Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಂದಿನಿ ಉತ್ಪನ್ನ ಬಳಸುವ ಮೂಲಕ ರೈತರ ಹಿತ ಕಾಪಾಡಿ-ಡಿ.ಕೆ.ಸುರೇಶ್

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಂದಿನಿ ಹಾಲು ಪರಿಶುದ್ಧವಾದ ಹಾಲು
, ಸಂಜೆ ರೈತರಿಂದ ಸಂಗ್ರಹಿಸುವ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಹೊಂದಿದ್ದು, ಗ್ರಾಹಕರ ಆರೋಗ್ಯದ ದೃಷ್ಠಿಯಿಂದ ಗುಣಮಟ್ಟದ ಹಾಲನ್ನು ನೀಡುತ್ತಿರುವುದ್ದಾಗಿ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದಲ್ಲಿ ಅಯೋಜನೆ ಮಾಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಜಿಲ್ಲೆಯ ನಾಯಕರು ಬಮೂಲ್ ಜವಾಬ್ದಾರಿಯನ್ನ ನನಗೆ ನೀಡಿದ್ದಾರೆ. ಬಮೂಲ್ ಅಧ್ಯಕ್ಷನಾದ ನಂತರ ಸುದೀರ್ಘವಾದ ಚಿಂತನೆ ಮಾಡಿದ ನಂತರ ರೈತರ ಎದುರಿಸುತ್ತಿರುವ ಸಮಸ್ಯೆ ಗೊತ್ತಾಗಿದೆ.

ಬಮೂಲ್ ಒಕ್ಕೂಟದಲ್ಲಿ ಪ್ರತಿದಿನ 17 ರಿಂದ 18 ಲಕ್ಷ ಹಾಲು ಸಂಗ್ರಹವಾಗುತ್ತದೆ. ಗುಣಮಟ್ಟದ ಹಾಲಿನ ನಿರ್ವಹಣೆ ಮಾಡುವುದು, ರೈತರಿಗೆ ಒಳ್ಳೆಯೇ ಬೆಲೆ ಕೊಡುವುದು ಮತ್ತು ಗ್ರಾಹಕರ ಹಿತವನ್ನ ಕಾಯುವ ಜವಾಬ್ದಾರಿ ನಮ್ಮ ಮೇಲಿದೆ. ಸಹಕಾರ ತತ್ವದೊಂದಿಗೆ ಇದನ್ನು ಕಾಪಾಡಿಕೊಂಡು ಹೋಗ ಬೇಕಿದೆ ಎಂದರು.

ನಂದಿನಿ ಹಾಲು ಪರಿಶುದ್ಧವಾದ ಹಾಲು, ಜನರ ಆರೋಗ್ಯದ ದೃಷ್ಠಿಯಿಂದ ಅವತ್ತಿನ ಹಾಲನ್ನ ಅವತ್ತೇ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ಇಟ್ಟುಕೊಂಡಿದ್ದೇವೆ. ಸಂಜೆ ರೈತರಿಂದ ಸಂಗ್ರಹಿಸಿದ ಹಾಲನ್ನು ಬೆಳಗ್ಗೆ ಗ್ರಾಹಕರಿಗೆ ಕೊಡುವ ವ್ಯವಸ್ಥೆಯನ್ನ ನಾವು ಇಟ್ಟುಕೊಂಡಿದ್ದೇವೆ, ಇದರ ಜೊತೆಯಲ್ಲಿ ಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳ ಪೈಪೋಟಿ ಸಹ ಇದ್ದು, ಅವುಗಳ ಪೈಪೋಟಿ ನಡುವೆಯೂ ಗ್ರಾಹಕರ ಆರೋಗ್ಯದ ದೃಷ್ಠಿ ಇಟ್ಟುಕೊಂಡು ನಂದಿನಿ ಹಾಲನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.

160ಕ್ಕೂ ಹೆಚ್ಚು ಹಾಲಿನ ಉತ್ಪನಗಳನ್ನ ಮಾರುಕಟ್ಟೆಯಲ್ಲಿವೆ, ಆದರೆ ಇದುವರೆಗೂ 160 ನಂದಿನಿ ಉತ್ಪನಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ಇಲ್ಲ, ಅದನ್ನ ಪ್ರಚಾರ ಮಾಡುವ ಮೂಲಕ ರೈತರ ಹಿತವನ್ನ ಕಾಯಬೇಕಿದೆ.

ನಂದಿನಿ ತುಪ್ಪವನ್ನ ತಿರುಪತಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಬಮೂಲ್ ಅಧ್ಯಕ್ಷನಾದ ಒಂದೂವರೆ ತಿಂಗಳ ಅವಧಿಯಲ್ಲಿ ಅಧಿಕಾರಿಗಳು, ಹೊಟೇಲ್ ಮಾಲೀಕರ ಸಂಘಗಳು ಮತ್ತು ಉದ್ಯಮಿಗಳ ಜೊತೆ ಮಾತನಾಡಿದ್ದಾಗ ಕಳಪೆ ಗುಣಮಟ್ಟದ ಪದಾರ್ಥಗಳನ್ನ ಹಾಲಿಗೆ ಬೇರೆಸುತ್ತಿರುವುದು ಕಂಡು ಬಂದಿದೆ.

ಗ್ರಾಹಕರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಪನ್ನಿರು ಖರೀದಿ ಮಾಡುತ್ತಾರೆ, ಇತರೆ ಕಂಪನಿಗಳ ಕಡಿಮೆ ಬೆಲೆಯ ಪನ್ನಿರು ಸೇವೆನೆ ಮಾಡಿದ್ದಾರೆ. ಆರೋಗ್ಯದ ಮೇಲೆ ಪರಿಣಾಮ ಬೀರುವುದು, ಚಿಕಿತ್ಸೆಗಾಗಿ ಮತ್ತಷ್ಟು ಹಣವನ್ನು ನೀವು ಖರ್ಚು ಮಾಡ ಬೇಕಾಗುತ್ತದೆ, ಎಲ್ಲರು ನಂದಿನಿ ಉತ್ಪನ್ನಗಳನ್ನೇ ಬಳಸುವಂತೆ ಇದೇ ವೇಳೆ ಅವರು ಮನವಿ ಮಾಡಿದರು.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ