Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕನಕ ದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ-ಧೀರಜ್ ಮುನಿರಾಜು 

Advertisement
ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
     ದಾಸಶ್ರೇಷ್ಠ ಕನಕ ದಾಸರ ಭಕ್ತಿ ಅನನ್ಯವಾದುದು. ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನ ಭಕ್ತರಿಗೆ ದೇವಾಲಯದ ಕನಕನ ಕಿಂಡಿಯ ಮೂಲಕವೇ ಆಗುತ್ತದೆ ಎಂದರೆ ಕನಕರ ಭಕ್ತಿಯ ಅಗಾದತೆ ಎಷ್ಟು ಎಂಬುದು ತಿಳಿಯುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.

          ದೊಡ್ಡಬಳ್ಳಾಪುರ ತಾಲೂಕು ಆಡಳಿತದಿಂದ ನಡೆದ ಸಂತ ಶ್ರೇಷ್ಠ ಕನಕದಾಸರ 537ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಧೀರಜ್ ಮುನಿರಾಜು ದಾಸರಲ್ಲಿ ಶ್ರೇಷ್ಠ ಕನಕದಾಸರು ನಾಡಿಗೆ ನೀಡಿದ ಕೊಡುಗೆ ಅಪಾರ.

ವರ್ಣ ಭೇದ, ವರ್ಗ ಬೇದ ನೀತಿಯ ವಿರುದ್ಧ ಹೋರಾಡಿದ ಕನಕದಾಸರು ಕನ್ನಡ ಸಾಹಿತ್ಯಕ್ಕೆ ತನ್ನ ಕೀರ್ತನೆಗಳ ಮೂಲಕ ಹೊಸರೂಪವನ್ನು ತಂದು ಕೊಟ್ಟವರಲ್ಲಿ ಮೊದಲಿಗರು. ನಾವೆಲ್ಲ ಅವರ ಆದರ್ಶಗಳನ್ನು ಅನುಸರಿಸಬೇಕಾಗಿದೆ ಎಂದು ಧೀರಜ್ ಹೇಳಿದರು.

            ನಗರ ಸಭೆ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್ ಮಾತನಾಡಿ ಕನಕ ದಾಸರು ಸಂತರಾಗುವ ಮುನ್ನ ಪಾಳೇಗಾರರಾಗಿ ಉತ್ತಮ ಆಡಳಿತ ನೀಡಿದವರು. ಆದಿನೆಲೆ ಯಾದೀಶ ಚೆನ್ನಕೇಶವನ ಭಕ್ತರಾಗಿ ತನ್ನೆಲ್ಲ ಸಂಪತ್ತು ಸಾಮ್ರಾಜ್ಯ ಬಿಟ್ಟು ಸಂತ ರಾದವರು. ಅನಿಷ್ಠ ಜಾತಿ ಪದ್ಧತಿ ವಿರೋಧಿಸಿದವರು.

ಇವತ್ತಿಗೂ ಕೂಡಾ ಅವರ ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯ ಏನಾದರು ಬಲ್ಲಿರಾ ಎಂಬ ಕೀರ್ತನೆ ಸರ್ವಕಾಲಿಕವಾದದ್ದು. ಅವರು ಒಂದು ಜಾತಿಗೆ ಸೀಮಿತವಾಗದೆ ಮಾನವರೆಲ್ಲ ಒಂದೇ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು. 500ವರ್ಷಗಳ ಹಿಂದೆಯೇ ವರ್ಣ ದ್ವೇಷದ ವಿರುದ್ಧ ಹೋರಾಡಿದ ಕನಕ ದಾಸರ ಕೊಡುಗೆ ಅಪಾರವಾದುದು ಎಂದು ಹೇಳಿದರು.

         ನಿಕಟ ಪೂರ್ವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ ಕನಕ ದಾಸರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದುದು. ಅವರ ಉಘಾ, ಬೋಗಾದಿಗಳು, ಮುಂಡಿಗೆಗಳು, ಕೀರ್ತನೆಗಳು ಸರ್ವ ಕಾಲಕ್ಕೂ ಸಲ್ಲುವಂತಹವು.

ಕನಕದಾಸರ ರಚನೆಗಳಾದ ರಾಮದಾನ್ಯ ಚರಿತ್ರೆ, ನಳ ಚರಿತ್ರೆ, ಮೋಹನ ತರಂಗಿಣಿ ಮುಂತಾದ ಕೃತಿಗಳು ಕನ್ನಡ ಸಾಹಿತ್ಯ ಲೋಕದ ಮೇರು ಕೃತಿಗಳು. ಅವರು ಕವಿ ಮಾತ್ರವಲ್ಲದೆ ಒಬ್ಬ ಗಟ್ಟಿ ಹೋರಾಟಗಾರರಾಗಿದ್ದಾವರು. ಪುರೋಹಿತ ಶಾಹಿ, ಹಾಗೂ ಅಸಮಾನತೆ ವಿರುದ್ಧ ಶತಮಾನಗಳ ಹಿಂದೆಯೇ ದ್ವನಿ ಎತ್ತಿ ಹೋರಾಟ ಮಾಡಿದುದು ಅತ್ಯಂತ ಗಮನಾರ್ಹವಾದ ಸಂಗತಿ ಎಂದು ಹೇಳಿದರು.

           ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ವಿಭಾ ವಿದ್ಯಾ ರಾತೋಡ್, ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಂಘಟನೆಗಳ ಮುಖಂಡರಾದ ಸಿ. ಗುರುರಾಜಪ್ಪ, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ, ಗ್ರಾ. ಪಂ ಸದಸ್ಯೆ ನಾಗರತ್ನಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ್ ಹಾಗೂ ತಾಲೂಕು ಕುರುಬರ ಸಮಾಜದ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

 

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ