Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚಿತ್ರ ನಿರ್ದೇಶಕ ಜೋಸೈಮನ್ ಇನ್ನಿಲ್ಲ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಜೋಸೈಮನ್ ಅವರು ಶುಕ್ರವಾರ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.


ನಟ ಹಾಗೂ ನಿರ್ಮಾಪಕ ಜಯಸಿಂಹ ಮುಸರಿ ಅವರು ಮಾಹಿತಿ ನೀಡಿ, ಫಿಲ್ಮ್ ಚೇಂಬರ್ ಕಮಿಟಿ‌ಸಭೆಗೆ ಆಗಮಿಸಿದ್ದ ಜೋಸೈಮನ್ ಅವರು ಪ್ರತ್ಯೇಕವಾಗಿ ಕುರ್ಚಿಯಲ್ಲಿ ಕುಳಿತಿದ್ದರು. ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಜೋಸೈಮನ್ ಅವರು ಮೂಲೆಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದಾರೆ, ಅಲ್ಲಾಡುತ್ತಿಲ್ಲ ಬನ್ನಿ ಎಂದು ಅಲ್ಲಿದ್ದವರೊಬ್ಬರು ಮಾಹಿತಿ ನೀಡಿದ್ದರು. ತಕ್ಷಣ ಸಭೆಯನ್ನು ಸ್ಥಗಿತಗೊಳಿಸಿ ಸೀದಾ ಆಂಬ್ಯುಲೆನ್ಸ್​ ಬುಕ್​ ಮಾಡಿ ಸಮೀಪದ ಮಲ್ಲಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಜೋಸೈಮನ್ ನಿಧನರಾಗಿದ್ದರು.
ಸದ್ಯ ಜೋಸೈಮನ್ ಪಾರ್ಥಿವ ಶರೀರ ಮಲ್ಲಿಗೆ ಆಸ್ಪತ್ರೆಯಲ್ಲಿದೆ. ಜೋಸೈಮನ್ ಅವರ ಪುತ್ರ ಬಂದ ಕೂಡಲೇ ಅವರ ಪಾರ್ಥಿವ ಶರೀರ ಮನೆಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.


ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲಾ ಹೇಳಿಕೆ:
ತುರ್ತು ಕಾರ್ಯಕಾರಿ ಸಭೆ ಕರೆದಿದ್ದೆವು. ಆಗ ಜೋಸೈಮನ್ ತುಂಬಾ ಒಳ್ಳೆ ಅಭಿಪ್ರಾಯಗಳನ್ನು ನೀಡಿದರು. ಇಡ್ಲಿ ತಿಂದು ನಗುನಗುತ್ತಾ ಇದ್ದರು. ಆಮೇಲೆ ನೋಡಿದರೆ ಹೀಗಾಗಿದೆ. ತಕ್ಷಣ ಅವರಿಗೆ ಸಕ್ಕರೆ
, ನೀರು ಕೊಟ್ಟೆವು. ಬಳಿಕ ಸದಸ್ಯರು ಎತ್ತಿಕೊಂಡು ಆಸ್ಪತ್ರೆಗೆ ಸೇರಿಸಿದರು. ತುಂಬಾ ಆರೋಗ್ಯವಾಗಿದ್ದರು. ಯಾವುದೇ ಆರೋಗ್ಯ ಸಮಸ್ಯೆ ಇದ್ದಿರಲಿಲ್ಲ. ಈ ಘಟನೆಯಿಂದ ಆಘಾತ‌ಉಂಟಾಗಿದೆ ಎಂದು ನೂತನ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷೆ ನಟಿ ಜಯಮಾಲಾ ಬೇಸರ ವ್ಯಕ್ತಪಡಿಸಿದರು.


ಸುಂದರ್ ರಾಜ್ ಪ್ರತಿಕ್ರಿಯೆ:
ನಮ್ಮ ಕಾರ್ಯಕಾರಿ ಮೀಟಿಂಗ್ ಶುರುವಾಗಿದ್ದ ಸಂದರ್ಭದಲ್ಲಿ ಒಳ್ಳೊಳ್ಳೆ ವಿಚಾರಗಳನ್ನು ಹೇಳಿದರು. ಹೇಗೆ ನಮ್ಮ ಚಿತ್ರರಂಗದಲ್ಲಿ ವಾಕ್ ಚಿತ್ರ ಆರಂಭ ಆಗಿತ್ತು ಎಂಬುದರ ಬಗ್ಗೆ ಹೇಳಿದರು. ಯಾಕೆಂದರೆ ಕನ್ನಡ ಚಿತ್ರರಂಗಕ್ಕೆ 93 ವರ್ಷ ಆಗುತ್ತಾ ಇದೆ. ಆ ವಿಚಾರಕ್ಕೆ ಸಾಕಷ್ಟು ಸಲಹೆಗಳನ್ನು ಅವರು ನೀಡಿದರು. ಕನ್ನಡ ಚಿತ್ರರಂಗದಲ್ಲಿ ಫಿಲ್ಮ್ ಚೇಂಬರ್​ನಲ್ಲಿ ನಡೆದ ಮೊದಲ ಘಟನೆ ಇದು. ಶನಿವಾರ ಬೆಳಿಗ್ಗೆ 10 ಗಂಟೆಯಿಂದ 1 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಜೋಸೈಮನ್ ಅವರ ಪಾರ್ಥೀವ ಶರೀರ ಇಡಲಾಗುವುದು.


ಬಳಿಕ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲು ನಿರ್ಧರಿಸಲಾಗಿದೆ. ನನ್ನ ಒಳ್ಳೆಯ ಗೆಳೆಯ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಸಂತಾಪ ಸೂಚಿಸಿದ ನಟ ಸುಂದರ್ ರಾಜ್ ಈ ಸಂದರ್ಭದಲ್ಲಿ ಪುರಂದರದಾಸರ ಜೀವನ ನೀರಿನ ಮೇಲಿನ ಗುಳ್ಳೆಯಂತೆ ಯಾರು ಶಾಶ್ವತ ಅಲ್ಲ ಎಂಬುದನ್ನು ನೆನಪಿಸಿಕೊಂಡು ಹೇಳಿದರು.

ಸಾಹಸಸಿಂಹ ಬಿರುದು ಕೊಟ್ಟವರೇ ಜೋಸೈಮನ್: ನಟ ವಿಷ್ಣುವರ್ಧನ್​ ಅವರಿಗೆ ಸಾಹಸಸಿಂಹ ಬಿರುದನ್ನು ಕೊಟ್ಟವರು ಇವರೇ.. ಅಲ್ಲದೆ ಹಾಸ್ಯ ನಟನಾಗಿಯೂ ಅಭಿನಯಿಸಿದ್ದ ಜೋಸೈಮನ್ ಅವರು ನಟ ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಹಲವು ಖ್ಯಾತ ನಟರ ಸಿನಿಮಾಗಳಿಗೆ ನಿರ್ದೇಶನ ನೀಡಿದ್ದರು.​
ಇನ್ನು ಜೀವಮಾನದ ಸಾಧನೆಗಾಗಿ "ದಾದಾಸಾಹೇಬ್​ ಫಾಲ್ಕೆ" ಅಚೀವರ್​ ಪ್ರಶಸ್ತಿಯನ್ನು 2024ರಲ್ಲಿ ನಿರ್ದೇಶಕ ಜೋಸೈಮನ್ ಅವರು ಪಡೆದಿದ್ದರು.


 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ