Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಂದು ಹಾರನಕಣಿವೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾಕುಂಭಾಭಿಷೇಕ

Advertisement

​ಚಂದ್ರವಳ್ಳಿ ನ್ಯೂಸ್, ಹೊಸದುರ್ಗ:
ತಾಲ್ಲೂಕಿನ ಅಂಚಿಬಾರಿಹಟ್ಟಿಯ ಹಾರನಕಣಿವೆ ಶ್ರೀ ರಂಗನಾಥಸ್ವಾಮಿ ದೇವರ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ
, ಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವವು ಏಪ್ರಿಲ್ 29 ರಿಂದ ಮೇ 1ರವರೆಗೆ ಅತ್ಯಂತ ಸಡಗರದಿಂದ ಜರುಗಲಿದೆ.

​ಕ್ಷೇತ್ರದ ಅಭಿವೃದ್ಧಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ನಡೆಯಲಿವೆ.

​ಕಾರ್ಯಕ್ರಮದ ವಿವರಗಳು:
​ಏಪ್ರಿಲ್ 29 (ಬುಧವಾರ): ಸಂಜೆ 4:00 ಗಂಟೆಯಿಂದ ಗಂಗಾಪೂಜೆ, ಗಣಪತಿ ಪೂಜೆ, ವಾಸ್ತು ವರುಣ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ಯಾಗಶಾಲಾ ಪ್ರವೇಶ, ಕಳಸ ಸ್ಥಾಪನೆ, ನವಗ್ರಹ ಸ್ಥಾಪನೆ ಹಾಗೂ ಗಣಪತಿ ಮತ್ತು ನವಗ್ರಹ ಹೋಮಗಳು ನಡೆಯಲಿವೆ.

​ಏಪ್ರಿಲ್ 30 (ಗುರುವಾರ): ಬೆಳಿಗ್ಗೆ 8:00 ಗಂಟೆಗೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ಅದಿವಾಸಾದಿಗಳು ಹಾಗೂ ಪ್ರತಿಷ್ಠಾ ದೇವತಾ ಪ್ರಧಾನ ಹೋಮಗಳು ಜರುಗಲಿವೆ. ಅಂದು ಸಂಜೆ ವಿವಿಧ ಕ್ಷೇತ್ರಗಳ ದೇವತೆಗಳ ಆಗಮನವಾಗಲಿದೆ.

​ಮೇ 1 (ಶುಕ್ರವಾರ): ಸಮಾರಂಭದ ಪ್ರಮುಖ ದಿನವಾದ ಶುಕ್ರವಾರ ಬೆಳಿಗ್ಗೆ 6:45 ರಿಂದ 7:25 ರ ಶುಭ ಲಗ್ನದಲ್ಲಿ ಗೋಪುರ ಕಳಸ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ನೆರವೇರಲಿದೆ. ನಂತರ ಕಳಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

​ದಾನಿಗಳಿಗೆ ಮನವಿ:
​ಹೋಮದ ಪೂರ್ಣಾಹುತಿಗೆ ಬೇಕಾದ ರೇಷ್ಮೆ ವಸ್ತ್ರ
, ಒಣಕೊಬ್ಬರಿ, ತುಪ್ಪ ಹಾಗೂ ಅನ್ನಸಂತರ್ಪಣೆಗೆ ಬೇಕಾದ ಅಕ್ಕಿ, ಬೇಳೆ ಸೇರಿದಂತೆ ವಿವಿಧ ಪದಾರ್ಥಗಳನ್ನು ಭಕ್ತಾದಿಗಳು ಏಪ್ರಿಲ್ 30ರ ಒಳಗಾಗಿ ದೇವಸ್ಥಾನದ ಸಮಿತಿಗೆ ನೀಡಬಹುದಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

​ಈ ಭವ್ಯ ಸಮಾರಂಭಕ್ಕೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ದೇವತೆಗಳು ಹಾಗೂ ಭಕ್ತಾದಿಗಳು ಸಾಕ್ಷಿಯಾಗಲಿದ್ದಾರೆ. ಹಾರನಕಣಿವೆ ಶ್ರೀ ರಂಗನಾಥಸ್ವಾಮಿ ದೇವರ ಟ್ರಸ್ಟ್‌ನ ಅಧ್ಯಕ್ಷ ಡಾ.ಆರ್. ರಂಗನಾಥ್, ಉಪಾಧ್ಯಕ್ಷ ಹೆಚ್.ಸಿ. ನಿಂಗಪ್ಪ, ಎಸ್. ಗೋಪಾಲಕೃಷ್ಣ, ಕಾರ್ಯದರ್ಶಿ ಆರ್. ಸಂಘಪ್ಪ, ಖಜಾಂಚಿ ಟಿ. ಕೃಷ್ಣಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಭಕ್ತಾದಿಗಳಿಗೆ ಆದರದ ಸುಸ್ವಾಗತ ಕೋರಿದ್ದಾರೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕುವೆಂಪು ವಿಶ್ವವಿದ್ಯಾನಿಲಯದಿಂದ ಐಜಿಪಿ ಹರ್ಷ ಪಿ.ಎಸ್ ಅವರಿಗೆ ಪಿಎಚ್‌ಡಿ ಪದವಿ ಘೋಷಣೆಪೋತಲೂರು ವೀರ ಭ್ರಮ್ಹೇಂದ್ರ ಆರಾಧನ ಮಹೋತ್ಸವನಟ ಚೇತನ್ ಅಹಿಂಸಾ ವಿರುದ್ಧ ಕನ್ನಡ ಪರ ಹೋರಾಟಗಾರರಿಂದ ಪ್ರತಿಭಟನೆಬಡಪ್ಪನಕಟ್ಟೆ   ಕಥೆ ಭಾಗ-6:ಕುಮಾರ್ ಬಡಪ್ಪಬಡಪ್ಪನಕಟ್ಟೆ  ಕಥೆ ಭಾಗ-7:ಕುಮಾರ್ ಬಡಪ್ಪಮೇಕೆದಾಟು ವಿರೋಧಿಸುವವರ ಪರ ಕಾಂಗ್ರೆಸ್ ಪ್ರಚಾರ: ಕುಮಾರಸ್ವಾಮಿ ಆಕ್ರೋಶಅಧಿಕಾರಿಗಳು ಸೂಟ್-ಬೂಟ್ ಸಂಸ್ಕೃತಿಯಿಂದ ಹೊರಬರಲಿ: ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಕಿವಿಮಾತುಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಪಡೆದ ಮೈಸೂರಿನ ವಿದ್ಯಾರ್ಥಿನಿಮೂಲ ಸೌಕರ್ಯ ಅಭಿವೃದ್ಧಿ ಕುರಿತು ಡಿಕೆಶಿ ಹಾಗೂ ಎಲ್&ಟಿ ಅಧ್ಯಕ್ಷರ ಮಹತ್ವದ ಚರ್ಚೆಲೋಕಭವನದಲ್ಲಿ ನವೀಕೃತ ಸ್ವಾಗತ ಕೇಂದ್ರ ಹಾಗೂ 'ಕಾಮಧೇನು ಲೋಕ' ಉದ್ಘಾಟನೆ