Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಲವು ರೈಲುಗಳು ಸಂಪೂರ್ಣ ರದ್ದು

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025ರ ಸೆಪ್ಟೆಂಬರ್-03 ರಂದು ಹಲವು ರೈಲುಗಳ ತಾತ್ಕಾಲಿಕ ರದ್ದು / ಭಾಗಶಃ ರದ್ದು / ನಿಯಂತ್ರಣ ಆಗಲಿವೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

ಬ್ಯಾಡಗಿ ಮತ್ತು ತೋರಣಗಲ್ಲು ಯಾರ್ಡುಗಳಲ್ಲಿ ತಿಕ್ ವೆಬ್ ಸ್ವಿಚ್ ಗಳ ಬದಲಾವಣೆ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಸೆ-3 ರಂದು ರೈಲುಗಳು ಸಂಪೂರ್ಣ ರದ್ದು / ಭಾಗಶಃ ರದ್ದು / ನಿಯಂತ್ರಿಸಲ್ಪಡುತ್ತವೆ ಎಂದು ತಿಳಿಸಿದ್ದಾರೆ.

ಸೆ-03ರಂದು ಸಂಪೂರ್ಣ ರದ್ದುಗೊಂಡ ರೈಲುಗಳು-
1. ರೈಲು ಸಂಖ್ಯೆ. 57415 ಗುಂಟಕಲ್ ಚಿಕ್ಕಜಾಜೂರು ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು. 2. ರೈಲು ಸಂಖ್ಯೆ. 57416 ಚಿಕ್ಕಜಾಜೂರು ಗುಂಟಕಲ್ ದೈನಂದಿನ ಪ್ಯಾಸೆಂಜರ್ ಸಂಪೂರ್ಣ ರದ್ದು. 3. ರೈಲು ಸಂಖ್ಯೆ. 07397 ಹೊಸಪೇಟೆ ಬಳ್ಳಾರಿ ಡೆಮು ಸಂಪೂರ್ಣ ರದ್ದು.

ಭಾಗಶಃ ರದ್ದುಗೊಂಡ ರೈಲುಗಳು-
1.ರೈಲು ಸಂಖ್ಯೆ. 07395 ಬಳ್ಳಾರಿ ದಾವಣಗೆರೆ ಡೆಮು ಬಳ್ಳಾರಿ ಹೊಸಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಹೊಸಪೇಟೆಯಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
2. ರೈಲು ಸಂಖ್ಯೆ. 57406 ಕದಿರಿದೇವರಪಳ್ಳಿ ತಿರುಪತಿ ಪ್ಯಾಸೆಂಜರ್ ಕದಿರಿದೇವರಪಳ್ಳಿ ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್ ನಿಂದ ನಿಗದಿತ ಸಮಯದಲ್ಲಿ ಹೊರಡುತ್ತದೆ.

  1. ರೈಲು ಸಂಖ್ಯೆ. 56911 ಎಸ್ಎಸ್ಎಸ್ ಹಬ್ಬಳ್ಳಿ ಗುಂಟಕಲ್ ಪ್ಯಾಸೆಂಜರ್ ಮುನಿರಾಬಾದ್ ಗುಂಟಕಲ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
    4. ರೈಲು ಸಂಖ್ಯೆ. 56912 ಗುಂಟಕಲ್ ಎಸ್ಎಸ್ಎಸ್ ಹಬ್ಬಳ್ಳಿ ಪ್ಯಾಸೆಂಜರ್ ಗುಂಟಕಲ್ ಮುನಿರಾಬಾದ್ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಮುನಿರಾಬಾದ್‌ನಿಂದ ತನ್ನ ನಿಗದಿತ ಸಮಯದಲ್ಲಿ ಹೊರಡುತ್ತದೆ.
    5. 02.09.2025ರಂದು ರೈಲು ಸಂಖ್ಯೆ. 57405 ತಿರುಪತಿ ಕದಿರಿದೇವರಪಳ್ಳಿ ಪ್ಯಾಸೆಂಜರ್ ಗುಂಟಕಲ್ ಕದಿರಿದೇವರಪಳ್ಳಿ ನಡುವೆ ಭಾಗಶಃ ರದ್ದುಗೊಳ್ಳಲಿದ್ದು, ಈ ರೈಲು ಗುಂಟಕಲ್‍ನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.


ರೈಲು ನಿಯಂತ್ರಣೆ-
ಸೆ-
03 ರಂದು ರೈಲು ಸಂ. 57402 ಎಸ್ಎಸ್ಎಸ್ ಹುಬ್ಬಳ್ಳಿ ತಿರುಪತಿ ಪ್ಯಾಸೆಂಜರ್ ಮಾರ್ಗಮಧ್ಯೆ 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ