ಚಂದ್ರವಳ್ಳಿ ನ್ಯೂಸ್, ಶಬರಿಮಲೆ:
ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸ್ವಾಮಿಯ ದರ್ಶನ ಪಡೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿರುವ ಅವರು, "ಸ್ವಾಮಿಯೇ ಶರಣಂ ಅಯ್ಯಪ್ಪ" ಎಂದು ಭಕ್ತಿ ಭಾವ ಮೆರೆದಿದ್ದಾರೆ.
ಪವಿತ್ರ ಪಡಿಪೂಜೆಯಲ್ಲಿ ಭಾಗಿ:
ಅಯ್ಯಪ್ಪ ಸ್ವಾಮಿ ಸನ್ನಿಧಾನದ ಅತ್ಯಂತ ಪವಿತ್ರ ಹಾಗೂ ವಿಶೇಷ ಪೂಜೆಗಳಲ್ಲಿ ಒಂದಾದ 'ಹದಿನೆಂಟು ಮೆಟ್ಟಿಲುಗಳ ಪೂಜೆ' (ಪಡಿಪೂಜೆ) ಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಪಾಲ್ಗೊಂಡಿದ್ದರು. 18 ಪವಿತ್ರ ಮೆಟ್ಟಿಲುಗಳಿಗೆ ನೆರವೇರಿಸಲಾಗುವ ಈ ಮಹಾ ಪೂಜೆಯನ್ನು ಕಣ್ಣಾರೆ ಕಣ್ತುಂಬಿಕೊಂಡ ಸಚಿವರು, ಆ ಭಗವಂತನ ಸನ್ನಿಧಿಗೆ ತೆರಳುವ ದೈವ ಮಾರ್ಗವನ್ನು ಕಂಡು ಧನ್ಯತಾ ಭಾವ ಅನುಭವಿಸಿದ್ದಾಗಿ ತಿಳಿಸಿದ್ದಾರೆ.
"ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿರುವ ಪವಿತ್ರವಾದ 'ಹದಿನೆಂಟು ಮೆಟ್ಟಿಲುಗಳು' ಪೂಜೆಯಲ್ಲಿ (ಪಡಿಪೂಜೆ) ಪಾಲ್ಗೊಂಡು ಆ ಭಗವಂತನ ಸನ್ನಿಧಿಗೆ ತೆರಳುವ ದೈವ ಮಾರ್ಗವನ್ನು ಕಣ್ತುಂಬಿಕೊಂಡೆ" ಎಂದು ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.
ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳು ಹಾಗೂ ಅರ್ಚಕರು ಕೇಂದ್ರ ಸಚಿವರಿಗೆ ಶಬರಿಮಲೆಯ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಹಾಗೂ ಆಪ್ತರು ಉಪಸ್ಥಿತರಿದ್ದರು.



