Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳಿಗೆ ಓದು-ಬರಹದ ಜೊತೆಗೆ ಸಂಸ್ಕಾರವೂ ಮುಖ್ಯ: ಪಿ.ಎನ್ ಕೃಷ್ಣ ಪ್ರಸಾದ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
"ಶಿಕ್ಷಣ ವೃತ್ತಿಯು ಅತ್ಯಂತ ಪವಿತ್ರವಾದದ್ದು. ನಾವು ಈ ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ನಿಜವಾದ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ" ಎಂದು ನಿವೃತ್ತ ಪ್ರಾಚಾರ್ಯ ಕೆ.ಎನ್. ವಸಂತ್ ಕುಮಾರ್ ಅವರು ಅಭಿಪ್ರಾಯಪಟ್ಟರು.

​ಚಳ್ಳಕೆರೆ ತಾಲೂಕಿನ ತಳಕಿನ ಸರ್ಕಾರಿ ಎಸ್. ಜಿ. ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ತಮ್ಮ ವಯೋ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಭಾವನಾತ್ಮಕವಾಗಿ ಮಾತನಾಡಿದರು.

​ತಾಯಿಯ ಆಶೀರ್ವಾದವೇ ನನ್ನ ಪ್ರಗತಿಗೆ ಕಾರಣ
​"ನಾನು ಸಣ್ಣ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದವನು. ಎಸ್ಸೆಸ್ಸೆಲ್ಸಿ ಮುಗಿದ ನಂತರ ಆರ್ಥಿಕ ತೊಂದರೆಯಿಂದಾಗಿ ಒಂದು ವರ್ಷ ವಿದ್ಯಾಭ್ಯಾಸ ಮುಂದುವರಿಸಲು ಕಷ್ಟವಾಗಿ, ಸೈನಿಕ ಸೇವೆಗೆ ಸೇರಲು ಮುಂದಾಗಿದ್ದೆ. ಆದರೆ, ನಮ್ಮ ತಾಯಿ ಅದಕ್ಕೆ ಒಪ್ಪದೆ ಕಷ್ಟಪಟ್ಟು ನನಗೆ ಉನ್ನತ ವಿದ್ಯಾಭ್ಯಾಸ ಕೊಡಿಸಿದರು. ಇಂದು ನನ್ನ ಈ ಎಲ್ಲಾ ಪ್ರಗತಿಗೆ ತಾಯಿಯ ಆಶೀರ್ವಾದವೇ ಕಾರಣ. ಜೊತೆಗೆ ನನ್ನ ವೃತ್ತಿಜೀವನದ ಯಶಸ್ಸಿಗೆ ಧರ್ಮಪತ್ನಿ ಶ್ರೀಮತಿ ವಾಣಿ ಹಾಗೂ ಕುಟುಂಬಸ್ಥರ ಸಹಕಾರ ದೊಡ್ಡದಾಗಿದೆ."
ಕೆ.ಎನ್. ವಸಂತ್ ಕುಮಾರ್
, ನಿವೃತ್ತ ಪ್ರಾಚಾರ್ಯರು.

​ಮುಂದುವರಿದು ಮಾತನಾಡಿದ ಅವರು, "ಹಿಂದಿನ ದಿನಗಳಲ್ಲಿ 'ಪಾಠ ಮಾಡಿ ಫಲಿತಾಂಶ ಕೊಡಿ' ಎಂಬ ವಾತಾವರಣವಿತ್ತು. ಆದರೆ ಇಂದಿನ ದಿನಗಳಲ್ಲಿ 'ಮಾಹಿತಿ ಕೊಡಿ, ಫಲಿತಾಂಶ ಕೊಡಿ' ಎನ್ನುವಂತಾಗಿದೆ" ಎಂದು ಇಲಾಖೆಯ ಇಂದಿನ ನೀತಿ-ನಿಯಮಗಳ ಕುರಿತು ಬೇಸರ ಹಂಚಿಕೊಂಡರು.

​ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು: ಪಿ.ಎನ್. ಕೃಷ್ಣ ಪ್ರಸಾದ್
​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಪಿ.ಎನ್. ಕೃಷ್ಣ ಪ್ರಸಾದ್ ಮಾತನಾಡಿ
, "ನಾನು ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯನಾಗಿದ್ದಾಗ ವಸಂತ್ ಕುಮಾರ್ ನನ್ನ ಬೆನ್ನೆಲುಬಾಗಿ ನಿಂತಿದ್ದರು. ಅವರಲ್ಲಿನ ಮೌನ ಸ್ವಭಾವ ಮತ್ತು ಪ್ರೀತಿ-ವಿಶ್ವಾಸ ಎಲ್ಲರಿಗೂ ಮಾದರಿ. ವಿದ್ಯಾರ್ಥಿ ಜೀವನವು ಅತ್ಯಂತ ಅದ್ಭುತವಾದದ್ದು, ಅದನ್ನು ಯಾರೂ ಹಾಳು ಮಾಡಿಕೊಳ್ಳಬಾರದು. ವಿದ್ಯಾರ್ಥಿಗಳಿಗೆ ಕೇವಲ ಓದು-ಬರಹ ಅಷ್ಟೇ ಮುಖ್ಯವಲ್ಲ, ಜೀವನದಲ್ಲಿ ಸಂಸ್ಕಾರವಂತರಾಗುವುದು ಮುಖ್ಯ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​30 ವರ್ಷಗಳ ಗಣನೀಯ ಸೇವೆ ಶ್ಲಾಘನೀಯ
​ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಮಾತನಾಡಿ
, "ಸರ್ಕಾರಿ ಸೇವೆಗೆ ಸೇರಿದ ಮೇಲೆ ನಿವೃತ್ತಿ ಸಹಜ. ಆದರೆ ನಿವೃತ್ತಿಯ ನಂತರವೇ ಹೊಸ ಬದುಕು ಆರಂಭವಾಗುತ್ತದೆ. ವಸಂತ್ ಕುಮಾರ್ ಅವರು ಸುದೀರ್ಘ 30 ವರ್ಷಗಳ ಕಾಲ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ, ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಹಾಗೂ ಜಿಲ್ಲಾ ಪ್ರಾಚಾರ್ಯರ ಸಂಘದ ಕಾರ್ಯದರ್ಶಿಯಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಸದಾ ಹಸನ್ಮುಖಿ ಹಾಗೂ ರೈತಾಪಿ ಹಿನ್ನೆಲೆಯ ಮೃದು ಸ್ವಭಾವದ ಇವರು ನಿಜಕ್ಕೂ ಅಜಾತಶತ್ರು" ಎಂದು ಶ್ಲಾಘಿಸಿದರು.

​ಮೊಳಕಾಲ್ಮೂರು ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಗೋವಿಂದಪ್ಪ ಮಾತನಾಡಿ, "ನಮ್ಮ 35 ವರ್ಷಗಳ ಗೆಳೆತನದಲ್ಲಿ ಅವರ ಅಪರೂಪದ ವ್ಯಕ್ತಿತ್ವ, ರೈತಾಪಿ ಮತ್ತು ಆದರ್ಶ ಗುಣಗಳನ್ನು ಕಂಡಿದ್ದೇನೆ. ಇಲಾಖೆಯಲ್ಲಿ ಅವರು 'ಏಕೈಕ ಚಲಾವಣೆ ನಾಣ್ಯ'ದಂತಿದ್ದರು" ಎಂದು ಬಣ್ಣಿಸಿದರು.

​ಸಮಾರಂಭದಲ್ಲಿ ಪ್ರಾಚಾರ್ಯರಾದ ಭೀಮರೆಡ್ಡಿ, ಲಲಿತಮ್ಮ, ದೇವೇಂದ್ರಪ್ಪ, ಕಾಲೇಜಿನ ಪ್ರಭಾರ ಪ್ರಾಚಾರ್ಯ ಜಾನ್ ಬಾಷಾ, ಹಾಗೂ ಉಪನ್ಯಾಸಕರಾದ ಕರಿಯಪ್ಪ, ಈಶ್ವರಪ್ಪ ಮತ್ತು ಶಾಂತಕುಮಾರಿ ಅವರು ನಿವೃತ್ತ ಪ್ರಾಚಾರ್ಯರ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೆ.ಎನ್. ವಸಂತ್ ಕುಮಾರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವಾಣಿ ವಸಂತ್ ಕುಮಾರ್ ದಂಪತಿಯನ್ನು ಸಹೋದ್ಯೋಗಿಗಳು ಹಾಗೂ ಗಣ್ಯರು ಭವ್ಯವಾಗಿ ಸನ್ಮಾನಿಸಿದರು.

​ ​ಕಾರ್ಯಕ್ರಮದಲ್ಲಿ ಬೆಂಗಳೂರಿನ ಉದ್ಯಮಿ ಎಂ. ಎಸ್. ದಯಾನಂದ, ಪ್ರಾಚಾರ್ಯ ಡಾ. ತಿಮ್ಮಣ್ಣ, ಎರಿಸ್ವಾಮಿ, ಮಂಜುನಾಥ್ ರೆಡ್ಡಿ, ಜಗನ್ನಾಥ್, ವೇದಮೂರ್ತಿ, ಉಪನ್ಯಾಸಕರುಗಳಾದ ಚಂದ್ರಪ್ಪ, ಶೋಭಾ, ಕೋಮಲ, ನಾಗರಾಜ್, ನರಸಿಂಹಪ್ಪ, ಸಾಹಿತಿ ನಾಗರಾಜ್ ಬೆಳಗಟ್ಟ, ಎಂ.ಎಸ್. ಶ್ರೀನಿವಾಸ್, ಕುಮಾರಸ್ವಾಮಿ, ಡಾ. ಚಾರುಲತಾ, ಪುಟ್ಟರಂಗಪ್ಪ, ಹೆಚ್.ಆರ್. ಜಬಿವುಲ್ಲಾ ಸೇರಿದಂತೆ ವಸಂತ್ ಕುಮಾರ್ ಅವರ ಕುಟುಂಬಸ್ಥರು, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಬಿಳಿ ವಸ್ತ್ರಗಳೊಂದಿಗೆ ಕಂಗೊಳಿಸಿದ ಶಾಲಾ ಮಕ್ಕಳು  ಅಖಿಲೇಶ್ ಯಾದವ್‌ರವರ ಹುಟ್ಟುಹಬ್ಬ ಆಚರಿಸಿದ ಸಮಾಜವಾದಿ ಪಾರ್ಟಿಎಸ್‌ಐಆರ್ ಮತದಾರರ ಪಟ್ಟಿಯ ಶುದ್ಧೀಕರಣವೋ ಅಥವಾ ಪ್ರಜಾಪ್ರಭುತ್ವದ ವಿಶ್ವಾಸ ಪರೀಕ್ಷೆಯೋ:ಪತ್ರಕರ್ತರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರಾಷ್ಟ್ರಪತಿ ದ್ರೌಪದಿ ಮರ್ಮು ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟ ರಾಜ್ಯಪಾಲ ಗೆಹ್ಲೋಟ್ ಹಾಗೂ ಡಿ.ಕೆ. ಶಿವಕುಮಾರ್"ಅವರಿಗೆ ದೇಶ ಮೊದಲಲ್ಲ, ದೇಣಿಗೆ ಮೊದಲು": ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಗುಡುಗು!ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಜುಲೈ-1 ರಿಂದಲೇ ಮನೆ-ಮನೆಗೆ ಬರಲಿದ್ದಾರೆ ಎಸ್ಕಾಂ ಸಿಬ್ಬಂದಿ!ಬೆಂಗಳೂರಿನಲ್ಲಿ 'ಸುರಕ್ಷಿತ ಪಾದಚಾರಿ ಮಾರ್ಗ' ಬೃಹತ್ ಕಾರ್ಯಾಚರಣೆ ಆರಂಭ!ನಾನು ಮಾಜಿ ಸಿಎಂ; ಸಿದ್ದರಾಮಯ್ಯ ಮಾರ್ಮಿಕ ನುಡಿ!ಬಿಜೆಪಿ ಅಧಿಕಾರಕ್ಕೆ ಬಂದರೆ ಹುಂಡಿ ಹಣ ಕಳ್ಳರಿದ್ದಾರೆ ಎಂದು ಬೋರ್ಡ್ ಹಾಕಬೇಕಾಗುತ್ತದೆ: ಹರಿಪ್ರಸಾದ್ ತೀಕ್ಷ್ಣ ವ್ಯಂಗ್ಯ!