹಾಯ' ಎಂದು ಕೇಳಿಕೊಂಡು ಹೋದರೆ ಖಾಲಿ ಕೈಯಿಂದ ಕಳುಹಿಸದ ಗುಣ ಇವರದ್ದು. ಸಂಕಷ್ಟದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ವೈಯಕ್ತಿಕವಾಗಿ ಧನ ಸಹಾಯ ಮಾಡಲು ಅವರು ಸದಾ ಮುಂದಿರುತ್ತಿದ್ದರು.

ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು-
ದೇಗುಲಗಳ ಜೀರ್ಣೋದ್ಧಾರ: ತಮ್ಮ ಕ್ಷೇತ್ರದಲ್ಲಿ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಭಾರಿ ಪ್ರಮಾಣದ ದೇಣಿಗೆ ನೀಡಿದ್ದಾರೆ.

ಬಡ ಕುಟುಂಬಗಳ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ನೆರವು ನೀಡುವುದು ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು ಸುಧಾಕರ್ ಅವರ ಹವ್ಯಾಸದಂತೆಯೇ ಬೆಳೆದು ಬಂದಿದೆ.

ಪ್ರಚಾರವಿಲ್ಲದ ಸೇವೆ-
ಸುಧಾಕರ್ ಅವರ ವಿಶೇಷತೆಯೆಂದರೆ
, ಅವರು ಮಾಡುವ ಬಹುತೇಕ ದಾನ ಧರ್ಮಗಳು ಅಬ್ಬರವಿಲ್ಲದೆ ನಡೆಯುತ್ತವೆ. "ಬಲಗೈ ನೀಡಿದ್ದು ಎಡಗೈಗೆ ತಿಳಿಯಬಾರದು" ಎಂಬ ತತ್ವದಂತೆ, ಅನೇಕ ಬಡ, ನಿರ್ಗತಿಕ ಕುಟುಂಬಗಳು ಸೇರಿದಂತೆ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಅವರು ನಿರಂತರವಾಗಿ ನೆರವು ನೀಡುತ್ತಾ ಬಂದಿದ್ದಾರೆ.

ಒಬ್ಬ ಜನಪ್ರತಿನಿಧಿಗೆ ಕೇವಲ ಅಭಿವೃದ್ಧಿ ಕೆಲಸಗಳು ಮುಖ್ಯವಲ್ಲ, ಜನರ ಭಾವನೆಗಳಿಗೆ ಸ್ಪಂದಿಸುವ ಮಾನವೀಯತೆಯೂ ಮುಖ್ಯ ಎಂಬುದನ್ನು ಡಿ. ಸುಧಾಕರ್ ಅವರು ಸಾಬೀತುಪಡಿಸಿದ್ದಾರೆ. ದಾನಧರ್ಮದ ಮೂಲಕವೇ ಜಿಲ್ಲೆಯ  "ಅನ್ನದಾತ" ಮತ್ತು "ಆಪತ್ಬಾಂಧವ" ಎನಿಸಿಕೊಂಡಿರುವ ಅವರು, ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರೈತಪರ ಕಾಳಜಿಯ ನಾಯಕನನ್ನು ಕಳೆದುಕೊಂಡಿದ್ದೇವೆ-ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರದುರ್ಗದ 'ಅಜಾತಶತ್ರು' ಇನ್ನಿಲ್ಲ: ಸಚಿವ ಡಿ. ಸುಧಾಕರ್ ವಿಧಿವಶಸಚಿವ ಡಿ.ಸುಧಾಕರ್ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ​ ಮೌನವಾದ ಮಾತು, ಮರೆಯದ ನೆನಪು: ಡಿ. ಸುಧಾಕರ್ ಅವರಿಗೆ ಭಾವಪೂರ್ಣ ನಮನಡಿ. ಸುಧಾಕರ್ ನಿಧನ: ಮಾರ್ಗದರ್ಶಕ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ ಎಂದು ಶಾಸಕ ವೀರೇಂದ್ರ ಪಪ್ಪಿ ಭಾವುಕ ನಮನಡಿ. ಸುಧಾಕರ್ ನಿಧನ: ಮಾರ್ಗದರ್ಶಕ, ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡೆ ಎಂದು ಶಾಸಕ ವೀರೇಂದ್ರ ಪಪ್ಪಿ ಭಾವುಕ ನಮನಸಚಿವ ಡಿ. ಸುಧಾಕರ್ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ: "ಅವರೊಬ್ಬ ನಿಜವಾದ ಜನಪರ ನಾಯಕ"ಟೀಕೆಗಳಿಗೆ ಕುಗ್ಗದ ಧೀಮಂತ: ನಿಂದನೆಗಳ ನಡುವೆಯೂ ಮೌನ ಕ್ರಾಂತಿ ಮಾಡಿದ ಸುಧಾಕರ್ಬಾರದ ಲೋಕದತ್ತ ಪಯಣಕ್ಕೆ ಸಿದ್ಧವಾದ ಆಪತ್ಬಾಂಧವ: ಚಿತ್ರದುರ್ಗದ ನೆಲದಲ್ಲಿ ಮೌನ ರೋದನಕಾರ್ಯಕರ್ತರ ಕಣ್ಮಣಿ, ಅಭಿಮಾನಿಗಳ ಆರಾಧ್ಯ ದೈವ: ಡಿ. ಸುಧಾಕರ್ ಅವರ ಸ್ನೇಹಯಾನ