Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಹುಮುಖ ಪ್ರತಿಭೆಯ ಶಿಕ್ಷಣ ಶಿಲ್ಪಿ ಡಾ.ವೊಡೇ ಕೃಷ್ಣ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಾ. ವೂಡೇ ಪಿ ಕೃಷ್ಣ ರಾಜ್ಯಮಟ್ಟದ ಗಾಂಧಿ ಸ್ಮಾರಕ ನಿಧಿಯ ಅದ್ಯಕ್ಷರು. ಶಿಕ್ಷಣ ತಜ್ಞರು. ಬರಹಗಾರರು ಹಾಗೂ ಉತ್ತಮ ವಾಗ್ಮಿಗಳು ಹೌದು. ಇವರ ಜನ್ಮದಿನವಾದ ಫೆಬ್ರವರಿ
1ರ ಇಂದು ಅವರ ಸಾಮಾಜಿಕ ನೀತಿಯನ್ನು ಸಮಾಜಕ್ಕೆ ವಿವರಿಸುತ್ತೇನೆ. ವೂಡೇ ಪಿ ಕೃಷ್ಣ ಅವರು ಬೆಂಗಳೂರಿನವರಾದರು ಇವರ ಪೂರ್ವಜರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಡೆವೂಡೇ ಗ್ರಾಮದವರು. ಇವರ ಪೂರ್ವಜರು ಸರಿ ಸುಮಾರು 200 ವರ್ಷಗಳ ಹಿಂದೆ ಬೆಂಗಳೂರಿಗೆ ತೆರಳಿ ವ್ಯಾಪಾರ ನೀತಿಯಲ್ಲಿ ಹಂತಹಂತವಾಗಿ ಬೆಳೆದಿರುವುದು ಒಂದು ಇತಿಹಾಸ.

ವೂಡೇ ಕುಟುಂಬದ ಹೆಸರಿನಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತ್ತಿಸಿಕೊಂಡ ಇವರ ಪೂರ್ವಜರು ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರೆ. ವೂಡೇ ಪಿ ಕೃಷ್ಣ ಅವರ ಅಜ್ಜ ಸ್ವಾತಂತ್ರ ಪೂರ್ವದಲ್ಲಿ ಮೈಸೂರು ಸಂಸ್ಥಾನದ ರಾಜ ಮನೆತನದ ಆಡಳಿತದಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸದಸ್ಯರಾಗಿದ್ದರು. ವೂಡೇ ಪಿ ಕೃಷ್ಣ ಅವರ ದೊಡ್ಡಪ್ಪ ಡಬ್ಲ್ಯೂ ಎಚ್ ಹನುಮಂತಪ್ಪನವರು ಬೆಂಗಳೂರಿನ ಪ್ರಥಮ ಕಾರ್ಪೋರೇಶನ್ ಆಡಳಿತಕ್ಕೆ ಮೊದಲ ಮೇಯರ್ ಎಂಬ ವಿಚಾರ ಇತಿಹಾಸ ಪುಟಗಳಲ್ಲಿ ಗೌರವವನ್ನು ಪಡೆದುಕೊಂಡಿದೆ. ಹಲವು ವರ್ಷಗಳ ಹಿಂದೆಯೇ ಬೆಂಗಳೂರಿನ ಗಾಂಧಿನಗರದ 5ನೇ ಮುಖ್ಯ ರಸ್ತೆಗೆ ಡಬ್ಲ್ಯೂ ಎಚ್ ಹನುಮಂತಪ್ಪನವರ ಹೆಸರು ನಾಮಕರಣ ಮಾಡಲಾಗಿದೆ ಇದು ವೂಡೇ ಮನೆತನದ ಘನತೆಯ ಪ್ರತಿರೂಪ.

ವೂಡೇ ಪಿ ಕೃಷ್ಣ ಅವರು ಮೈಸೂರಿನ ರಾಮಕೃಷ್ಣಾಶ್ರಮದ ವಿದ್ಯಾಪೀಠದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ. ಎಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಪದವಿ ಪಡೆದಿರುವ ಇವರು ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ವಿದ್ಯಾಭ್ಯಾಸದ ಪದವಿ ಪಡೆಯಲು ಅಮೇರಿಕ ಹಾಗೂ ಕೆನಡಾ ದೇಶಕ್ಕೆ ಹೋಗಿದ್ದರು. ವೊಡೇ ಪಿ ಕೃಷ್ಣ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಎಮಿನೆಂಟ್ ಮೆಕ್ಯಾನಿಕಲ್ ಇಂಜಿನಿಯರ್ ರಾಷ್ಟ್ರೀಯ ಪ್ರಶಸ್ತಿ, ರಾಜ್ಯ ಯುವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿನಾಡೋಜ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಇನ್ನು ಹಲವು ದೇಶ ವಿದೇಶಗಳ ಪ್ರಶಸ್ತಿಗಳು ಇವರಿಗೆ ಲಭಿಸಿವೆ.

 ಮಹಾತ್ಮ ಗಾಂಧಿ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡಿರುವ ವೂಡೇ ಪಿ ಕೃಷ್ಣ ಅವರ ಬದುಕಿನ ಸರಳ ಸಜ್ಜನಿಕೆ ಆದರ್ಶಪ್ರಾಯ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗೆ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

 ವೂಡೇ ಪಿ ಕೃಷ್ಣ ಅವರ ಜನ್ಮಸಂಭ್ರಮದ ನೆನಪಿನಲ್ಲಿ ಜಾಂಬವ ಶ್ರೀ ಗಂಗಾಧರ್ ರಚಿಸಿರುವ ಆಡು ಮುಟ್ಟದ ಸೊಪ್ಪಿಲ್ಲ ನಾಡೋಜ ಡಾ ವೂಡೇ ಪಿ ಕೃಷ್ಣ ಗ್ರಂಥವನ್ನು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗುವುದು ಮೇಲಿನ ಪೋಸ್ಟ್ ನಲ್ಲಿ ಸಂಪೂರ್ಣ ವಿವರಣೆ ವಿವರಿಸಲಾಗಿದೆ.

ಸ್ಥಳ-ಗಾಂಧಿ ಭವನ ಶಿವಾನಂದ ವೃತ್ತ ಬೆಂಗಳೂರು. 1-2-2025ರ ಶನಿವಾರ ಸಂಜೆ 5 ಗಂಟೆಗೆ ಎಂದು ರಘು ಗೌಡ ತಿಳಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ