ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ಅಂಚೆ ಇಲಾಖೆಯು DHAI AKHAR ಅಭಿಯಾನದಡಿ ರಾಷ್ಟ್ರಮಟ್ಟದ ಪತ್ರ ಬರವಣಿಗೆ ಸ್ಪರ್ಧೆಯನ್ನು ಆಯೋಜಿಸಿದೆ.
ಆಗಸ್ಟ್ 1 ರಿಂದ ಅಕ್ಟೋಬರ್ 31ರವರೆಗೆ ಈ ಸ್ಪರ್ಧೆ ನಡೆಯಲಿದ್ದು, ‘ಪ್ರಕೃತಿಯನ್ನು ರಕ್ಷಿಸುವುದು ನನ್ನ ಭರವಸೆ: ಭೂತಾಯಿಗೆ ಒಂದು ಪತ್ರ’ (A letter to Mother Earth: My Promise to Protect Nature) ಎಂಬ ವಿಷಯದ ಮೇಲೆ ಪತ್ರ ಬರೆಯಬೇಕಾಗಿದೆ.
ಈ ಸ್ಪರ್ಧೆಯನ್ನು 18 ವರ್ಷದೊಳಗಿನವರು ಹಾಗೂ 18 ವರ್ಷ ಮೇಲ್ಪಟ್ಟವರು ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವವರು
ಇನ್ಲ್ಯಾಂಡ್ ಲೆಟರ್ ಕಾರ್ಡ್ನಜಲ್ಲಿ ಗರಿಷ್ಠ 500 ಪದಗಳು ಅಥವಾ ಲಕೋಟೆ (ಎನ್ವಲಲಪ್ ಕವರ್) ಬಳಸಿ ಗರಿಷ್ಠ 1,000 ಪದಗಳಿಗೆ ಮಿರದಂತೆ ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾμÉಯಲ್ಲಿ ಪತ್ರ ಬರೆಯಬಹುದು.
ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ರೂ.25,000, ದ್ವಿತೀಯ ರೂ.10,000 ಹಾಗೂ ತೃತೀಯ ರೂ.5,000 ಬಹುಮಾನ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಪ್ರಥಮ ರೂ.50,000, ದ್ವಿತೀಯ ರೂ.25,000 ಹಾಗೂ ತೃತೀಯ ರೂ.10,000 ನಗದು ಬಹುಮಾನ ಇರಲಿದೆ.
ಆಸಕ್ತರು ತಮ್ಮ ಪತ್ರಗಳನ್ನು ಅಂಚೆ ಅಧೀಕ್ಷಕರು, ಚಿತ್ರದುರ್ಗ ಅಂಚೆ ವಿಭಾಗ, ಚಿತ್ರದುರ್ಗ - 577501' ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಚಿತ್ರದುರ್ಗ ಅಂಚೆ ವಿಭಾಗದ ಅಂಚೆ ಅಧೀಕ್ಷಕಿ ಕೆ.ಆರ್.ಉಷಾ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಕಚೇರಿ ಸಹಾಯಕ ಸಂತೋಷ್ ಅವರ ಮೊಬೈಲ್ 9164243697 ಗೆ ಸಂಪರ್ಕಿಸಬಹುದು ಪ್ರಕಟಣೆ ತಿಳಿಸಿದೆ.




