Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ರೆಡ್ಡಿ ಎಂದು ಬರೆಸಿ-ಜಗದೀಶ್ ರೆಡ್ಡಿ

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ರಾಜ್ಯದಲ್ಲಿ ಸೆ.
22ರಿಂದ ಪ್ರಾರಂಭವಾಗುವ ಸಾಮಾಜಿಕ, ಶೈಕ್ಷಣಿಕ ಗಣತಿ ವೇಳೆ ಸಮಾಜದ ಬಂದುಗಳು ಜಾತಿ ಹಾಗೂ ಉಪಜಾತಿ ಕಾಲಂ ನಲ್ಲಿ ರೆಡ್ಡಿ ಎಂದು ನಮೂದಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ವೇಮನ ರೆಡ್ಡಿ ಸಂಘದ ತಾಲೂಕು ಅಧ್ಯಕ್ಷ ಜಗದೀಶ್ ರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ವೇಮನ ರೆಡ್ಡಿ ಸಂಘದಿಂದ ನಡೆದ ಸುದ್ದಿ ಗೋಷ್ಠಿಯಲ್ಲಿ ಜಗದೀಶ್ ರೆಡ್ಡಿ ಮಾತನಾಡಿ ಕಳೆದ ಜನಗಣತಿ ವೇಳೆ ನಮ್ಮ ರೆಡ್ಡಿ ಸಮಾಜದ ಜನಸಂಖ್ಯೆ ಅತಿ ಕಡಿಮೆ ಎಂಬಂತೆ ಬಿಂಬಿಸಲಾಗಿತ್ತು. ಕಾರಣ ನಮ್ಮ ರೆಡ್ಡಿ ಸಮಾಜದಲ್ಲಿ ಹಲವಾರು ಉಪ ಪಂಗಡಗಳಿದ್ದು ಅದನ್ನು ಪರಿಗಣಿಸಿ ಜೊತೆಗೆ ಗಣತಿದಾರರ ಮಾಹಿತಿ ಕೊರತೆಯಿಂದಾಗಿ ರೆಡ್ಡಿ ಸಮಾಜವನ್ನು ಅಲ್ಪ ಸಂಖ್ಯಾತರಲ್ಲಿ ಅಲ್ಪ ಸಂಖ್ಯಾತರಂತೆ ಬಿಂಬಿಸಲಾಗಿತ್ತು.

ಇದರಿಂದ ನಮ್ಮ ಸಮಾಜಕ್ಕೆ ಸಿಗಬೇಕಿದ್ದ ರಾಜಕೀಯ ಸ್ಥಾನಮಾನ, ಸರ್ಕಾರದ ಸವಲತ್ತುಗಳು ಮರೀಚಿಕೆ ಯಾಗಿವೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ರೆಡ್ಡಿ ಸಮಾಜದ ಜನಸಂಖ್ಯೆ ನಲವತ್ತು ಲಕ್ಷಕ್ಕೂ ಹೆಚ್ಚಿದೆ. ಒಳ ಪಂಗಡ ಗಳಿಂದಾಗಿ ಇದು ಮರೆಯಾಗಿದೆ. ಹೀಗಾಗಿ ಶೈಕ್ಷಣಿಕ ಗಣತಿದಾರರು ಬಂದಾಗ ಸಮಾಜದ ಬಂದುಗಳು ಒಳ ಪಂಗಡಗಳನ್ನು ಬಿಟ್ಟು ರೆಡ್ಡಿ ಎಂದೇ ಜಾತಿ ಹಾಗೂ ಉಪಜಾತಿ ಕಾಲಂ ನಲ್ಲಿ ಬರೆಸಬೇಕೆಂದು ಸಮಾಜದ ಬಂದುಗಳಿಗೆ ಕರೆ ಕೊಟ್ಟರು.

ತಾಲೂಕು ಪ್ರದಾನ ಕಾರ್ಯದರ್ಶಿ ಹನುಮಂತ ರೆಡ್ಡಿ ಮಾತನಾಡಿ ರೆಡ್ಡಿ ಸಮಾಜ ರಾಜ್ಯದಲ್ಲಿ ಆಳ್ವಿಕೆ ಮಾಡಿದಂತ ಸಮಾಜ ರೆಡ್ಡಿ ಲಿಂಗಾಯ್ತ, ರೆಡ್ಡಿ ಯಾದವ, ರೆಡ್ಡಿ ಕುರುಬ ಸೇರಿದಂತೆ ಹತ್ತಾರು ಒಳ ಪಂಗಡ ಗಳಿಂದಾಗಿ ರೆಡ್ಡಿ ಸಮಾಜ ತೀರಾ ಅಲ್ಪ ಸಂಖ್ಯಾತರಂತೆ ಬಿಂಬಿತರಾಗಿದ್ದೇವೆ. ಇದರಿಂದ ಎಲ್ಲಾ ರೀತಿಯಿಂದಲೂ ನಮ್ಮ ಸಮಾಜ ಹಿಂದುಳಿಯುವಂತಾಗಿದೆ. ಆದ್ದರಿಂದ ಗಣತಿ ಸಮಯದಲ್ಲಿ ಸಮಾಜದ ಬಂದುಗಳು ಕಡ್ಡಾಯವಾಗಿ ಎರಡು ಕಾಲಂ ಗಳಲ್ಲಿ ರೆಡ್ಡಿ ಎಂದು ಬರೆಸಬೇಕೆಂದು ಹೇಳಿದರು.     

ಸುದ್ದಿ ಗೋಷ್ಠಿಯಲ್ಲಿ ಸಂಘದ ತಾಲೂಕು ಗೌರವಾಧ್ಯಕ್ಷ ಜೈ ಶಂಕರ್, ಉಪಾಧ್ಯಕ್ಷ ಶಿವಾರೆಡ್ಡಿ, ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ, ನಿರ್ದೇಶಕರಾದ ರಾಮಚಂದ್ರ ರೆಡ್ಡಿ, ಸಂಗಪ್ಪ, ಶ್ರೀನಿವಾಸ್ ಮುಂತಾದವರು ಹಾಜರಿದ್ದರು.

 

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ