ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಗೃಹಸ್ಥ ಆದರ್ಶ ಜೀವನ ನಡೆಸಲು ಆಧ್ಯಾತ್ಮ ವಿದ್ಯೆ ಅತ್ಯಂತ ಅವಶ್ಯಕ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ.ವೈ ರಾಜಾರಾಮ್ ಹೇಳಿದರು.
ನಗರದ ಶಾಂತಿನಗರದ ಶ್ರೀಗಣಪತಿ ದೇವಸ್ಥಾನದಲ್ಲಿ ಶ್ರೀಗಣೇಶ ಮಹಿಳಾ ಭಜನಾ ಮಂಡಳಿಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು "ಗೃಹಸ್ಥ ಜೀವನದಲ್ಲಿ ಆಧ್ಯಾತ್ಮ" ಎಂಬ ವಿಷಯವಾಗಿ ವಿಶೇಷ ಪ್ರವಚನ ನೀಡುತ್ತಾ ಮಾತನಾಡಿದರು.
ಗೃಹಸ್ಥರಾದವರು ದಿನನಿತ್ಯದ ಕರ್ಮಗಳನ್ನು ನಿಷ್ಕಾಮ ಭಾವದಿಂದ-ಭಗವದ್ ಸಮರ್ಪಿತವಾಗಿ ಮಾಡಬೇಕು, ಮನೆಗೆ ಬಂದ ಅತಿಥಿಗಳನ್ನು ದೇವರರಂತೆ ಕಂಡು ಅವರನ್ನು ಯೋಗ್ಯ ರೀತಿಯಲ್ಲಿ ಉಪಚರಿಸಿ ಆದರಿಸಬೇಕು. ಪ್ರತಿನಿತ್ಯ ಮನೆಯಲ್ಲಿ ಭಜನೆ ಮಾಡಬೇಕು. ದಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.ಇವೆಲ್ಲವುಗಳ ಸರಿಯಾದ ಅನುಷ್ಠಾನದಿಂದ ಗೃಹಸ್ಥ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದ ಅವರು ಕೌಂಡಿನ್ಯ ಮತ್ತು ಭಕ್ತ ಸುಧಾಮನ ಕಥೆಯ ಮೂಲಕ ವಿವರಿಸಿದರು.
ಕಾರ್ಯಕ್ರಮದ ಪ್ರಯುಕ್ತ ಸುನೀತಾ ಗೋಪಾಲಕೃಷ್ಣ, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವನಜಾಕ್ಷಿ ಮೋಹನ್, ಗೀತಾ ಪ್ರಕಾಶ್, ಪ್ರಮೀಳಾ ಜಗದೀಶ್ ಅವರಿಂದ ವಿಶೇಷ ಭಜನೆ ನಡೆದರೆ ಸತ್ಸಂಗವನ್ನು ಯತೀಶ್ ಎಂ ಸಿದ್ದಾಪುರ ಸುಂದರವಾಗಿ ನಿರೂಪಿಸಿದರು.
ಕೊನೆಯಲ್ಲಿ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.
ವಿಶೇಷ ಸತ್ಸಂಗದಲ್ಲಿ ರಾಜೇಶ್ವರಿ ರಾಜಾರಾಮ್, ಎಚ್ ಲಕ್ಷ್ಮೀದೇವಮ್ಮ, ಪ್ರೇಮಾ, ಲತಾ, ಈಶ್ವರಮ್ಮ, ಪದ್ಮ,ಗಜಮ್ಮ, ವಿಸ್ಮಿತ, ಜ್ಯೋತಿ, ಮೋಹಿನಿ, ಭಾವನಾ, ಸುಮಾ, ಮೀನಾಕ್ಷಿ, ರಾಜೇಶ್ವರಿ, ಭಾರತಿ, ಸರಸ್ವತಿ ಗೋವಿಂದರಾಜು, ಕವಿತಾ, ಅಂಬುಜಾ, ಗೀತಾ ಭಕ್ತವತ್ಸಲ, ಪ್ರೇಮಲೀಲಾ, ಪದ್ಮ, ಜಿ.ಯಶೋಧಾ ಪ್ರಕಾಶ್, ಶಾಂತಮ್ಮ, ಗೀತಾ ವೆಂಕಟೇಶ್, ರಾಘವೇಂದ್ರ, ಪ್ರಹ್ಲಾದ್, ಶೋಭಾ, ಗೀತಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.



