Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"

Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"
ಜಗವೆಲ್ಲ ಮಲಗಿದಾಗ!
ನೀನೊಬ್ಬನು ಎದ್ದಿದ್ದು ಸರಿಯೇ
?
ಬಾಳ ದಾರಿಯಲ್ಲಿ ಸಂಗಾತಿಯಾಗಿ ಬಂದ
ಯಶೋಧರೆಯ ಬಿಟ್ಟು ಬಂದದ್ದು ಸರಿಯೇ
?

ಅಂಗಲಾಚಿದ, ಕೈಮುಗಿದು ಬೇಡಿದ
ತಡೆದ ಕೈಗಳು ಇನ್ನು ಕೈಚಾಚಿಯೇ ಇವೆ

ಆಸೆ ಕಂಗಳಲಿ ನೂರೆಂಟು ಕನಸುಗಳ ಹೊತ್ತು
ನಿನ್ನ ಬರುವಿಕೆಗಾಗಿ ಕಾದ ಕಣ್ಣುಗಳು ಬಿಟ್ಟಂತೆಯೇ ಇವೆ!

ಗುಡುಗು, ಮಿಂಚುಗಳು ಬಂದು ಹೋದವು
ಮಳೆ ತಾನೆ ಯಾರಿಗೇನಾದರೇನೆಂದು

ತಾ ಸುರಿದು ಹೋಯ್ತು
ಸುರಿದೀತೇ ಮತ್ತೊಮ್ಮೆ ಬಾಳಲ್ಲಿ ಮಳೆ

ನನ್ನ ಪ್ರೀತಿಯ ಸೊನೆ ಕಮರಿದರು ಚಿಂತೆಯಿಲ್ಲ
ಏನನರಿಯದ ಹಾಲುಗಲ್ಲದ ಹಸುಳೆ

ಮಾಡಿತ್ತೇನು ಅಪರಾಧ?
ಅಪ್ಪಾ........ ಎಂದು ಕರೆವ ಮುನ್ನವೇ

ತೊದಲು ನುಡಿಗಳನು ಕೇಳಿಸದೆ
ಅಂಬೆಗಾಲಲಿ ನಡೆದು ಬೀಳುವಾಗ ಮೇಲೇಳಿಸದೆ

ಬದುಕಿಗೆ ಬೆನ್ನು ತಿರುಗಿಸಿದ್ದು ಸರಿಯೇ?
ನಮ್ಮೆಲ್ಲ ಆಸೆಗಳ ಗೋರಿಗಳಿಗೆ ಹಾಕಿ ಮುಚ್ಚಿದ್ದು

ಜಗದ ತೋಟದ ಹೂವುಗಳ ಅರಳಿಸಿದ್ದು
ಸರಿಯೇ
?

ಕತ್ತಲು ಸರಿದು ಬೆಳಕು ಉದಯವಾದಂತೆ
ಮನದ ಮೂಲೆಯು ಜಾಗೃತಗೊಂಡು

ನೀ ಮಾಡಿದ್ದು ಸರಿಯೆನಿಸಿತು
ನನಗಿಂತ ನಮ್ಮ ಬಾಳ ಶ್ರೇಯಸ್ಸಿಗಿಂತ

ಜಗದ ಹಸಿವೇ ಮಿಗಿಲೆಂದು
ಆದರೂ.......ನಾ ಕಾದಿರುವೆ ನಿನ್ನ ನೆರಳಾಗಿ ಹಿಂಬಾಲಿಸಲು
l
ಕವಿತೆ
-ಕೆ.ಎಸ್.ತಿಪ್ಪಮ್ಮ ನಾಗರಾಜು, ಚಿತ್ರದುರ್ಗ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
"ನಿನ್ನ ಬರುವಿಕೆಗಾಗಿ ನಾ ಕಾದಿರುವೆ"ವಿವೇಕಾನಂದರ ಮೇಲೆ ಗೌತಮ ಬುದ್ಧನ ಪ್ರಭಾವ ಅಗಾಧವಾದದ್ದು: ಮಾತಾಜೀ ತ್ಯಾಗಮಯೀ.ಸಂಘಟನೆಯ ಬಲವೇ ಪಕ್ಷದ ಯಶಸ್ಸಿನ ಆಧಾರ: ಆರ್. ಅಶೋಕ್ ಕರೆ​ರೇಷ್ಮೆ ಮತ್ತು ಖನಿಜ ಭವನಕ್ಕೆ ಮುಖ್ಯಮಂತ್ರಿ ಶಂಕುಸ್ಥಾಪನೆಒಳಮೀಸಲಾತಿ ಜಾರಿ: ದಶಕಗಳ ಕನಸು ನನಸು; ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆಸಿದ್ದಗಂಗಾ ಮಠಕ್ಕೆ ಬಿ.ವೈ.ವಿಜಯೇಂದ್ರ ಭೇಟಿ: ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಶ್ರೀಗಳಿಗೆ ಆಹ್ವಾನಹೊಳಲ್ಕೆರೆಯಲ್ಲಿ 'ಬಿ.ಎಸ್.ವೈ ಅಭಿಮಾನೋತ್ಸವ'ದ ಪೂರ್ವಭಾವಿ ಸಭೆಚಿತ್ರದುರ್ಗದ ಮುರುಘಾಮಠಕ್ಕೆ ಬಿ.ವೈ. ವಿಜಯೇಂದ್ರ ಭೇಟಿ: 'ಬಿಎಸ್‌ವೈ ಅಭಿಮಾನೋತ್ಸವ'ಕ್ಕೆ ಶ್ರೀಗಳಿಗೆ ಆಮಂತ್ರಣಕೋಟೆ ನಾಡು ಚಿತ್ರದುರ್ಗದಲ್ಲಿ 'ಬಿ.ಎಸ್.ವೈ ಅಭಿಮಾನೋತ್ಸವ': ಭರ್ಜರಿ ಸಿದ್ಧತೆತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟ್‌ಗಳ ಅಳವಡಿಕೆ ಪೂರ್ಣ: ರೈತರ ಬಾಳಿಗೆ ಭದ್ರತೆ ನೀಡಿದ ಸರ್ಕಾರ