ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಪದವಿ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ನಾಡಪ್ರಭು ಬೆಂಗಳೂರು ನಿಮ್ರಾತ್ತೃ ಕೆಂಪೇಗೌಡ ರವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಂಪೇಗೌಡ ರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳು ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ವಿಶ್ವಾಸ್ ಹನುಮಂತೇಗೌಡ ರವರು ಮಾತನಾಡಿ ನಾಡಪ್ರಭು ಕೆಂಪೇಗೌಡರವರು ದೂರದೃಷ್ಟಿ ವುಳ್ಳ ಸಾಮಂತ ರಾಜರಾಗಿದ್ದರು. ಅವರು ಎಲ್ಲಾ ಜಾತಿ ಜನಾಂಗದರಿಗೂ ಸಮಾನ ಅವಕಾಶವನ್ನು ನೀಡಿದ್ದ ಮಹಾನ್ ನಾಯಕರಾಗಿದ್ದರು. ಅವರ ಆಡಳಿತ ಮಾದರಿ ಆಡಳಿತವಾಗಿತ್ತು ಎಂದರು.
ಪ್ರಾಂಶುಪಾಲ ಎಂ ಸಿ ಮಂಜುನಾಥ್ ಮಾತನಾಡಿ 15 ನೇ ಶತಮಾನದಲ್ಲಿ ಅವರು ಕೖಗೊಂಡ ದರ್ಮ ಕಾರ್ಯಗಳು ಜನರ ಬಗ್ಗೆ ಇದ್ದ ಅಪಾರ ಕಾಳಜಿ ಕೆಂಪೇಗೌಡರ ವ್ಯಕ್ತಿತ್ವಕ್ಕೆ ಒಂದು ಸಾಕ್ಷಿಯಾಗಿತ್ತು. ಬೆಂಗಳೂರು ಜನರಿಗೆ ನೀರಿನ ಸಮಸ್ಯೆಯಾಗಬಾರದು ಎಂದು ಒಂದು ಸಾವಿರ ಕೆರೆ ಕುಂಟೆ ಗಳನ್ನು ನಿರ್ಮಾಣ ಮಾಡಿದ್ದರು.
ಬೆಂಗಳೂರು ಬೃಹದಾಕಾರವಾಗಿ ಬೆಳೆಯಬಾರದೆಂದು ನಾಲ್ಕು ದಿಕ್ಕುಗಳಿಗೂ ಗೋಪುರಗಳನ್ನು ನಿರ್ಮಾಣ ಮಾಡಿದ್ದರು ಎಂದು ಹೇಳಿದರು. ಬಿಎಡ್ ಕಾಲೇಜು ಪ್ರಾಂಶುಪಾಲರಾದ ಕೃಷ್ಣಮೂರ್ತಿ ರವರು ಮಾತನಾಡಿದರು ಕಾರ್ಯಕ್ರಮದಲ್ಲಿ ಪಿಯು ಕಾಲೇಜು ಬಿಎಡ್ ಕಾಲೇಜು ಪ್ರಶಿಕ್ಷಣಾರ್ತಿಗಳು ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿವರ್ಗ ಬಾಗವಹಿಸಿದ್ದರು.



