ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ತಾಲ್ಲೂಕಿನ ಜೋಡಿಚಿಕ್ಕೇನಹಳ್ಳಿಯ ಪ್ರಕಾಶ್ ಎನ್. ಇವರ ಸಮಾಜ ಸೇವೆ ಹಾಗೂ ಹೋರಾಟವನ್ನು ಗುರುತಿಸಿ ಯುನೈಟೆಡ್ ಅಮೇರಿಕನ್ ಯೂನಿರ್ವಸಿಟಿಯಿಂದ ಗೌರವ ಡಾಕ್ಟರೇಟ್ ಅವಾರ್ಡ್ ಲಭಿಸಿದೆ.
ಜು.೪ ರಂದು ಪಾಂಡಿಚೇರಿಯಲ್ಲಿ ಡಾಕ್ಟರೇಟ್ ಅವಾರ್ಡ್ ಪ್ರದಾನ ಮಾಡಲಾಗುವುದೆಂದು ಯುನೈಟೆಡ್ ಅಮೇರಿಕನ್ ಯೂನಿರ್ವಸಿಟಿಯ ಸಂಸ್ಥಾಪಕರು ಹಾಗೂ ಡೈರೆಕ್ಟರ್ ಆದ ಡಾ.ಕೆ.ವೆಂಕಟೇಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಬೂದಿಹಳ್ಳಿ ಗ್ರಾಮದಲ್ಲಿ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಕ್ಕೊಳಪಟ್ಟ ದಲಿತ ಸಮುದಾಯಗಳಿಗೆ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಹದಿನಾರು ಕುಟುಂಬಗಳಿಗೆ ೩೪ ಎಕರೆ ಜಮೀನನ್ನು ಮಂಜೂರಾತಿ ಮಾಡಿಸುವಲ್ಲಿ ಇವರ ಹೋರಾಟವಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.



